“ಈ ದಿನ.ಕಾಮ್ ದುಡಿವ ಜನರಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದೆ. ಸುಳ್ಳು ಹೇಳುವವರಿಗೆ ಯಾವ ರೀತಿ ಉತ್ತರ ಕೊಡಬೇಕು. ಸತ್ಯವನ್ನು ಹೇಗೆ ಬಟಾಬಯಲು ಮಾಡಬೇಕು ಎಂಬುದನ್ನು ಈದಿನ.ಕಾಮ್ ತೋರಿಸಿದೆ” ಎಂದು ದಸಂಸ ಮುಖಂಡ ಮರಿಯಪ್ಪಹಳ್ಳಿ ಹೇಳಿದರು.
ಕಲಬುರಗಿಯಲ್ಲಿ ನಡೆದ ಈದಿನ.ಕಾಮ್ನ ‘ಓದುಗರ ಸಮಾವೇಶ’ದಲ್ಲಿ ಮೊದಲ ಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
“ಹಲವು ವರ್ಷಗಳಿಂದ ಮಾಧ್ಯಮಗಳು ಮಾಡದೇ ಇರುವ ಜನಪರ ಕೆಲಸಗಳನ್ನು ಕೆಲ ವರ್ಷಗಳಲ್ಲಿಯೇ ಈದಿನ.ಕಾಮ್ ಮಾಡಿದೆ. ಸಂಸ್ಥೆ ಮಾಡಿದ ವರದಿಯ ಫಲವಾಗಿ ಗ್ರಾಮೀಣ ಭಾಗದಲ್ಲಿ ಜನರ ಹಲವಾರು ರೀತಿಯ ಸಮಸ್ಯೆಗಳು ಬಗೆಹರಿದಿವೆ. ಮೂಲ ಸೌಕರ್ಯಗಳು ಗ್ರಾಮೀಣ ಭಾಗವನ್ನು ತಲುಪುವಂತಾಗಿದೆ. ಹಳ್ಳಿಯ ದನಿ ಆಳುವವರಿಗೆ ತಲುಪುವಂತೆ ಮಾಡಿದೆ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಮೇಲೆ ಜನರ ನಂಬಿಕೆ ಮೂಡಿದೆ: ಶಾಸಕ ಬಿ.ಆರ್ ಪಾಟೀಲ್
“ಈದಿನ.ಕಾಮ್ ರೀತಿಯ ಸಂಸ್ಥೆಯನ್ನು ಜನರು ಬೆಂಬಲಿಸಬೇಕು. ಬೆಳಸಬೇಕು. ಈದಿನ.ಕಾಮ್ ಬೆಳೆದರೆ, ಜನರ ದನಿ ಉಳಿಯುತ್ತದೆ. ಜನರೇ ಜನರ ದನಿಯಾಗಲು ಸಾಧ್ಯವಾಗುತ್ತದೆ” ಎಂದರು.





