‘ಮಹಿಳೆಯರಿಗೆ ನ್ಯಾಯ ಕೊಡಿ, ಸಂವಿಧಾನ ಧರ್ಮ ಪಾಲಿಸಿʼ- ಬೆಳ್ತಂಗಡಿಯಲ್ಲಿ ಮೊಳಗಿದ ಒಕ್ಕೊರಲ ಧ್ವನಿ

Date:

ಬೆಳ್ತಂಗಡಿ : ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಯುವತಿಯರ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ‘ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ ಮಹಿಳಾ ನ್ಯಾಯ ಸಮಾವೇಶ ಇಲ್ಲಿನ ಮಾರಿಗುಡಿ ಸಮೀಪದಿಂದ ತಾಲ್ಲೂಕು ಕಚೇರಿವರೆಗೆ ಕಪ್ಪು ಬಟ್ಟೆ ಧರಿಸಿ ಮೌನ ಮೆರವಣಿಗೆ ಮೂಲಕ ಚಾಲನೆ ಪಡೆಯಿತು.

ಧರ್ಮಸ್ಥಳದ ವೇದವಲ್ಲಿ, ಪದ್ಮಲತಾ, ಯಮುನಾ, ಸೌಜನ್ಯ ಕೊಲೆಗಾರರ ಪತ್ತೆಗೆ ಆಗ್ರಹಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ದುಡಿ ವಾದನ ತಂಡದ ಸಾಥ್‌ನೊಂದಿಗೆ ಸಮಾವೇಶ ಕಳೆಗಟ್ಟಿತ್ತು.

ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, ಕೊಂದವರು ತಮ್ಮ ಮೈ ಮುಟ್ಟಿ ನೋಡಿಕೊಳ್ಳಬೇಕು. ಸರಕಾರಕ್ಕೆ ಕೊಂದವರನ್ನು ಹುಡುಕಲು ಸಾಧ್ಯ ಇಲ್ಲವೇ? ಎಸ್ ಐ ಟಿ ಮಾಡಿದ್ದೇನು? ಅಪರಾಧಿಗಳು ಎಂದು ಜೈಲಿಗೆ ಹೋದವರು ನಿರಪರಾಧಿಗಳು ಎಂದು ನ್ಯಾಯಾಲಯ ಹೇಳಿದೆ. ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಇಂದು ಸಮಾವೇಶ ಸೂಕ್ತ ಉತ್ತರ ಕೊಡಲಿದೆ. ವಿ. ಎಸ್. ಉಗ್ರಪ್ಪ ವರದಿ ಜಾರಿಯಾಗಬೇಕು. SIT ರಚನೆಯದಾಗ ಇಲ್ಲಿನ ಸಮಗ್ರ ಕೊಲೆ-ಅತ್ಯಾಚಾರ ಪ್ರಕರಣಗಳ ತನಿಖೆ ಆಗಬೇಕು ಎಂದು ಹೇಳಲಾಗಿತ್ತು. ಆದರೀಗ ಹಾಗಾಗಿಲ್ಲ. ದಿಕ್ಕು ತಪ್ಪಿದೆ, ಸಮಗ್ರ ತನಿಖೆ ಆಗಬೇಕು” ಎಂದು ಆಗ್ರಹಿಸಿದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಬಿ. ಎಂ. ರೋಹಿಣಿ ಮಾತನಾಡಿ, “ಹೆಣ್ಣುಮಕ್ಕಳು ಯಾವತ್ತೂ ಹಿಂದೆ ಸರಿದಿಲ್ಲ. ಅದಕ್ಕೆ ಇತಿಹಾಸದಲ್ಲಿ ರಾಣಿ ಅಬ್ಬಕ್ಕ ಉದಾಹರಣೆ ಆಗಿದ್ದಾಳೆ. ಹಿಂದೆ ಜನರು ಹೇಳುತ್ತಿದ್ದ ಹಾಗೆ ನಾವು ಬಳೆ ತೊಟ್ಟು ಕುಳಿತಿಲ್ಲ. ನಾವು ನ್ಯಾಯಕ್ಕೆ ಹೋರಾಡುವುದು ಅನಿವಾರ್ಯ ಆಗಿದೆ, ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಕಿವಿ, ನಾಲಿಗೆ ಕೆಲಸ ಮಾಡುವುದಿಲ್ಲವೇ” ಎಂದು ಪ್ರಶ್ನಿಸಿದರು.

ಹೋರಾಟಗಾರ್ತಿ, ವಿ. ಎಸ್. ಉಗ್ರಪ್ಪ ಸಮಿತಿ ಸದಸ್ಯೆಯಾಗಿದ್ದ ಜ್ಯೋತಿ ಎ ಮಾತನಾಡಿ, “ಈ ಭಾಗದಲ್ಲಿ ಹೆಣ್ಣುಮಕ್ಕಳು ಇಷ್ಟೊಂದು ಕೊಲೆ ಆಗುವಾಗ ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ? ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ? ದೂರು ಯಾಕೆ ಸ್ವೀಕರಿಸುತ್ತಿಲ್ಲ. ದೂರು ಸ್ವೀಕರಿಸಿ, ಶಂಕಿತ ಆರೋಪಿಯ ತನಿಖೆ ನಡೆಸಬೇಕು” ಎಂದರು.

who killed 1 2

ಉಗ್ರಪ್ಪ ಸಮಿತಿ ಅಸಹಜ ಸಾವುಗಳ ಬಗ್ಗೆ ತನಿಖೆ ಆಗಬೇಕು ಎಂದು ಶಿಫಾರಸ್ಸು ಮಾಡಿತ್ತು. ಅದು ಆಗಿಲ್ಲ. ಈಗ SIT ಅದನ್ನು ಮಾಡಬೇಕು ಎಂದು ಅವರು ಒತ್ತಾಯಿದರು.

ರೈತ ಹೋರಾಟ ನಾಯಕಿ ಅನಸೂಯಮ್ಮ, “ಇತ್ತೀಚೆಗೆ ಸಂವಿಧಾನ ದಿನ ಆಚರಿಸಲಾಯಿತು. ಆದರೆ ಸಂವಿಧಾನದತ್ತ ಹಕ್ಕುಗಳು ಮಹಿಳೆಯರಿಗೆ ಸಿಕ್ಕಿಲ್ಲ. ಸಮಾನ ಹಕ್ಕು ಮಹಿಳೆಯರಿಗೆ ಸಿಕ್ಕಿಲ್ಲ. ಅಂಬೇಡ್ಕರ್ ಸಂವಿಧಾನ ಮಾಡುವಾಗ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದಾರೆ. ಆದರೆ ಆ ಮನೋಭಾವನೆ ಹೋಗಿಲ್ಲ. ತೊಟ್ಟಿಲು ತೂಗುವ ಕೈಗಳು ಇಂದು ದೇಶವನ್ನು ಅಳುವ ಮಟ್ಟಕ್ಕೆ ಏರಿವೆ. ಮಹಿಳೆಯರಿಗೆ ನ್ಯಾಯ ಸಿಗಲಿ. ಪೊಲೀಸ್ ಸರಿಯಾದ ರೀತಿ ರಕ್ಷಣೆಕೊಡಬೇಕು. ಇಲ್ಲಿನ ಮಹಿಳೆಯರಿಗೆ ಇಲ್ಲಿನ ದೇವತೆಗಳಾದ ದುರ್ಗಿ, ದೇವಿಯರು ಆದರ್ಶ ಆಗಬೇಕು. ನಾವು ಇಂದು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ” ಎಂದರು.

ಸೌಜನ್ಯ ಸಹೋದರಿ ಸೌoದರ್ಯ ಮಾತನಾಡಿ, “ನನ್ನ ಅಕ್ಕನ ಕೊಲೆ ಬಳಿಕ ಇಲ್ಲಿನ ಪರಿಸರದಲ್ಲಿ ಕೊಲೆ, ಅತ್ಯಾಚಾರ ನಡೆದಿಲ್ಲ. ಇದಕ್ಕೆ ಜನತೆ ನ್ಯಾಯಕ್ಕೆ ಬೇಡಿಕೆ ಇಟ್ಟು ಸಹಕಾರ, ಹೋರಾಟ ಮಾಡಿದ್ದೇ ಕಾರಣವಾಗಿದೆ” ಎಂದರು.

ಹೋರಾಟಗಾರ್ತಿ ಪ್ರಸನ್ನರವಿ ಮಾತನಾಡಿ, “ನಮ್ಮ ರಾಜಕಾರಣಿಗಳು ಸದನದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಗ್ಗೆ ಒಂದಿಷ್ಟು ಮಾತನಾಡಿಲ್ಲ. ಇದೇ ಜಿಲ್ಲೆಯ ಶಾಸಕರಾದ ಭಾಗೀರಥಿ ಮುರುಳ್ಯ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಮಾತನಾಡಿಲ್ಲ. ಆಕೆ ಮಹಿಳೆಯಾಗಿರಲು ನಾಚಿಕೆ ಪಡಬೇಕು” ಎಂದರು.

ನಿರ್ಭಯ ಅತ್ಯಾಚಾರ-ಕೊಲೆ ಆದಾಗ ಕಾನೂನು ಬದಲಾವಣೆ ಆಗಿದೆ. ದೂರು ಕೊಡಲು ಹೋದ ಒಂದು ಹೆಣ್ಣನ್ನು ಪೊಲೀಸರು ಅರೆ ನಗ್ನ ಸ್ಥಿತಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ನಮ್ಮ ಸರಕಾರ ಕೂಡಾ ಈ ದಿನದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬರಹಗಾರ್ತಿ ಡಾ. ಸುನಂದಮ್ಮ ಮಾತನಾಡಿ, “ನಾವೆಲ್ಲ ಸಂವಿಧಾನದ ಮೂಲಕ ಹಕ್ಕುಗಳನ್ನು ಹೊಂದಿದ್ದೇವೆ. ಆದರೆ ಮನುಸ್ಮೃತಿಯಿಂದ ಹೊರಗಡೆ ಬಂದಿಲ್ಲ. ನಾವು ಇಂದು ನ್ಯಾಯಕ್ಕೆ ಬೇಕಾಗಿ ಹೋರಾಟ ಮಾಡಬೇಕಾಗಿದೆ. ನಮ್ಮ ಹೋರಾಟದಿಂದ ನೊಂದ ಕುಟುಂಬಗಳಿಗೆ ನ್ಯಾಯ ಸಿಗಬಹುದು” ಎಂದು ಆಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೋರಾಟಗಾರ್ತಿ ಶಶಿಕಲಾ ಶೆಟ್ಟಿ, “ಇಂದಿನ ಸಮಾವೇಶಕ್ಕೆ ಸಿಕ್ಕಿರುವ ಬೆಂಬಲ ಒಂದು ಕ್ರಾಂತಿಯಾಗಿದೆ. ಇಲ್ಲಿ ಸಾವಿರಾರು ಜನ ಸೇರಿರುವುದು ಇದಕ್ಕೆ ಸಾಕ್ಷಿ. ಇಲ್ಲಿ ಅತ್ಯಾಚಾರ, ಕೊಲೆಗೆ ಒಳಗಾದ ನೊಂದ ಜೀವಗಳಿಗೆ ನ್ಯಾಯ ಸಿಗಬೇಕಿದೆ. ಬರ್ಬರ ಕೊಲೆಗಳನ್ನು ಮಾಡಿದವರು ಯಾರು ಎಂದು ಗೊತ್ತಾಗಲೇ ಬೇಕಿದೆ. ಸಿಬಿಐ ತನಿಖೆಯಲ್ಲಿ ಸಂತೋಷ ರಾವ್ ಆರೋಪಿ ಅಲ್ಲ ಎಂದು ಸಾಬೀತು ಆದಾಗ, ಆತನ ಬಂಧಿಸಿದ ಅಧಿಕಾರಿಗಳ ತನಿಖೆಗೆ ಅಕ್ವಿಟಲ್ ಕಮಿಟಿ ರಚನೆ ಆಗಬೇಕು ಎಂದು ಆದೇಶ ಇದ್ದರೂ ರಚನೆ ಆಗಿಲ್ಲ, ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ರಂಗ ಕಲಾವಿದೆ ದು. ಸರಸ್ವತಿ ಅವರು ನಾಟಕದ ಮೂಲಕ ಧರ್ಮಸ್ಥಳದ ಘಟನೆಗಳ ಭಾವನಾತ್ಮಕ ಚಿತ್ರಣ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...