ಬೆಳಗಾವಿ ಅಧಿವೇಶನ | ರೈತರ ಬಗ್ಗೆ ಕಟುಕರ ರೀತಿ ವರ್ತಿಸಿದ ಸರ್ಕಾರ: ಆರ್ ಅಶೋಕ‌ ಟೀಕೆ

Date:

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕರಾಗಿರುವ ಆರ್‌ ಅಶೋಕ್‌ ಅವರು ಸುದೀರ್ಘ ಎರಡು ಗಂಟೆಗಳ ಕಾಲ ರಾಜ್ಯದ ಬರಗಾಲ ವಿಚಾರವಾಗಿ ಮಾತನಾಡುತ್ತ, ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸುವ ಪ್ರಯತ್ನ ಮಾಡಿದರು.

16ನೇ ವಿಧಾನಸಭೆಯ ಎರಡನೇ ಅಧಿವೇಶನದ ಎರಡನೆಯ ದಿನವಾದ ಮಂಗಳವಾರ ನಡೆದ ಮಧ್ಯಾಹ್ನದ ಕಲಾಪದಲ್ಲಿ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಬರಗಾಲ ವಿಚಾರವನ್ನು ಚರ್ಚೆಗೆ ಎತ್ತಿಕೊಂಡು ಪ್ರತಿಪಕ್ಷ ನಾಯಕ ಆರ್‌ ಅಶೋಕ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

“223 ತಾಲ್ಲೂಕುಗಳಲ್ಲಿ ಬರ ಇದ್ದು, ಬಹುತೇಕ ಕರ್ನಾಟಕ ಬರಗಾಲಕ್ಕೆ ಸಿಲುಕಿದೆ. ಮುಂಗಾರು ಕೈಕೊಟ್ಟಿದ್ದರಿಂದ ರೈತ ಬೆಳೆದ ಬೆಳೆ ಕೈಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರ ಅನ್ನದಾತರ ವಿಷಯದಲ್ಲಿ ಕಟುಕರ ರೀತಿ ನಡೆದುಕೊಂಡಿದೆ” ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಜ್ಯ ಸರ್ಕಾರ ಬರಗಾಲದಲ್ಲಿ ಮಾಡಬೇಕಾದ ಕೆಲಸ ಮಾಡಲಿಲ್ಲ. ಸಂಪೂರ್ಣವಾಗಿ ವಿಫಲವಾಗಿದೆ. ಪ್ರತಿ ದಿನ ಮೊಸಳೆ ಕಣ್ಣೀರು ಹಾಕಿದೆ. ಜೂನ್‌ ನಿಂದ ಕಾಯುತ್ತ ಕುಳಿತೆವು. ಕೊನೆಗೆ ಸೆಪ್ಟೆಂಬರ್‌ 13ಕ್ಕೆ ಬರಗಾಲದ ಮೊದಲ ಪಟ್ಟಿ ಬಿಡುಗಡೆ ಮಾಡಿತು. ಇದರ ಅರ್ಥ, ಉದ್ದೇಶಪೂರ್ವಕವಾಗಿ ಮುಂದೆ ಹಾಕಿದೆ” ಎಂದು ತರಾಟೆಗೆ ತಗೆದುಕೊಂಡರು.

ಇಡೀ ರಾಜ್ಯದ ಜನತೆ ಕಾಂಗ್ರೆಸ್‌ ಕೈಯಲ್ಲಿ ಖಜಾನೆ ಕೊಟ್ಟಿದೆ. ಆಡಳಿತ ಪಕ್ಷದವರು ಹೇಗರಬೇಕು? ಅನ್ನದಾತರ ಬಗ್ಗೆ ಕೇವಲ ಭಾಷಣ ಮಾಡಲಾಗುತ್ತಿದೆ. ಅವರ ಸಂಕಷ್ಟಕ್ಕೆ ಮಿಡಿಯಬೇಕು. ಆಡಳಿತ ಪಕ್ಷಕ್ಕೆ ತಾಯಿಯ ಹೃದಯ ಇರಬೇಕಿತ್ತು. ಆದರೆ, ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಹರಿಹಾಯ್ದರು.

H K patil

“ಅಧಿವೇಶನ ನಡೆಯುತ್ತಿದೆ, ಪ್ರತಿಪಕ್ಷದವರು ತರಾಟೆಗೆ ತಗೆದುಕೊಳ್ಳುತ್ತಾರೆ ಎಂದು ಮೊನ್ನೆ 2000 ಬೆಳೆ ಪರಿಹಾರ ಘೋಷಣೆ ಆಗಿದೆ. ನಮ್ಮ ರೈತರೇನು ಭಿಕ್ಷೆ ಬೇಡುತ್ತಿದ್ದಾರಾ? ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿದೀರಿ. ಎಷ್ಟು ಕೋಟಿ ಎಂಬದು ಸರ್ಕಾರವೇ ಹೇಳಬೇಕು. ನಮ್ಮ ಜಾಹೀರಾತು ಅವರಿಗೇನು ಉಪಯೋಗ? ಕರ್ನಾಟಕದ ದುಡ್ಡು ಅಲ್ಲಿ ಮಜಾ ಮಾಡಲು ಕೊಟ್ಟಂಗೆ ಆಗಿದೆ” ಎಂದು ಟೀಕಿಸಿದರು.

ಕರ್ನಾಟಕ ಜನ ಒಂದು ಮನುಷ್ಯನ ಜೀವಿತಾವಧಿಯನ್ನೆ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಕೊಟ್ಟಿದೆ. ಆದರೂ ಇವತ್ತೂ ಗೂಳೆ ಹೋಗುವುದು ತಪ್ಪಿಲ್ಲ. ಪ್ರತಿ ಬರಗಾಲದಲ್ಲಿ ಇದು ನಡೆಯುತ್ತಿದೆ. ಇಷ್ಟು ವರ್ಷದಲ್ಲಿ ಎಂದಾದರೂ ಇದಕ್ಕೆ ಶಾಶ್ವತ ಪರಿಹಾರ ಹುಡುಕಿದ್ದೀರಾ” ಎಂದು ಪ್ರಶ್ನಿಸಿದರು.

ತಪ್ಪು ಮಾಹಿತಿ ಕೊಡಬೇಡಿ: ಎಚ್ ಕೆ ಪಾಟೀಲ

ಕಾನೂನು ಸಚಿವ ಎಚ್‌ ಕೆ ಪಾಟೀಲ ಮಧ್ಯ ಪ್ರವೇಶಿಸಿ, “ಈ ಮಾತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾತನಾಡಲು ಚೆಂದ. ತಪ್ಪು ಮಾಹಿತಿ ಕೊಡಬೇಡಿ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇದೆ” ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಎಚ್‌ ಕೆ ಪಾಟೀಲ ಮಾತಿಗೆ ಧ್ವನಿಗೂಡಿಸಿ, “ಮನರೇಗಾ ಯೋಜನೆ ಸರಿಯಾಗಿ ನಡೆಯುತ್ತಿಲ್ಲ ಅಂದ್ರೆ ಕೇಂದ್ರ ಸರ್ಕಾರ ಬಂದು ಮಾಡಲಿ. ಮಿನಿಮಮ್‌ ವೇಜಸ್‌ ಹೆಚ್ಚು ಮಾಡಿ ಕರ್ನಾಟಕದಲ್ಲಿ ಜಾರಿ ಮಾಡಿದ್ದೇವೆ. ವರ್ಷಕ್ಕೆ 60-70 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಸುಮ್ಮನೇ ಮಾತನಾಡುವುದಲ್ಲ” ಎಂದರು.

ರಾಯರೆಡ್ಡಿ

ಆರ್‌ ಅಶೋಕರ ಅರ್ಧ ಕಾಲು ಸರ್ಕಾರದಲ್ಲಿದೆ: ರಾಯರೆಡ್ಡಿ

ಆರ್‌ ಅಶೋಕ ಅವರ ಭಾಷಣದ ನಡುವೆ ಶಾಸಕ ಬಸವರಾಜ ರಾಯರೆಡ್ಡಿ ಎದ್ದು ನಿಂತು, “ಆರ್‌ ಅಶೋಕ ಅವರು ವಿರೋಧ ಪಕ್ಷದ ನಾಯಕರಂತೆ ಮಾತನಾಡುತ್ತಿಲ್ಲ. ಬಹಳ ಮೃಧುವಾಗಿ ಅರ್ಧಕಾಲು ಸರ್ಕಾರದಲ್ಲಿ ಇಟ್ಟು ಮಾತನಾಡಿದಂತಿದೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ದೊಡ್ಡ ಬೆಲೆ ಇದೆ. ಅದಕ್ಕೆ ಶಕ್ತಿ ತುಂಬಿ ಮಾತನಾಡಿ” ಎಂದು ಪ್ರೇರೇಪಿಸಿದರು.

ರಾಯರೆಡ್ಡಿ ಮಾತನ್ನು ಆರ್‌ ಅಶೋಕ ನಗುತ್ತಲೇ ಸ್ವೀಕರಿಸಿ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಎಂದರು. ಆರ್‌ ಅಶೋಕ ಅವರು ಮಾತನಾಡುತ್ತಿರುವಾಗ ಮಧ್ಯೆ ಮಧ್ಯೆ ಬಿಜೆಪಿ ಶಾಸಕರು ಎದ್ದು ನಿಂತು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ, “ನನ್ನ ಆತ್ಮೀಯ ಗೆಳೆಯ ಆರ್‌ ಅಶೋಕ ಅವರು ವಿಪಕ್ಷ ನಾಯಕ ಆಗಿರುವುದಕ್ಕೆ ಬಿಜೆಪಿ ನಾಯಕರಲ್ಲಿ ಅಸಮಾಧಾನವಿದೆ. ಹೀಗಾಗಿ ಅವರ ಮಾತಿನ ಗಂಭೀರತೆ ಕಳೆಯಲು ಬಿಜೆಪಿ ಶಾಸಕರು ಪ್ರಯತ್ನಿಸುತ್ತಿದ್ದಾರೆ” ಎಂದು ಛೇಡಿಸಿದರು. “ನನ್ನ ಗೆಳೆಯ ಸವದಿ ಅವರ ಎಚ್ಚರಿಕೆ ಮಾತುಗಳಿಗೆ ಧನ್ಯವಾದ” ಎಂದು ಅಶೋಕ ತಿಳಿಸಿದರು.

ಆರ್‌ ಅಶೋಕ ಅವರ ಭಾಷಣ ಎರಡು ಗಂಟೆ ಆಗುತ್ತಿದ್ದಂತೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿ, “6 ಗಂಟೆ ಆಯ್ತು. ಹೀಗೆ ಎಷ್ಟು ಅಂತ ಕುಳಿತುಕೊಳ್ಳೋಣ. ಮೊದಲ ಬಾರಿಗೆ ಆರ್‌ ಅಶೋಕ ಅವರು ಮಾತನಾಡುತ್ತಿದ್ದಾರೆ. ಅವರಿಗೆ ನಾಳೆಗೆ ಅವಕಾಶ ಮಾಡಿಕೊಟ್ಟು, ಇಂದಿನ ಸದನ ಮುಗಿಸಿ” ಎಂದು ವಿನಂತಿಸಿದರು. ಸಭಾಧ್ಯಕ್ಷರು ಬುಧವಾರಕ್ಕೆ ಸದನ ಮುಂದೂಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...