ಪ್ರತಿ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತೆ, ಈದಿನ.ಕಾಮ್ ಸಂಸ್ಥೆಯ ಭಾಗವಾಗಿರುವ ಹೇಮಾ ವೆಂಕಟ್, ಪ್ರಾಧ್ಯಾಪಕ ಪೂರ್ಣಾನಂದ, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಪತ್ರಕರ್ತ ಸೋಮಶೇಖರ್ ಪಡುಕೆರೆ ಹಾಗೂ ಚಿಂತಕ, ಬರಹಗಾರ ಎ ನಾರಾಯಣ್ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ.
ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಣೆ ಹೊರಡಿಸಿದೆ. “ಜನವರಿ 8ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದೆ.
ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ 30 ಪತ್ರಕರ್ತರು, ವಿವಿಧ ದತ್ತಿ ಪ್ರಶಸ್ತಿಗಳಿಗೆ 10 ಮಂದಿ ಚಿಂತಕರು, ಬರಹಗಾರರು ಹಾಗೂ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಕಾಡೆಮಿ ಮತ್ತು ದತ್ತಿ ಪ್ರಶಸ್ತಿಗಳು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಹೀಗಿದೆ:
- ಡಿ ಕುಮಾರಸ್ವಾಮಿ
- ಬನಶಂಕರ ಆರಾಧ್ಯ
- ಹೇಮಾ ವೆಂಕಟ್
- ಮಂಜುನಾಥ್ ವೈ ಎಲ್
- ಅನಂತ ನಾಡಿಗ್
- ಗುರುರಾಜ್ ವಾಮನರಾವ್ ಜಮಖಂಡಿ
- ಎಂ.ಎಂ ಪಾಟೀಲ್
- ಎಲ್ ವಿವೇಕಾನಂದ
- ಆರ್.ಪಿ ಭರತ್ರಾಜ್ ಸಿಂಗ್
- ಪ್ರೊ. ಪೂರ್ಣಾನಂದ
- ಮೊಹಮ್ಮದ್ ಅಸದ್
- ತುಂಗರೇಣುಕಾ
- ಮೊಹಿಯುದ್ದೀನ್ ಪಾಷಾ
- ರುದ್ರಪ್ಪ ಅಸಂಗಿ
- ಸತೀಶ್ ಆಚಾರ್ಯ
- ಸೋಮಶೇಖರ್ ಪಡುಕೆರೆ
- ಗುಲ್ನಾರ್ ಮಿರ್ಝಾ
- ಗಣೇಶ್ ಹೆಗಡೆ ಇಟಗಿ
- ಆರತಿ ಎಚ್.ಎನ್
- ಕೆ ಲಕ್ಷ್ಮಣ
- ಉಮಾ ಆನಂತ್
- ಮಂಜುನಾಥ ಮಹಾಲಿಂಗಪೂರ
- ಮಂಜುನಾಥ ಟಿ
- ಮಲ್ಲಿಕಾಚರಣ ವಾಡಿ
- ಪ್ರತಿಮಾ ನಂದಕುಮಾರ್
- ಅಮಿತ್ ಉಪಾಧ್ಯೆ
- ಪ್ರಭುಸ್ವಾಮಿ ನಾಟೇಕರ್
- ಸಿದ್ದೇಗೌಡ ಎನ್
- ಸಂಜೀವ ಕಾಬ್ಲೈ
- ನೀಲಕಂಠ ಕೆ.ಆರ್
ದತ್ತಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ;
- ಡಾ. ಬಿ.ಆರ್ ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ – ಡಾ. ಎ ನಾರಾಯಣ
- ಆಂದೋಲನ ದತ್ತಿ ಪ್ರಶಸ್ತಿ – ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ
- ಅಭಿಮಾನಿ ದತ್ತಿ ಪ್ರಶಸ್ತಿ – ಶಿವ ಹುಣಸೂರು
- ಮೈಸೂರು ದಿಗಂತ ದತ್ತಿ ಪ್ರಶಸ್ತಿ – ಸಂತೋಷ ಈ ಚಿನಗುಡಿ
- ಅಭಿಮನ್ಯ ದತ್ತಿ ಪ್ರಶಸ್ತಿ – ಚಂದ್ರಶೇಖರ ಬೆನ್ನೂರು
- ಪ್ರಜಾ ಸಂದೇಶ ದತ್ತಿ ಪ್ರಶಸ್ತಿ – ನಾಗರಾಜು ವೈ
- ಅರಗಿಣಿ ದತ್ತಿ ಪ್ರಶಸ್ತಿ – ಚೇತನ್ ನಾಡಿಗೇರ
- ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ – ಸಿದ್ದೇಶ್ ತ್ಯಾಗಟೂರು
- ಸಿ.ವಿ ರಾಜಗೋಪಾಲ್ ದತ್ತಿ ಪ್ರಶಸ್ತಿ – ಪ್ರಹ್ಲಾದ್ ಕುಳಲಿ
- ಕೆಯುಡಬ್ಲ್ಯೂಜಿ ದತ್ತಿ ಪ್ರಶಸ್ತಿ – ಕೆ ಆನಂದ ಶೆಟ್ಟಿ




