ಲಂಡನ್‌ನಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ ಪಾಠ ಮಾಡಿ ಬಂದೆ- ಬಾನು ಮುಷ್ತಾಕ್‌

Date:

ಬೂಕರ್‌ ಪ್ರಶಸ್ತಿ ಪಡೆದ ನಂತರ ಲಂಡನ್‌ನಲ್ಲಿ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಮತ್ತು ಪುಸ್ತಕ ಮಳಿಗೆಗಳಲ್ಲಿ ಸಂವಾದ ಗೋಷ್ಠಿಗಳಲ್ಲಿ ಮಾತನಾಡುವಾಗ ಕನ್ನಡ ಸಾಹಿತ್ಯ ಚರಿತ್ರೆಯ ಪಾಠ ಮಾಡಿ ಬಂದೆ. ಪುಸ್ತಕಕ್ಕೆ ಸಹಿ ಕೇಳಿದವರಿಗೆಲ್ಲ ಕನ್ನಡದಲ್ಲಿಯೇ ಸಹಿ ಮಾಡಿದ್ದೇನೆ ಎಂದು ಬಾನು ಮುಷ್ತಾಕ್‌ ಖುಷಿ ಹಂಚಿಕೊಂಡರು.

ಬೂಕರ್‌ ಪ್ರಶಸ್ತಿ ಸ್ವೀಕರಿಸಿ ಲಂಡನ್‌ನಿಂದ ಬುಧವಾರ ಬೆಂಗಳೂರಿಗೆ ಆಗಮಿಸಿದ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೂಕರ್‌ ಪ್ರಶಸ್ತಿ ಘೋಷಣೆಯಾದಾಗ ನಾನು ಎಮೋಷನಲ್‌ ಆಗಲಿಲ್ಲ. ಬಂಡಾಯ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಹೋದಂತೆ ಎದ್ದು ಹೋದೆ. ಕನ್ನಡಕ್ಕೆ ಪ್ರಶಸ್ತಿ ಬರುವ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ. ಆದರೂ ನಾಲ್ಕು ದಿನ ಇರುವಾಗ ಪ್ರಶಸ್ತಿ ಸ್ವೀಕಾರದ ಭಾಷಣ ರೆಡಿ ಮಾಡಿಕೊಂಡಿದ್ದೆ. ವೇದಿಕೆಯಲ್ಲಿ ಅದೇ ಭಾಷಣವನ್ನು ಓದಿದೆ. ಆದರೆ ಬೂಕರ್‌ ಅಧ್ಯಕ್ಷರು ಮೊದಲು ಆಡಿದ ಮಾತುಗಳಿದೆ ಬಹಳಷ್ಟು ಹೊಂದಿಕೆಯಾಗಿತ್ತು. ಅವೆಲ್ಲ ಬಂಡಾಯ ಸಾಹಿತ್ಯದ ವೇದಿಕೆಗಳಲ್ಲಿ ಆಡಿಕೊಂಡ ಮಾತುಗಳೇ ಆಗಿತ್ತು.ಈ ಅನುಭವ ನಿಜಕ್ಕೂ ಕನ್ನಡಕ್ಕೆ ಬೇಕಿತ್ತು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನನ್ನ ಜೊತೆಗೆ ಸ್ಪರ್ಧೆಯಲ್ಲಿದ್ದ ಐವರು ಕಾದಂಬರಿಕಾರೂ ಸೃಜನಶೀಲ ಬರಹದಲ್ಲಿ ಮಾಸ್ಟರ್ಸ್‌ ಮಾಡಿದವರಾಗಿದ್ದರು. ಅಲ್ಲಿ ಬರೆಯುವವರೆಲ್ಲ ಸೃಜನಶೀಲ ಬರಹದ ತರಬೇತಿ ಪಡೆದವರು. ಬೂಕರ್‌ ಸಮಿತಿ ಅಧ್ಯಕ್ಷರು ಮಾತನಾಡುತ್ತಾ, ಬರವಣಿಗೆಯಲ್ಲಿ ಜಡ್ಜ್‌ಮೆಂಟಲ್‌ ಆಗಬೇಡಿ, ಯಾರ ಪರವಾಗಿಯೂ ಬದ್ಧತೆಯಿಂದ ನಿಲ್ಲಬೇಡಿ ಎಂದು ಹೇಳಿಕೊಡುತ್ತಾರೆ ಅಂದ್ರು. ನಾವು ಸಂಪೂರ್ಣ ಭಿನ್ನ. ಶೋಷಿತರ ಪರ ನಿಲ್ಲಬೇಡಿ ಅಂದ್ರೆ ಹೇಗೆ? ಕನ್ನಡದ ಆಲೋಚನೆ, ಕನ್ನಡದ ಜೀವನಕ್ರಮ, ವ್ಯಾವಹಾರಿಕ ಭಾಷೆ, ಕನ್ನಡದ ರಾಜಕಾರಣದ ಬಗ್ಗೆ, ಭಾಷೆಯಾಗಿ ನಮಗೆ ಯಾಕೆ ಹಾಗೆ ಅನ್ನಿಸಿತು ಎಂದು ಪಾಠ ಮಾಡಿದೆ. ಬಂಡಾಯ ಚಳವಳಿ, ರೈತ ಚಳವಳಿ, ದಲಿತ ಮಹಿಳಾ ಚಳವಳಿಗಳ ಬಗ್ಗೆ ನಮ್ಮ ಕಮಿಟ್‌ಮೆಂಟ್‌ ಬಗ್ಗೆ ಮಾತನಾಡಿದೆ ಎಂದು ಅನುಭವ ಹಂಚಿಕೊಂಡರು.

ಕನ್ನಡದ ಈ ಕೃತಿ ಜಗತ್ತಿನ 35 ಭಾಷೆಗಳಿಗೆ, ಭಾರತದ ಹನ್ನೆರಡು ಭಾಷೆಗಳಿಗೆ ಅನುವಾದವಾಗಲಿದೆ. ಆಡಿಯೋ ಹಕ್ಕು, ಸಿನಿಮಾ ಹಕ್ಕುಗಳಿಗೆ ಬೇಡಿಕೆ ಬಂದಿದೆ. ಈ ಪುಸ್ತಕದ ಪ್ರಕಾಶಕರಿಗೆ ಈಗಾಗಲೇ ಆರು ಕೋಟಿ ರೂಪಾಯಿಯ ವ್ಯವಹಾರ ಆಗಿದೆ. ಮುಂದಿನ ಆಗಸ್ಟ್‌ವರೆಗೆ ಲಂಡನ್‌, ಸಿಲೋನ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಹಿತ್ಯೋತ್ಸವ, ಸಂವಾದ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪತ್ರಕರ್ತೆಯರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪದಾಧಿಕಾರಿಗಳು ಸನ್ಮಾನಿಸಿದರು. ಹಿರಿಯ ಪತ್ರಕರ್ತ ಜಿ ಎನ್‌ ಮೋಹನ್‌ ಆಶಯ ಭಾಷಣ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‌ ಅಭಿನಂದನಾ ಭಾಷಣ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...