ಅಪರಾಧವನ್ನೇ ಚಾಳಿ ಆಗಿಸಿಕೊಂಡ ಬಿಜೆಪಿಗರಿಂದ ನಾನು ಪಾಠ ಕಲಿಯಬೇಕಿಲ್ಲ: ಬಿ ಕೆ ಹರಿಪ್ರಸಾದ್‌

Date:

ಸಂಸ್ಕೃತಿ, ಮಾತೆ ಎನ್ನುತ್ತಾ ಮಹಿಳೆಯರ ರಕ್ಷಣೆಯ ನಕಲಿ ಗುತ್ತಿಗೆ ಪಡೆದಿದ್ದ ಬಿಜೆಪಿಯಿಂದ ಇತ್ತೀಚಿಗೆ ಸಬ್ ಕಾಂಟ್ರ್ಯಕ್ಟ್ ಪಡೆದಿರುವಂತೆ ವರ್ತಿಸುತ್ತಿರುವ ಈ ಛಲವೇ ಇಲ್ಲದ ಛಲವಾದಿ ನಾರಾಯಣಸ್ವಾಮಿ ಪುಂಖಾನುಪುಂಖವಾಗಿ ಮಹಿಳೆಯರ ಬಗ್ಗೆ ಮಾತಾಡುವ ಕನಿಷ್ಟ ನೈತಿಕತೆಯನ್ನಾದರೂ ಉಳಿಸಿಕೊಂಡಿದ್ದಾರೆಯೇ? ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಕುಟುಕಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಮಹಿಳೆಯರನ್ನ ಪ್ರತಿ ಕ್ಷಣವೂ ಅವಮಾನಿಸುವ, ಎರಡನೇ ದರ್ಜೆಯಾಗಿ ಕಾಣುವ ಪ್ರಧಾನಿಯಿಂದ ಹಿಡಿದು ರಾಜ್ಯದ ಬಿಜೆಪಿಯ “ಹ್ಯಾಬಿಚುವಲ್ ಅಫೆಂಡರ್” (ಅಪರಾಧ ಚಾಳಿಯೇ)ಗಳಿಂದ ನಾನು ಪಾಠ ಕಲಿಯಬೇಕಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

“ಚಿಂತಕರ ಚಾವಡಿ” ಎನಿಸಿಕೊಂಡಿರುವ ಸದನದಲ್ಲಿ ನಾರಾಯಣಸ್ವಾಮಿ ಸಮ್ಮುಖದಲ್ಲೇ, ಬಿಜೆಪಿಯ ಸದಸ್ಯನೊಬ್ಬ ಮಹಿಳಾ ಸಚಿವರಿಗೆ ಬಳಸಿದ ಅತ್ಯಂತ ಅಸಭ್ಯ ಹಾಗೂ ಅಸಂಸದೀಯ ಪದ ಕೇಳಿಯೂ ತೇಪೆ ಮುಖ ಹಾಕಿಕೊಂಡು ಕೂತಾಗ ಮಹಿಳಾ ನಕಲಿ ರಕ್ಷಣೆಯ ಸಬ್ ಕಾಂಟ್ರ್ಯಕ್ಟರ್‌ಗೆ ರಿನಿವಲ್ ಸಿಕ್ಕರಲಿಲ್ವಾ? ಅಥವಾ ಆಗ ಇಡೀ ಮಹಿಳೆಯರ ಕುಲಕ್ಕೆ ಗೌರವಕ್ಕೆ ಅಪಮಾನಿಸಲಿಲ್ವಾ? ಆಗ ಪ್ರಶ್ನೆ ಮಾಡುವ ದೈರ್ಯ ಅಥವಾ “ಛಲ” ಇರಲಿಲ್ವೇ?” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಆಪರೇಷನ್ ಸಿಂಧೂರ”ದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸಿದೇ ಭಯೋತ್ಪಾದಕರ ವಿರುದ್ಧ ಹೋರಾಡಿ ನಾಯಕತ್ವ ನೀಡಿದ, ನಮ್ಮ ಹೆಮ್ಮೆಯ ಕರ್ನಲ್ ಸೋಫಿಯಾ ಖುರೇಷಿಯ ಬಗ್ಗೆ ಬಿಜೆಪಿಯ ಸಚಿವನೇ ” ಭಯೋತ್ಪಾದಕರ ಸಹೋದರಿ”ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ಎಲ್ಲಿ ಅಡಗಿತ್ತು ಈ ಉತ್ತರ ಕುಮಾರನ ಪೌರುಷ? ಸುಪ್ರೀಂಕೋರ್ಟ್ ಸ್ವಯಂಕೃತ ದೂರು ದಾಖಲಿಸಿಕೊಂಡು ಛೀಮಾರಿ ಹಾಕಿದರೂ ಇಲ್ಲಿವರೆಗೂ ಬಿಜೆಪಿಯವರು ತುಟಿ ಬಿಚ್ಚುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

“ದೇಶದ ರಾಷ್ಟ್ರಪತಿಗಳಿಂದಲೇ ಅತ್ಯುತ್ತಮ ಅಧಿಕಾರಿ ಎಂದು ಶ್ಲಾಘನೆ ಪಡೆದ ಕಲಬುರಗಿಯ ಜಿಲ್ಲಾಧಿಕಾರಿಯನ್ನು ಬಿಜೆಪಿ ಪಕ್ಷದ ಪರಿಷತ್ ಸದಸ್ಯ”ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತಾರೆ”ಎಂದು ಅವರ ಆತ್ಮಸ್ತೈರ್ಯವನ್ನೇ ಕುಗ್ಗಿಸಿ ಅವಮಾನಿಸಿದಾಗ ಕನಿಷ್ಟ ಪಕ್ಷ ಖಂಡಿಸುವ ಧೈರ್ಯವಾದರೂ ನನ್ನಲ್ಲಿ ಉಳಿಸಿಕೊಂಡಿಲ್ಲ ಎಂದು ಸಾಬೀತು ಮಾಡಿದ್ದು ಮರೆತಂತಿದೆ. ರಾಜ್ಯದ ಉನ್ನತ ಸ್ಥಾನದಲ್ಲಿ ಮಹಿಳಾ ಅಧಿಕಾರಿಯನ್ನು “ರಾತ್ರಿ ಸರ್ಕಾರದ ಕೆಲಸ, ಹಗಲು ಸಿದ್ದರಾಮಯ್ಯನವರ ಕೆಲಸ ಮಾಡ್ತಾರೆ” ಎಂದು ಅತ್ಯಂತ ಕೀಳು ಮನಸ್ಥಿತಿಯ ಮಾತಿಗಳನ್ನಾಡಿದ ಬಿಜೆಪಿಯ ಪರಿಷತ್ ಸದಸ್ಯನ ಮಾತನ್ನು ಕೇಳಿಯ ಗಹಗಹಿಸಿ ನಕ್ಕ ನಿಮ್ಮ ಹೀನ ಮನಸ್ಥಿತಿ ರಾಜ್ಯದ ಜನ ಮರೆತಿಲ್ಲ. ಹೊಲಸು ಮಾತುಗಳನ್ನು ಕೇಳಿಯೂ ಖಂಡಿಸದೆ ಯಾವ “ಕೇಶವನ ಕೃಪದ” ಮೂಲೆಯಲ್ಲಿ ಅಡುಗಿ ಕುಳಿತುಕೊಂಡಿದ್ರಿ” ಎಂದು ಲೇವಡಿ ಮಾಡಿದ್ದಾರೆ.

“ಮಹಿಳೆಯರಿಗೆ ಗೌರವ ನೀಡುವುದನ್ನು ಬಿಜೆಪಿಯ ಮನುವಾದಿ ಮನಸ್ಥಿತಿಯವರಿಂದ ಕಲಿಯುವ ದಾರಿದ್ರ್ಯ ನನಗೆ ಬಂದಿಲ್ಲ. ನನ್ನ ಹಿನ್ನಡೆ ಮುನ್ನಡೆಯ ಬಗ್ಗೆ ಬಿಜೆಪಿ ಪಕ್ಷದವರು ಹೆಚ್ಚು ತಲೆಕೆಡಸಿಕೊಂಡು ಮಾನಸಿಕವಾಗಿರುವಂತಿದೆ. ಚಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ಮಾನ ಸಿಗಲು ನಿಮ್ಮಂತೆ ಬಳಸಿ ಬಿಸಾಡಿದ ಚೆಡ್ಡಿ ಹೊತ್ತು ತಿರುಗಿದಂತೆ ಅಲ್ಲ. ನನ್ನ ಹಿನ್ನಡೆ ಯಾವತ್ತೂ ಆಗುವುದಿಲ್ಲ, ಸೈದ್ದಾಂತಿಕ ಬದ್ಧತೆ ಸತ್ಯ,ಪ್ರಾಮಾಣಿಕತೆ, ಪಕ್ಷನಿಷ್ಠೆಗೆ ಯಾವತ್ತೂ ಸ್ಥಾನಮಾನ ಬೇಕಾಗಿಲ್ಲ, ಸಾಮಾಜಿಕ ಬದ್ದತೆ,ಎದೆಗಾರಿಕೆ ಇರಬೇಕು. ಅದು ನನ್ನಲ್ಲಿ ಹುಟ್ಟಿನೊಂದಿಗೆ ಬಂದಿದೆ. ನಿಮ್ಮ ಹಾಗೇ ಅಧಿಕಾರ, ಆಸೆ, ಆಮೀಷಕ್ಕೆ ಒಳಗಾಗಿ ಸಿದ್ದಾಂತವನ್ನೇ ಬದಲಾಯಿಸಿ, ಬೆಳಸಿದವರನ್ನೇ ದೂರುತ್ತಾ ರಾಜಕೀಯ ನಡೆಸುವ ಹೀನ ಸಂಸ್ಕೃತಿಯಂತೂ ನನ್ನದಲ್ಲ” ಎಂದು ತಿರುಗೇಟು ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...