ಜಸ್ಟಿಸ್ ದಾಸ್ ವರದಿ ಸುಟ್ಟು ಹಾಕಿದ್ದು ದುರದೃಷ್ಟಕರ: ಕೋಟಿಗಾನಹಳ್ಳಿ ರಾಮಯ್ಯ

Date:

ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದಿದ್ದಾರೆ ಕೆ.ರಾಮಯ್ಯ.

ಜಸ್ಟಿಸ್ ಎಚ್.ಎನ್‌. ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯನ್ನು ಸುಟ್ಟು ಹಾಕಿರುವುದು ದುರದೃಷ್ಟಕರ ಎಂದು ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಜಸ್ಟಿಸ್ ದಾಸ್ ಅವರ ವರದಿ ಹಾಗೂ ಒಳಮೀಸಲಾತಿ ಜಾರಿ ಸಂಬಂಧ ಬೆಂಗಳೂರಿನ ಶಾಸಕರ ಭವನ-5ರಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ಸಂವಿಧಾನದಲ್ಲಿ ಸಹೋದರತೆ ಬಹುದೊಡ್ಡ ಸಂಗತಿ. ಸಹೋದರತೆಗೂ ನಮಗೂ ಕಿಂಚಿತ್ತು ಸಂಬಂಧವೂ ಇಲ್ಲ, ಸ್ಪರ್ಶವೂ ಇಲ್ಲ ಎನ್ನುವುದನ್ನು ವರದಿಯ ವಿರೋಧದಲ್ಲಿ ಕಾಣುತ್ತಿದ್ದೇವೆ ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವಿದ್ಯಮಾನವನ್ನು ರಾಜಕೀಯ ಲಾಭಕ್ಕೆ ನೋಡುವ ರಾಜಕೀಯ ನಾಯಕತ್ವವೂ ಮುಚ್ಚುಮರೆ ಆಟವನ್ನು ಎರಡೂ ಕಡೆಯೂ ಆಡುತ್ತಿದೆ. ಒಳಮೀಸಲಾತಿ ಜಾರಿ ವಿಳಂಬವಾಗಲೇಬೇಕು ಎಂದು ಅವರ ಮುಸುಕಿನ ನಡೆಗಳು ಹೇಳುತ್ತಿವೆ. ವರದಿಯು ಸೋರಿಕೆಯಾಗಿ ಸಿಕ್ಕಿರುವ ಮಾಹಿತಿಗಳನ್ನು ನೋಡಿದರೆ ವರದಿಯ ತಾತ್ವಿಕತೆ ತಪ್ಪು ಎನಿಸುವುದಿಲ್ಲ. ಜನಸಂಖ್ಯಾ ಆಧಾರದಲ್ಲಿ ಸೌಲಭ್ಯಗಳು ದೊರಕಬೇಕು ಎಂಬ ಆಗ್ರಹಗಳು ಪ್ರಜಾತಾಂತ್ರಿಕವಾಗಿ ಸರಿ. ಆದರೆ ಸಮಸ್ಯೆ ಇರುವುದು ಎಲ್ಲಿ ಎಂದು ನೋಡಬೇಕು. ಖಂಡಿತವಾಗಿಯೂ ನಾವು ಹೋಮೋಜೀನಿಯಸ್‌ ಆಗಿ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಬಹುಸಂಖ್ಯಾತವಾದ ಏನಾದರೂ ಹೆಚ್ಚಿನ ಪಾತ್ರ ವಹಿಸಿತು ಎಂದರೆ, ಆ ಬಹುಸಂಖ್ಯಾತರೊಳಗಿರುವ ಅಲ್ಪಸಂಖ್ಯಾತರಾದ ಹಲವು ಘಟಕಗಳು ಅನ್ಯಾಯಕ್ಕೆ ಒಳಗಾಗುತ್ತವೆ. ಬಹುಸಂಖ್ಯಾತವಾದ ಎಂದರೇನು, ಅಲ್ಪಸಂಖ್ಯಾತರು ಎಂದರೇನು ಎಂಬುದರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಬಹುಸಂಖ್ಯಾತವಾದವೇ ನಿರ್ಧಾರ ಮಾಡುವುದಕ್ಕೆ ಬಿಡಬಾರದು ಎಂದು ಬಾಬಾಸಾಹೇಬರು ಪ್ರತಿಪಾದಿಸಿದ್ದಾರೆ. ನನ್ನದು ಕೂಡ ಅದೇ ನಿಲುವು ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ, ಕೈಗಾರಿಕೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಫಲಾನುಭವಿಗಳಾದವರು ಮತ್ತು ಹೊರಗುಳಿದವರ ಬಗ್ಗೆ ವರದಿ ಹೇಳಿದೆ. ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದರು.

ದಸಂಸ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ, ”ಪ್ರವರ್ಗ ‘ಎ’ಗೆ ಕೊಟ್ಟಿರುವ 1 ಪರ್ಸೆಂಟ್, ಪ್ರವರ್ಗ ‘ಬಿ’ಗೆ ಕೊಟ್ಟಿರುವ 6 ಪರ್ಸೆಂಟ್ ಮೀಸಲಾತಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಪ್ರವರ್ಗ ‘ಇ’ನಲ್ಲಿರುವವರನ್ನು ‘ಸಿ’ಗೆ ಶಿಫ್ಟ್‌ ಮಾಡಿದರೆ ಸಮಾನಾಂತರವಾಗುತ್ತದೆ ಮತ್ತು ಡ್ಯಾಮೇಜ್ ಕಂಟ್ರೋಲ್ ಆಗುತ್ತದೆ” ಎಂದು ಸಲಹೆ ನೀಡಿದರು.

WhatsApp Image 2025 08 14 at 10.53.52

ಹೋರಾಟಗಾರ ಎಚ್.ಗೋವಿಂದಯ್ಯ ಮಾತನಾಡಿ, ”ಹೊಲೆಯರಲ್ಲಿಯೂ ವಂಚಿತರಾದ ಸಮುದಾಯಗಳನ್ನು ‘ಬಿ’ ಗುಂಪಿನಲ್ಲಿ ಸೇರಿಸಲಾಗಿದೆ. ಏನೇನೂ ಪಡೆಯದೆ ಇರುವವರನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗಿದೆ. ಇದು ಬಹಳ ಒಳ್ಳೆಯ ವರದಿ. ಇದನ್ನು ಕೂದಲು ಸೀಳಿಕೊಂಡು ನೋಡುತ್ತಾ ಕೂತರೆ ನಮ್ಮಂತಹ ಸಾಮಾಜಿಕ ನ್ಯಾಯದ ದ್ರೋಹಿಗಳು ಇನ್ಯಾರೂ ಇರುವುದಿಲ್ಲ” ಎಂದು ಎಚ್ಚರಿಸಿದರು.

ಚಿಂತಕ ಶಿವಸುಂದರ್ ಮಾತನಾಡಿ, ”1 ಕೋಟಿ 5 ಲಕ್ಷ ಜನ ಪರಿಶಿಷ್ಟರಲ್ಲಿ 1 ಲಕ್ಷ 45 ಸಾವಿರ ಜನ ಸರ್ಕಾರಿ ಉದ್ಯೋಗಿಗಳಿದ್ದಾರೆ. ಅಂದರೆ ನಾವು ಮಾತನಾಡುತ್ತಿರುವುದು ಪರಿಶಿಷ್ಟರಲ್ಲಿನ 1.4 ಪರ್ಸೆಂಟ್‌ ಸಾಮಾಜಿಕ ನ್ಯಾಯದ ಪ್ರಶ್ನೆಯ ಬಗ್ಗೆ. ಇಷ್ಟಾದರೂ ಆಗಲೇಬೇಕು. ಆದರೆ ಸಾಮಾಜಿಕ ನ್ಯಾಯ ಇಷ್ಟಕ್ಕೆ ಸೀಮಿತವಾಗಬಾರದು. ಭೂಮಿ ಪ್ರಶ್ನೆಯನ್ನು ನೋಡಬೇಕಾಗುತ್ತದೆ” ಎಂದು ಆಶಿಸಿದರು.

WhatsApp Image 2025 08 14 at 09.37.04

ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್ ಮಾತನಾಡಿ, “ಅತಿ ಹಿಂದುಳಿದವರಿಗೆ ಸಿಗಬೇಕಾದ ನ್ಯಾಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು ಜನಸಂಖ್ಯಾ ಆಧಾರದ ಮೇಲೆ ಮಾಡಿರುವ ಮೀಸಲಾತಿ ವಿಂಗಡಣೆಯಲ್ಲ; ಪ್ರಾಧಾನ್ಯತೆಯ ಆಧಾರದ ವಿಂಗಡಣೆ. ವರದಿಯನ್ನು ಸುಡುವುದು ಒಳ್ಳೆಯದಲ್ಲ. ಅದರಿಂದ ಅಪನಂಬಿಕೆಗಳು ಹೆಚ್ಚಾಗುತ್ತವೆ” ಎಂದರು.

ಇದನ್ನೂ ಓದಿರಿ: ಅಲೆಮಾರಿಗಳನ್ನು ತಾಯ್ತನದಿಂದ ಪೊರೆದವರು ಮಾದಿಗರು: ಗೋಸಂಗಿ ಲೋಕೇಶ್

ಕಾಂಗ್ರೆಸ್ ವಕ್ತಾರೆ ಯು.ಟಿ.ಫಾರ್ಝಾನಾ ಮಾತನಾಡಿ, ”ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಮೀಸಲಾತಿ ಪಡೆಯುವ ಅರ್ಹತೆ ಇರುವುದಿಲ್ಲ. ವರ್ಣವ್ಯವಸ್ಥೆಯಲ್ಲಿ ಶೋಷಿತರಾದವರು, ತಮ್ಮ ಕೆಳಗಿನವರ ಪಾಲನ್ನು ವಿರೋಧಿಸುವುದು ಸರಿಯಲ್ಲ. ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಬ್ರಾಹ್ಮಣ್ಯವನ್ನು ವಿರೋಧಿಸುವ ಹಕ್ಕು ಇರುವುದಿಲ್ಲ” ಎಂದು ಹೇಳಿದರು.

ಸಭೆಯಲ್ಲಿ ಪ್ರೊ.ದೊರೆರಾಜು, ಬಸವರಾಜ ಕೌತಾಳ್, ಡಾ.ರವಿಕುಮಾರ್ ನೀಹ, ರೂಮಿ ಹರೀಶ್, ಅಗ್ರಹಾರ ಕೃಷ್ಣಮೂರ್ತಿ, ಡಿ. ಉಮಾಪತಿ, ಪ್ರೊ. ಬಿ.ಸಿ. ಬಸವರಾಜ್, ಲೇಖಾ ಅಡವಿ, ಹನುಮಂತಗೌಡ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ಸಿ.ಜಿ. ಲಕ್ಷ್ಮೀಪತಿ, ವಿ.ಎಲ್.ನರಸಿಂಹಮೂರ್ತಿ, ಆರ್.ವಿಜಯಕುಮಾರ್, ಡಾ.ಅರುಂಧತಿ, ಡಾ.ಬಸವರಾಜ್, ಡಾ.ವೈ.ಕೆ.ಬಾಲಕೃಷ್ಣಪ್ಪ, ಗುರುಪ್ರಸಾದ್ ಕಂಟಲಗೆರೆ, ಡಾ.ಲಕ್ಷ್ಮೀರಂಗಯ್ಯ, ಜನಾರ್ದನ ಕೆಸರಗದ್ದೆ, ರವಿಕುಮಾರ್ ಬಾಗಿ, ಚಂದ್ರು ತರಹುಣಿಸೆ, ರುದ್ರುಪುನೀತ್, ಭೀಮಾಶಂಕರ್, ಸರೋವರ್ ಬೆಂಕಿಕೆರೆ, ನರಸೀಯಪ್ಪ, ಸಿದ್ದಪ್ಪ ಮೂಲಗೆ, ಡಾ.ವಾಸು ಹೆಚ್.ವಿ, ನಾಗೇಗೌಡ ಕೀಲಾರ ಹಲವರು ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...