ಸರ್ಕಾರದ ಆದೇಶದಂತೆಯೇ ರಾಜ್ಯದ ಹೆಚ್ಚಿನ ಪಂಚಾಯತಿಗಳಲ್ಲಿ ಇಂದು ವಿಬಿ ರಾಮ್ಜಿ ಕಾನೂನಿನ ತಿಳಿವಳಿಕೆ ನೀಡುವ ಗ್ರಾಮಸಭೆ ನಡೆದವು. ಜನರು ಭಾಗವಹಿಸಿದ್ದ ಹೆಚ್ಚಿನ ಗ್ರಾಮಸಭೆಗಳಲ್ಲಿ ಹೊಸ ಕಾಯಿದೆಯು ನಮಗೆ ಬೇಡ, ವರ್ಷವಿಡೀ ಇಡೀ ದೇಶದಲ್ಲೂ ಉದ್ಯೋಗ ಕೊಡುವಂಥ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನೇ ಇರಲಿ ಎಂದು ಹೆಚ್ಚಿನ (10 ಜಿಲ್ಲೆಗಳ ಸುಮಾರು 100 ಪಂಚಾಯತಿಗಳಲ್ಲಿ) ಗ್ರಾಮಪಂಚಾಯತಿಗಳಲ್ಲಿ ಠರಾವು ಮಾಡಲಾಯಿತು ಎಂದು ಮನರೇಗಾ ರಕ್ಷಣಾ ಒಕ್ಕೂಟ ತಿಳಿಸಿದೆ.
ಕೆಲವು ಪಂಚಾಯತಿಗಳಲ್ಲಿ ತಮಗೇ ತರಬೇತಿ ಆಗಿಲ್ಲ, ಜನರಿಗೆ ತಾವೇನು ಅರಿವು ಮೂಡಿಸುವುದು ಎಂದು ಪಿಡಿಓಗಳು ಗ್ರಾಮಸಭೆ ನಡೆಸಲು ಒಪ್ಪಲಿಲ್ಲ.
ಹೆಚ್ಚಿನ ಪಂಚಾಯತಿಗಳಲ್ಲಿ ಕೂಲಿ ಕಾರ್ಮಿಕರು ಹೊಸ ಕಾನೂನು (ವಿಬಿ-ಗ್ರಾಮ್ಜಿ) ಬೇಡ, ಹಳೆಯ ಕಾನೂನೇ(ಮನರೇಗಾ) ಇರಲಿ ಎಂದು ಗ್ರಾಮಸಭೆಯಲ್ಲಿ ಮನವಿಗಳನ್ನು ಕೊಟ್ಟರು.






