ಹೂಳಲು ಸ್ಮಶಾನವಿಲ್ಲದೆ ತಿ. ನರಸೀಪುರದಿಂದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಲೆಮಾರಿ ಕೊರಚ ಸಮುದಾಯ

Date:

ಅನಾರೋಗ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೂಳಲು ಸ್ಮಶಾನವಿಲ್ಲದೆ ಕುಟುಂಬದವರು ನೂರಾರು ಕಿ.ಮೀ ದೂರದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಮಾನವೀಯ ಘಟನೆ ಮೈಸೂರಿನ ತಿ ನರಸೀಪುರದಲ್ಲಿ ನಡೆದಿದೆ.

ತಿ.ನರಸೀಪುರ ಟೌನಿನ ಹೊಸ ರೇಷ್ಮೆ ಗೂಡಿನ ಎದುರು, ಮಾರ್ಕೆಟ್ ರಸ್ತೆ ನಿವಾಸಿ, ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಜನಾಂಗದ 50 ವರ್ಷದ ರತ್ನಮ್ಮ ಎಂಬುವವರು ಅನಾರೋಗ್ಯದಿಂದ ನಿನ್ನೆ(ಜ.08) ದಿನ ಮೃತಪಟ್ಟಿದ್ದರು. ಹೂಳಲು ಸ್ಥಳವಿಲ್ಲದ ಕಾರಣ ರತ್ನಮ್ಮ ನವರ ಮೃತದೇಹವನ್ನು ಅವರ ಕುಟುಂಬದ ಸದಸ್ಯರು ತವರೂರು ದಾವಣಗೆರೆಗೆ ತೆಗೆದುಕೊಂಡು ಹೋಗಿದ್ದಾರೆ.

ಸುಮಾರು 35 ವರ್ಷಗಳ ಹಿಂದೆ ದಾವಣಗೆರೆಯಿಂದ ವಲಸೆ ಬಂದ ರತ್ನಮ್ಮನವರ ಕುಟುಂಬಸ್ಥರು ತಿ.ನರಸೀಪುರ ಪಟ್ಟಣದ ಈಗಿನ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಅರ್ಧಗುಂಟೆ ಜಾಗ ಖರೀದಿಸಿ ವಾಸವಿದ್ದರು. ಕಬಿನಿ ನದಿಗೆ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ಸ್ವಂತ ಜಾಗವನ್ನು ಕಳೆದುಕೊಂಡು ಬೀದಿಗೆ ಬಿದ್ದ ರತ್ನಮ್ಮನ ಕುಟುಂಬಸ್ಥರು, ಖಾಸಗಿ ಜಮೀನಿನಲ್ಲಿ ಬಾಡಿಗೆ ಪಾವತಿಸುತ್ತ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೀವನೋಪಾಯಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡಿಕೊಂಡಿದ್ದರು. ಇತ್ತೀಚೆಗೆ ಮೃತಪಟ್ಟ ಗಂಡನ ಸಾವಿನಿಂದ ಕಂಗಾಲಾಗಿದ್ದ ರತ್ನಮ್ಮ, ತನ್ನ ತಮ್ಮ ಕೊಟ್ರೇಶಿಯೊಂದಿಗೆ ವಾಸವಾಗಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ

ವಾಸಿಸಲು ಸ್ವಂತ ಸ್ಥಳವಿಲ್ಲದೆ, ಮೃತಪಟ್ಟಾಗ ಹೂಳಲು ಸ್ಮಶಾನವಿಲ್ಲದೆ ಸ್ವಂತ ಸೂರಿಗಾಗಿ ಹೋರಾಡುತ್ತ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡುತ್ತ ಬಡತನದಲ್ಲಿಯೇ ರತ್ನಮ್ಮ ಬದುಕು ಸವೆಸುತ್ತಿದ್ದರು.

ಆದರೆ ಅನಾರೋಗ್ಯದಿಂದಾಗಿ ರತ್ನಮ್ಮ ಜ.8ರಂದು ಅಕಾಲಿಕ ಮರಣ ಹೊಂದಿದರು. ಆದರೆ ಅವರ ಮೃತದೇಹವನ್ನು ಹೂಳಲು ಸ್ಥಳವಿರಲಿಲ್ಲ. ತಾನು ವಾಸವಿದ್ದ ಊರಿನಲ್ಲಿ ಹೂಳಲು ಸ್ಮಶಾನವಿಲ್ಲದೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿ ನೂರಾರು ಕಿ. ಮೀ ದೂರದಲ್ಲಿರುವ ತವರೂರು ದಾವಣಗೆರೆಗೆ ಮೃತದೇಹ ಕೊಂಡೊಯ್ಯುವಂತಾಗಿದ್ದು ನಾಗರಿಕ ಸಮಾಜದ ದುರಂತವಾಗಿದೆ. ಸ್ಥಳೀಯ ಆಡಳಿತ ಕೂಡ ಶೋಷಿತ ಸಮುದಾಯದ ಈ ಕುಟುಂಬಗಳಿಗೆ ಮೂಲಭೂತವಾಗಿ ನೀಡಬೇಕಾದ ಸೂರು, ಸ್ಮಶಾನ ಮುಂತಾದವನ್ನು ನೀಡದೆ ಅನ್ಯಾಯವೆಸಗಿದೆ.

ಕಳೆದ ಮೂವತ್ತು ವರ್ಷಗಳಿಂದ ಸ್ವಂತ ನೆಲೆ ಮತ್ತು ಸೂರಿಗಾಗಿ ಹೋರಾಟ ಮಾಡುತ್ತಿರುವ ತಿ.ನರಸೀಪುರ ಪಟ್ಟಣದ ಪರಿಶಿಷ್ಟ ಅಲೆಮಾರಿ ಕೊರಚ ಸಮುದಾಯದ ಮೂವತ್ತು ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತ ಇನ್ನಾದರೂ ಸ್ವಂತ ಸೂರು, ಸ್ಮಶಾನದ ಜಾಗಗಳನ್ನು ಕಲ್ಪಿಸಿ ಗೌರವಿತವಾಗಿ ಬದುಕಲು ಅವಕಾಶ ನೀಡಬೇಕಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...