ಆಸಿಫ್ ಮತ್ತು ಒಂದು ಗಿಡದ ಕಥೆ….

Date:

ಆಸೀಫ್‌ನಿಗೆ ಈ ಗಿಡವನ್ನು ದತ್ತುಕೊಡಲಾಗಿದೆ. ಉಳಿದವರಿಗೆ ಕೊಟ್ಟಂತೆ. ಆಸೀಫ್‌ನಿಗೆ ಈ ಗಿಡದ ಬಗ್ಗೆ ತುಂಬಾ ಅಕ್ಕರೆ ಮಮತೆ. ಅವನಿಗೆ ಆ ಗಿಡವನ್ನು ದತ್ತುಕೊಟ್ಟಾಗಿನಿಂದ ತುಂಬಾ ಚನ್ನಾಗಿ ದೇಖರೇಖಿ ಮಾಡತೊಡಗಿದ. ಪ್ರತಿದಿನ ತಪ್ಪದೇ ಅದಕ್ಕೆ ನೀರುಣಿಸುವುದು, ಅದರ ಸುತ್ತ ಕಟ್ಟೆ ಕಟ್ಟಿ ಅಲ್ಲಿ ಸದಾ ಹಸಿ ಇರುವಂತೆ ನೋಡಿಕೊಳ್ಳುವುದು, ರಜೆ ಇದ್ದಾಗಲೂ ಶಾಲೆ ಕಡೆ ಆಡಲು ಬಂದು ಆ ಗಿಡವನ್ನು ಮಾತನಾಡಿಸಿ, ಆ ಗಿಡಕ್ಕೆ ನೀರುಣಿಸಿಯೇ ಹೋಗುತ್ತಿದ್ದ.

ಒಂದು ದಿನ…. ಹೀಗಾಯಿತು. ಆಸೀಫ್ ನ ಗಿಡದ ಚಂಡನ್ನು ಯಾರೋ ಕತ್ತರಿಸಿಬಿಟ್ಟಿದ್ದರು. ಪುಟ್ಟ ಗಿಡ ತಲೆ ಕಡಿಸಿಕೊಂಡು ಬೋಳಾಗಿ ನಿಂತಿತ್ತು.

ಎಂದಿನಂತೆ ಶಾಲೆಗೆ ಬಂದ ಆಸೀಫನಿಗೆ ತನ್ನ ಗಿಡಕ್ಕಾದ ಗತಿ ಕಂಡು ಆಘಾತಕ್ಕೊಳಗಾದ ನಾ ಬಂದ ತಕ್ಷಣ ಅವನ ದುಃಖದ ಕಟ್ಟೆಯೊಡೆಯಿತು. ನನ್ನನ್ನ ತಬ್ಬಿಕೊಂಡು ಅಳತೊಡಗಿದ. ನಾನು ಎಷ್ಟೇ ಸಮಾಧಾನಿಸಿದರೂ ಅವನ ದುಃಖ ನಿಲ್ಲಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2024 08 10 at 1.13.27 PM

ನಂತರ ಉಳಿದ ಮಕ್ಕಳನ್ನೂ ಕರೆದು, ಆಸೀಫನ ಗಿಡಕ್ಕಾಗಿರುವ ಸ್ಥಿತಿಯ ಕುರಿತು ಚರ್ಚಿಸಿ, ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಮತ್ತೆ ಯಾರೂ ಈ ರೀತಿ ಮಾಡದಿರಲಿ, ನಿಮ್ಮ ನಿಮ್ಮ ಗಿಡಗಳ ಕಾಳಜಿ ಆಸೀಫನಂತೆಯೇ ಎಲ್ಲರೂ ಮಾಡಿ, ಈ ಗಿಡವನ್ನ ನಾವೆಲ್ಲ ತಬ್ಬಿಕೊಂಡು ಅದಕ್ಕಾಗಿರುವ ನೋವಿಗೆ ಸಾಂತ್ವನ ಹೇಳೋಣ ಮತ್ತು ಅದನ್ನ ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳುವುದಾಗಿಯೂ ಅದು ಮತ್ತೆ ಬೆಳೆಯುವಂತೆ ಆ ಗಿಡಕ್ಕೆ ಪ್ರಾರ್ಥಿಸೋಣ ಎಂದು ಹೇಳಿ ಎಲ್ಲರೂ ಒಂದೊಂದು ತಂಬಿಗೆ ನೀರು ಹಾಕಿದೆವು.

ಆಸೀಫ್ ಸ್ವಲ್ಪ ಸಮಾಧಾನವಾದಂತೆ ಕಂಡ. ಆಸೀಫ್ ಮತ್ತಷ್ಟು ಪ್ರೀತಿಯಿಂದ ಆ ಗಿಡವನ್ನು ನೋಡಿಕೊಳ್ಳತೊಡಗಿದೆ. ಅದಕ್ಕೆ ತನ್ನೆಲ್ಲ ಪ್ರೀತಿ ಕಾಳಜಿ ಧಾರೆ ಎರೆದ. ಕತ್ತು ಕತ್ತರಿಸಿಕೊಂಡ ಗಿಡ ಮತ್ತೆ ಚಿಗುರತೊಡಗಿತು. ಆಸೀಫ್ ನಿಗೆ ಆಶ್ವರ್ಯ ಮತ್ತು ಸಂಭ್ರಮ.

ಈಗ ಆ ಗಿಡ ಎಲ್ಲ ಗಿಡಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆದಿದೆ. ಆಸೀಫನಿಗಿಂತಲೂ ದುಪ್ಪಟ್ಟು ಬೆಳೆದು ನಿಂತಿದೆ.ತನ್ನ ಶ್ರದ್ಧೆ ಪರಿಸರ ಪ್ರೀತಿ ಮತ್ತು ಕಾಳಜಿಯಿಂದ ಆಸೀಫ್ ಇಂದು ನಮಗೆಲ್ಲ ಆದರ್ಶವಾಗಿದ್ದಾನೆ. ಆಸೀಫನಿಗೆ ಮತ್ತು ಆ ಗಿಡಕ್ಕೆ ತುಂಬು ಪ್ರೀತಿ.

ಪೋಸ್ಟ್ ಹಂಚಿಕೊಳ್ಳಿ:

ವೀರಣ್ಣ ಮಡಿವಾಳರ
ವೀರಣ್ಣ ಮಡಿವಾಳರ
ಕವಿ, ಲೇಖಕ, ಶಿಕ್ಷಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...