ಕೋಲಾರ : ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆತವನ್ನು ಖಂಡಿಸಿ ಅಕ್ಟೋಬರ್ 17ರಂದು ನಡೆಯಲಿರುವ ಕೋಲಾರ ಬಂದ್ ಗೆ ದಲಿತ ಸಮಾಜಸೇನೆ ರಾಜ್ಯಾಧ್ಯಕ್ಷ ಸೂಲಿಕೂಂಟೆ ಆನಂದ್ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ರವರ ಮೇಲೆ ಅವಿವೇಕಿ ವಕೀಲ ಶೂ ಎಸೆದಿರುವ ಘಟನೆ ಖಂಡಿಸಿ ದೇಶಾದ್ಯಂತ ಹಾಗೂ ರಾಜ್ಯದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈಗ ಹೋರಾಟಗಳ ತವರುರು ಆಗಿರುವ ಕೋಲಾರ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳಿಂದ ಅಕ್ಟೋಬರ್ 17 ರ ಶುಕ್ರವಾರ ಬಂದ್ ಗೆ ಕರೆ ನೀಡಿದ್ದು ಸಂಪೂರ್ಣವಾಗಿ ದಲಿತ ಸಮಾಜಸೇನೆ ಬೆಂಬಲ ನೀಡುತ್ತೆ ಎಂದು ಕೋಲಾರ ನಗರದ ನಚಿಕೇತನ ನಿಲಯದಲ್ಲಿ ತಿಳಿಸಿದರು.
ದಲಿತ ಸಮಾಜದ ವ್ಯಕ್ತಿ ಈ ದೇಶದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿದ್ದಾರೆ ಎನ್ನುವ ಕಾರಣಕ್ಕೆ ಕೆಲವು ಮನುವಾದಿಗಳು ಹಾಗೂ ಜಾತಿವಾದಿಗಳು ಸಹಿಸುತ್ತಿಲ್ಲಾ, ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ತಾಯಿಯವರಿಗೆ ಆರ್ ಎಸ್ಎಸ್ ಶತಮಾನೋತ್ಸಕ್ಕೆ ಆಹ್ವಾನ ನೀಡಿದ್ರು, ಆ ಮಹಾತಾಯಿ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿ ನಿಮ್ಮ ಕಾರ್ಯಕ್ರಮಕ್ಕೆ ಬರಲ್ಲಾ ಅಂತ ನಿರಾಕರಣೆ ಮಾಡಿದ್ರು, ಇದನ್ನೇ ಮನಸ್ಸಿನಲ್ಲಿ ಕಿಶೋರ್ ರಾಜೇಶ್ ಅಂತ ವಕೀಲ ಮನಸ್ಸಿನಲ್ಲಿ ಇಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಕ್ಕೆ ಮುಂದಾಗಿರೋದು ಇಡೀ ದೇಶವೇ ತಲೆ ತಗ್ಗಿಸುವ ಘಟನೆಯಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಕೆಜಿಎಫ್, ಮುಳಬಾಗಿಲು ತಾಲೂಕಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು, ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡುತ್ತಿದ್ದು ಎಲ್ಲರೂ ಸೇರಿ ಕೋಲಾರ ಬಂದ್ ಗೆ ಯಶಸ್ವಿಯಾಗಿ ಮಾಡೋಣ ಎಂದು ಕರೆ ನೀಡಿದರು.
ನ್ಯಾಯ ಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿರುವ ರಾಕೇಶ್ ಕಿಶೋರ್ ರವರನ್ನು ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಪ್ರತಿಕ್ರಿಯೆಯನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿ ಕೋಲಾರ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ ಶಾಂತಿಯುತವಾಗಿ ಬಂದ್ ಯಶಸ್ವಿ ಮಾಡುತ್ತೇವೆ ಎಂದು ದಲಿತ ಸಮಾಜಸೇನೆ ರಾಜ್ಯಾಧ್ಯಕ್ಷ ಸೂಲಿಕೂಂಟೆ ಆನಂದ್ ತಿಳಿಸಿದರು
ಇದನ್ನು ಓದಿದ್ದೀರಾ..? ಆರುಮಂದಿ ವಲಸೆ ಕಾರ್ಮಿಕರ ಸಾವು ಸೂಕ್ತ ಪರಿಹಾರ ಕೊಡಿಸುವಲ್ಲಿ ರಾಜ್ಯ ಸರ್ಕಾರ ವಿಫಲ ಸಿಐಟಿಯು ತೀವ್ರ ಖಂಡನೆ
ಡಿಕ್ಕಾ ವೆಂಕಟೇಶ್, ಐಯಪ್ಪಾ, ರವಿ, ಪ್ರದೀಪ್, ಶ್ರೀಕಂಠ, ಮುನಿರಾಜು, ಮುಂತಾದವರು ಉಪಸ್ಥಿತರಿದ್ದರು





