ಚಿಂತಾಮಣಿಯ ಕೋನಪಲ್ಲಿ ಸಮೀಪ ಇರುವ ಏ ಆರ್ ಟಿ ಓ ಕಚೇರಿಯಲ್ಲಿ ಇಂದು ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಇಲಾಖೆಯ ಇನ್ಸ್ಪೆಕ್ಟರ್ ಹೆಚ್ ಮಂಜುನಾಥ್ ಮಾತನಾಡಿ ವಾಯು ಮಾಲಿನ್ಯವು ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿದರು. ವಾಯು ಮಾಲಿನ್ಯದಿಂದ ಓನ್ ಪದರ ಕುಗ್ಗುತ್ತಿದ್ದು ನೇರಳಾತೀತ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತಿರುವುದರಿಂದ ಮಾನವ ಆರೋಗ್ಯಕ್ಕೆ ಅಪಾಯ ಉಂಟಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ವಾಹನಗಳಿಂದ ಹೊರಬರುವ ಹೊಗೆ ಮಾಲಿನ್ಯ ತಡೆಗಟ್ಟಲು ನಿಗದಿತ ಅವಧಿಯಲ್ಲಿ ಹೊಗೆ ತಪಾಸಣೆ ಮಾಡಿಸಿಕೊಳ್ಳುವುದು,ಎಂಜಿನ್ ಫಿಲ್ಟರ್ ಮತ್ತು ಆಯಲ್ ಬದಲಾವಣೆ ಮಾಡಿಸುವುದು ಅತ್ಯವಶ್ಯಕವೆಂದು ಅವರು ತಿಳಿಸಿದರು. ಮರ-ಗಿಡಗಳನ್ನು ಬೆಳೆಸುವುದು, ಅಗತ್ಯವಿಲ್ಲದಿದ್ದರೆ ಪ್ರತ್ಯೇಕ ವಾಹನ ಬಳಸುವುದನ್ನು ತಪ್ಪಿಸಿ,ಒಟ್ಟಾಗಿ ವಾಹನ ಉಪಯೋಗಿಸುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನು ಓದಿದ್ದೀರಾ..? ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು : ಸಂಸದ ಎಂ. ಮಲ್ಲೇಶ್ ಬಾಬು.
ಈ ಸಂದರ್ಭದಲ್ಲಿ ಕಚೇರಿಯ ಅಧೀಕ್ಷಕರಾದ ಪಿ ದೇವರಾಜ್,ಹೋಂ ಗಾರ್ಡ್ ಮಂಜುನಾಥ್,ಕಚೇರಿಯ ಸಿಬ್ಬಂದಿ ಮಂಜು,ನಜ್ಮಾ,ವಾಹನ ಚಾಲಕ ವೆಂಕಟೇಶ್,ಗೋಪಾಲ್, ಸೇರಿದಂತೆ ಮತ್ತಿತರರು ಇದ್ದರು.





