ಬಾಗೇಪಲ್ಲಿ: ಕುಷ್ಠರೋಗ ನಿರ್ಮೂಲನಾ ಅಭಿಯಾನ ಆರಂಭವಾಗಿದೆ. ಇದು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಎಲ್ಲರೂ ಪರೀಕ್ಷಿಸಿಕೊಳ್ಳಬೇಕು. ದೇಶದಲ್ಲಿ ಕುಷ್ಠರೋಗವನ್ನು 2027ರೊಳಗೆ ನಿರ್ಮೂಲನೆ ಮಾಡಲು ಪಣತೊಡಲಾಗಿದೆ ಎಂದು ಡಾ.ವಿನೋದ್ ಕುಮಾರ್ ಹೇಳಿದರು.
ಪಾತಪಾಳ್ಯ ಹೋಬಳಿ ಕೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಷ್ಠರೋಗದ ಪತೆಹಚ್ಚು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕುಷ್ಠರೋಗವು ಮಾರಣಾಂತಿಕ ಕಾಯಿಲೆಯಲ್ಲ, ಇದು ಗುಣಪಡಿಸುವಂತಹ ಕಾಯಿಲೆಯಾಗಿದ್ದು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿದಾಗ ಮನೆಯ ಸದಸ್ಯರೆಲ್ಲರೂ ಪರೀಕ್ಷಿಸಿಕೊಳ್ಳಬೇಕು,’’ ಎಂದು ಪಾತಪಾಳ್ಯ ಸಾರ್ವಜನಿಕ ಆಸ್ಪತ್ರೆಯ ಡಾ.ವಿನೋದ್ ಕುಮಾರ್ ಹೇಳಿದರು.
ದೇಶದಲ್ಲಿ ಪ್ಲೇಗ್ ,ಕಾಲಾರಾ ಇನ್ನೂ ಮುಂತಾದ ರೋಗಗಳನ್ನು ನಿರ್ಮೂಲನೆಗೊಳಿಸಿದ್ದೇವೆ. ಕುಷ್ಠರೋಗವನ್ನು 2027ರೊಳಗೆ ನಿರ್ಮೂಲನೆಗೊಳಿಸಲು ನಾವೆಲ್ಲರೂ ಪಣತೊಡಬೇಕಿದೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಮನೆಗೆ ಬಂದಾಗ ಅವರಿಗೆ ಸಹಕರಿಸಿ ಸರಿಯಾದ ಮಾಹಿತಿ ನೀಡಬೇಕು. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು,’’ ಎಂದರು.
ಇದನ್ನು ಓದಿದ್ದೀರಾ…? ಮೀನು ಹಿಡಿಯಲು ಹೋದ ಮಹಿಳೆ ವಿದ್ಯುತ್ ತಂತಿಗಳಿಗೆ ಬಲಿ
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಹಾಗೂ ಸಿಬ್ಬಂದಿಗಳಾದ ಶಶಿಕಲಾ ,ಹರ್ಷಾಭಾನು,ಕಾಂಚನಾ,ಉಮಾದೇವಿ, ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.




