ಕೆಜಿಎಫ್ : ಬೇತಮಂಗಲ: ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಕೋಲಾರ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕೆಜಿಎಫ್ ತಾಲೂಕು ಘಟಕದ ನೂತನ ವರ್ಷದ 2026 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶಕುಂತಲಾ, ಪಾಮಿಲಾ, ಗೋವಿಂದಪ್ಪ, ವೆಂಕಟೇಶ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಛಾಯಾದೇವಿ, ಸರಸ್ವತಿ ,ಶಂಕರ್, ಮುರುಗೇಶ್, ಆಂಜನೇಯ ರೆಡ್ಡಿ, ನಾಗರಾಜ್ ,ಪ್ರಭಾಕರ್, ಎಲ್.ಎ ವಿಜಿ ಕುಮಾರ್ ಹಾಗೂ ಅನೇಕ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ಕೆ ಜಿ ಎಫ್ ತಾಲೂಕು ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ದೇವೇರಹಳ್ಳಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್ ಹಾಗೂ ಕಾರ್ಯದರ್ಶಿ ಪಧಾಧಿಕಾರಿಗಳು ನೇತೃತ್ವ ವಹಿಸಿದ್ದರು.
ಇದನ್ನು ಓದಿದ್ದೀರಾ..? ಬದುಕು ಅಂಕಗಳಿಂದ ನಿರ್ಧಾರವಾಗುವುದಿಲ್ಲ ಮೌಲ್ಯಯುತವಾದ ನಡುವಳಿಕೆಗಳು ಉತ್ತಮ ಬದುಕನ್ನು ನಿರ್ಧರಿಸುತ್ತದೆ:ಉಪ ನಿರ್ದೇಶಕ ಆದಿಶೇಷರಾವ್
ಈ ಕಾರ್ಯಕ್ರಮದಲ್ಲಿ ಕೆಜಿಎಫ್ ಬಿಇಓ ಅನಿತಾ, ರಾಜ್ಯಾಧ್ಯಕ್ಷ ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಪ್ಪಯ್ಯಗೌಡ, ಶಿಕ್ಷಣ ಇಲಾಖೆ ನೌಕರರ ಸಂಘದ ಬೆಂಗಳೂರು ವಿಭಾಗೀಯ ಕಾರ್ಯಾಧ್ಯಕ್ಷ ವೇಣುಗೋಪಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮನೋಹರ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ರಾಧಮ್ಮ, ಜಿಲ್ಲಾ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ವೆಂಕಟೇಶ್ ಗೌಡ ,ಕೃಷ್ಣೇಗೌಡ ಖಜಾಂಜಿ ಮಂಜುನಾಥ ಆಚಾರಿ, ಸುಬ್ರಮಣಿ ಹಾಗೂ ಕೋಲಾರ ಜಿಲ್ಲಾ ಶಾಖೆಯ ಎಲ್ಲಾ ಪದಾಧಿಕಾರಿಗಳು ಬಂಗಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮಾಲೂರು ತಾಲೂಕು ಅಧ್ಯಕ್ಷ ನಾಗರಾಜ್, ಮುಲಬಾಗಿಲು ಘಟಕದ ಅಧ್ಯಕ್ಷರಾದ ನರಸಿಂಹಮೂರ್ತಿ, ಖಜಾಂಚಿ ವನಜ, ಕೋಲಾರ ತಾಲೂಕು ಖಜಾಂಚಿ ವರಲಕ್ಷ್ಮಿ ಬಂಗಾರ್ಪೇಟೆ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶ್ವತ್ ಹಾಗೂ ಅನೇಕ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.





