ಕೆಜಿಎಫ್: ಕೆಪಿಸಿಸಿ ಸದಸ್ಯ,ಮಾಜಿ ಗ್ರಾಪಂ ಅಧ್ಯಕ್ಷ ದುರ್ಗಾ ಪ್ರಸಾದ್ ರವರ ತಾಯಿ ಮಾಣಿಕ್ಯಮ್ಮ ಗಂಗಾದರಂ (90) ಬುಧುವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ದೈವಾದೀನರಾಗಿದ್ದು,
ಪುತ್ರ ದುರ್ಗಾ ಪ್ರಸಾದ್,ಸೊಸೆ ದೀಪ್ತಿ ಪ್ರಸಾದ್,ಮೂವರು ಹೆಣ್ಣು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬೇತಮಂಗಲ ಗ್ರಾಮದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನಾದಸ್ವರ ಮತ್ತು ಸಂಗೀತವನ್ನು ಕಲಿಸಿ ಅವರ ಜೀವನೋಪಾಯಕ್ಕೆ ದಾರಿ ದೀಪವಾಗಿದ್ದ ಪ್ರಖ್ಯಾತ ಸಂಗೀತ,ಮತ್ತು ನಾದಸ್ವರ ವಿದ್ವಾನ್ ದಿವಂಗತ ಟಿ ಜಿ ಗಂಗಾಧಾರಂ ರವರ ಧರ್ಮಪತ್ನಿ, ಮಾಣಿಕ್ಯಮ್ಮ ಸಹ ನಾದಸ್ವರ ಕಲಿಯಲು ಪಾಠಶಾಲೆಗೆ ಬರುತ್ತಿದ್ದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುವ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ..? ರಾಷ್ಟ್ರೀಯ ಯುವ ಅಧ್ಯಕ್ಷರಾಗಿ ಡಾ.ಎಸ್ ಅಫ್ತಾಬ್ ಹುಸೇನ್ ನೇಮಕ
ಗುರುಕುಲ ಪದ್ಧತಿಯಲ್ಲಿ ಸಂಗೀತ ಮತ್ತು ನಾದಸ್ವರ ಕಲಿಸುತ್ತಿದ್ದ ಗಂಗಾದರಂ ಬೇತಮಂಗಲ ಹೆಸರನ್ನು ಪ್ರಖ್ಯಾತಿ ಗೊಳಿಸಿದ್ದರು.ಅವರ ಧರ್ಮ ಪತ್ನಿಯಾಗಿದ್ದ ಮಾಣಿಕ್ಯಮ್ಮ ಪತಿಯ ಜೊತೆ ಜೊತೆಯಲ್ಲೇ ಎಲೆಮರೆ ಕಾಯಿಯಂತೆ ಸೇವೆ ಮಾಡುವ ಮೂಲಕ ಬಡವರ ಪಾಲಿಗೆ ಅಮ್ಮನೇ ಆಗಿದ್ದರು. ಮೃದು ಸ್ವಭಾವಿ,ಹಾಗೂ ಮಾನವೀಯತೆ ಗುಣಗಳಿಂದ ಎಲ್ಲರನ್ನೂ ಪ್ರೀತಿಯಿಂದ ಮಾತನಾಡುತ್ತ ಸ್ನೇಹಜೀವಿಯಾಗಿದ್ದರು.





