ಚಿಂತಾಮಣಿ:ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಡಾ!ಬಾಬು ಜಗಜೀವನ್ ರಾಮ್ ಅಧ್ಯಯನ,ಕಲಿಕಾ ಕೇಂದ್ರ ಸ್ಥಾಪನೆಗೆ 1 ಎಕರೆ ಜಮೀನು ಮಂಜೂರು ಮಾಡಿಸಿದ್ದು ಮಾದರ ಸಮುದಾಯದ ಮುಖಂಡರುಗಳು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ ಸುಧಾಕರ್ ರವರಿಗೆ ಅಭಿನಂದನೆ ಸಲ್ಲಿಸಿದರು.
ಇಂದು ನಗರದ ಏಪಿಎಂಸಿ ಯಾರ್ಡ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಏ ಡಿ ಎಸ್ ಎಸ್ ಸಂಘಟನೆ ಜಿಲ್ಲಾಧ್ಯಕ್ಷರಾದ ಶಂಕರ್ ಪ್ರಧಾನ ಕಾರ್ಯದರ್ಶಿ ರೂಹಿಲ್ ತೇಜ್,ಮಾತನಾಡಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ನೀಡಿರುವದು ಬಹಳ ಸಂತೋಷವಾಗಿದೆ,ಅಧ್ಯಯನ ಕಲಿಕಾ ಕೇಂದ್ರ ಜಿಲ್ಲಾ ಹಾಗೂ ಇಡೀ ರಾಜ್ಯದಲ್ಲೇ ಇಲ್ಲ ಎಂದು ಹೇಳಿದ ಅವರು ಮಾದರ ಸಮಾಜದ ವತಿಯಿಂದ ಇದುವರೆಗೂ ಶಾಸಕರಿಗೆ ಒಂದೇ ಒಂದು ಮನವಿ ಪತ್ರ ಸಹಾ ಸಲ್ಲಿಸದೆ ಇದ್ದರೂ.ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಚಿವರು ಸಮಾಜವನ್ನು ಗಣನೆಗೆ ತೆಗೆದುಕೊಂಡು ನಮ್ಮ ಸಮಾಜದ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯಕ್ಕೆ ಸಮಾಜದ ಬೆಳವಣಿಗೆ ಅನುಕೂಲ ಆಗಲೆಂದು ದೂರ ದೃಷ್ಟಿಯಿಂದ ಅಧ್ಯಯನ ಕಲಿಕಾ ಕೇಂದ್ರ ಸ್ಥಾಪನೆ ಮಾಡುತ್ತಿದ್ದಾರೆ,ದಲಿತ ಸಮುದಾಯದ(ಮಾದರ)ಸಮಾಜದ ವತಿಯಿಂದ ಸಚಿವರಿಗೆ ಅಭಿನಂದನೆಗಳು ತಿಳಿಸಿದರು.
ಇದನ್ನು ಓದಿದ್ದೀರಾ..?ಬೆಂ ಗ್ರಾಮಾಂತರ ಎಸ್ಪಿ ಆಗಿದ್ದ ಸಿ.ಕೆ ಬಾಬಾ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ ಯಾಗಿ ನೇಮಕ
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರಮೇಶ್,ಶಿವ,ಕೃಷ್ಣ,ಪವನ್,ಪೃಥ್ವಿರಾಜ್,ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.





