ಕೋಲಾರ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆತ ಖಂಡಿಸಿ ನಾಳೆ ಶುಕ್ರವಾರ ಕೋಲಾರ ಬಂದ್ ಹಮ್ಮಿಕೊಂಡಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮೂಲಕ ಸಂಚರಿಸಿ ಬಂದ್ ಗೆ ಕರೆ ನೀಡಿದರು.
ಕೋಲಾರದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹಲವಾರು ಮುಖಂಡರು ಇಂದು ನಗರದ ಪ್ರಮುಖ ರಸ್ತೆಗಳಾದ ಬಂಗಾರಪೇಟೆ ವೃತ್ತ, ಎಸ್ ಎನ್ ಆರ್ ಸರ್ಕಲ್, ಡೂಂಲೈಟ್ ವೃತ್ತ, ಕ್ಲಾಕ್ ಟವರ್, ಬೈಪಾಸ್, ಎಂ.ಜಿ ರಸ್ತೆ, ಹೊಸ ಬಸ್ ನಿಲ್ದಾಣ, ಅಮ್ಮವಾರಿಪೇಟೆ, ಶ್ರೀನಿವಾಸಪುರ ಸರ್ಕಲ್, ಮಿಲ್ಲತ್ ಸರ್ಕಲ್ ಮುಂತಾದ ಸ್ಥಳಗಳಲ್ಲಿ ಬೈಕ್ ಮೂಲಕ ತೆರಳಿ ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಹಿರಿಯ ದಲಿತ ಮುಖಂಡರು ಮಾತನಾಡಿ ನಾಳೆಯ ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕು ಯಾಕೆಂದರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ಘಟನೆ ಸಾಂವಿಧಾನಿಕ್ಕೆ ಮಾಡಿದ ಅಪಮಾನವಾಗಿದೆ, ವಕೀಲ ಕಿಶೋರ್ ರಾಜೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮುಂದೆ ಈ ರೀತಿಯ ಘಟನೆ ನಡೆಯಬಾರದು ಎಂದರು.
ಇದನ್ನು ಓದಿದ್ದೀರಾ..? ಸಮೀಕ್ಷೆಗೆ ತೆರಳಿ ಶಿಕ್ಷಕಿ ಸಾವು ಮನೆಗೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ಸ್ವಾಂತನ
ಈ ಸಂದರ್ಭದಲ್ಲಿ ವಿಜಯ್ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ನಾರಾಯಣಸ್ವಾಮಿ, ಅನ್ವರ್ ಪಾಷ, ಹಿದಾಯತ್, ಬಾಬಾ ಜಾನ್, ಅಬ್ಬನಿ ಶಿವಪ್ಪ, ಮಾರ್ಜೆನಹಳ್ಳಿ ಬಾಬು ಮುಂತಾದವರು ಉಪಸ್ಥಿತರಿದ್ದರು





