ಚಿಂತಾಮಣಿ:ನಗರದ ಹೊರವಲಯದ ನಲ್ಲಗುಟ್ಟಹಳ್ಳಿ ಗ್ರಾಮದ ಸರ್ವೆ ನಂ:42ರ.ಭಾಗ 27ರಲ್ಲಿ 30 ಗುಂಟೆ ಜಮೀನನ್ನ ನಮ್ಮ ಜನಾಂಗದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಕಲಿಕಾ ಕೇಂದ್ರವನ್ನು ಸ್ಥಾಪಿಸಲು ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ ಸುಧಾಕರ್ ರವರು ಸರ್ಕಾರದಿಂದ ಮಂಜೂರು ಮಾಡಿಸಿದ್ದು ಅವರಿಗೆ ನಮ್ಮ ಜನಾಂಗದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್ ಶ್ರೀನಿವಾಸ್ ಹೇಳಿದರು.
ಇಂದು ಸಚಿವರ ನಿವಾಸದಲ್ಲಿ ಜಮೀನು ಮಂಜೂರು ಆಗಿರುವ ಅಧಿಕೃತ ಜ್ಞಾಪನ ಪತ್ರವನ್ನು ಪಡೆದ ನಂತರ ಮಾತನಾಡಿದವರು ಮುಂದೆಯೂ ಸಹ ನಮ್ಮ ಸಮುದಾಯದ ಅಭಿವೃದ್ಧಿಗೆ ಸಚಿವರ ಸಹಕಾರ ಅಗತ್ಯವಿದೆ ಎಂದು ಹೇಳುತ್ತಾ ನಾವುಗಳು ಸಚಿವರಿಗೆ ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಮಕ್ಕಳಿಗೆ ಪೋಷಕರ ಆಶೀರ್ವಾದ ಮುಖ್ಯ: ಡಿಐಜಿಪಿ ಡಿ.ದೇವರಾಜ್
ಬೋವಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಂ ಗುರ್ರಪ್ಪ, ಭೋವಿ ಸಂಘದ ಸರ್ಕಾರಿ ನೌಕರ ಸದಸ್ಯ ಶಿವನಂದ, ದಶರಲ್,ಮುನಿ ವೆಂಕಟಪ್ಪ,ವಿ.ಸಿ ನಾಗರಾಜ್,ಧಾಸರಿ ವೆಂಕಟೇಶ್,ಮಧು,ಪ್ರಕಾಶ್,ಗ್ರಾಮ ಪಂಚಾಯತಿ ಸದಸ್ಯ ರಮೇಶ್,ರಾಂಪುರ ಗ್ರಾಮ್ ಪಂಚಾಯತ್ ಸದಸ್ಯ ಶ್ರೀನಿವಾಸ್,ಆರ್ ಶ್ರೀನಿವಾಸ್,ಅಂಜನ್ ಪ್ರಸಾದ್, ಸೇರಿದಂತೆ ಸಮುದಾಯ ಎಲ್ಲಾ ಮುಖಂಡರು ಭಾಗವಹಿಸಿದ್ದರು.




