ಕೋಲಾರ : ತಾಲೂಕಿನ ನರಸಾಪುರ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಮುಖ್ಯ ರಸ್ತೆಯ ಮಧ್ಯೆ ಗುಂಡಿಗಳು ಬಿದ್ದು ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ರಾಮಸಂದ್ರ ಗ್ರಾಮದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 75 ರಿಂದ ಸೇಫ್ ಎಕ್ಸ್ಪ್ರೆಸ್ ಕಂಪನಿಯವರೆಗೂ ಹಾಳಾದ ರಸ್ತೆಯನ್ನು ಸಿ ಎಸ್ ಆರ್ ಯೋಜನೆಯ ನಿಧಿಯಲ್ಲಿ ನೂತನ ರಸ್ತೆಯನ್ನು ಮಾಡುತ್ತೇವೆ ಎಂದು ಆ ರಸ್ತೆಯ ಪಕ್ಕದಲ್ಲಿರುವ ಕಂಪನಿಗಳಾದ ಸೇಫ್ ಎಕ್ಸ್ಪ್ರೆಸ್, ಫ್ಲಿಪ್ ಕಾರ್ಟ್ ಮತ್ತು ನೈಕಾ ಕಂಪನಿಗಳು ಭರವಸೆ ನೀಡಿದ್ದವು,
ಆದರೆ ಭರವಸೆಯಂತೆ ಇದುವರೆವಿಗೊ ರಸ್ತೆಯ ಕಾಮಗಾರಿಯನ್ನು ಪ್ರಾರಂಭ ಮಾಡಿಲ್ಲ ತಾತ್ಕಾಲಿಕವಾಗಿ ಮಣ್ಣನ್ನು ಸಹ ಹಾಕಿರುವುದಿಲ್ಲ, ಸೇಫ್ ಎಕ್ಸ್ಪ್ರೆಸ್, ಫ್ಲಿಪ್ಕಾರ್ಟ್ ಮತ್ತು ನೈಕಾ ಕಂಪನಿಗಳಿಗೆ ಭೇಟಿ ನೀಡಿ ರಸ್ತೆಯನ್ನು ಸರಿಪಡಿಸಿ ಕೊಡಿ ಎಂದು ಕೇಳಿದಾಗ ಹಿರಿಯ ಅಧಿಕಾರಿಗಳು ಗಮನಕ್ಕೆ ತರಲಾಗಿದೆ ಎಂದು ಸುಮಾರು 3 ತಿಂಗಳುಗಳಿಂದ ಸತಾಯಿಸುತಿದ್ದಾರೆ, ಮತ್ತೆ ಕೇಳಿದಾಗಲೆಲ್ಲ ಮಳೆಯ ನೆಪ ಹಾಕಿ ರಸ್ತೆ ಮಾಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು,
ಜಿಲ್ಲೆಯ ಗಡಿ ಗ್ರಾಮವಾದ ರಾಮಸಂದ್ರ ಗ್ರಾಮಕ್ಕೆ ಶಾಸಕ ಕೊತ್ತೂರು ಜಿ ಮಂಜುನಾಥ್ ಅವರ ಅನುದಾನದಲ್ಲಿ ಗ್ರಾಮದ ಇತಿಹಾಸದಲ್ಲಿಯೇ ಗ್ರಾಮದ ಒಳಗಡೆ 3 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ, ಆದರೆ ರಸ್ತೆಯನ್ನು ಮಾಡುತ್ತೇವೆ ಎಂದು ಒಪ್ಪಿಕೊಂಡ ಕಂಪನಿಗಳು ಇದುವರೆಗೂ ರಸ್ತೆಯನ್ನು ಸರಿಪಡಿಸಿಲ್ಲ, ರಸ್ತೆಯ ಈ ಹಳ್ಳಗಳಲ್ಲಿ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು
ರಾಮಸಂದ್ರ ಗ್ರಾಮದ ಕೆರೆಯಲ್ಲಿ ಸುಮಾರು 25 ರಿಂದ 30 ಅಡಿಗಳಷ್ಟು ಹಾಳ ಇಟ್ಟು ರಾಷ್ಟ್ರೀಯ ಎಕ್ಸ್ಪ್ರೆಸ್ ಹೆದ್ದಾರಿಗೆ ಮತ್ತು ಕ್ರೌನ್ ಕಂಪನಿಯವರು ಮಣ್ಣನ್ನು ತೆಗೆದುಕೊಂಡು ರಸ್ತೆಗಳು ಹಾಳು ಆಗಲು ಅವರು ಸಹ ಕಾರಣರಾಗಿರುತ್ತಾರೆ, ಮಣ್ಣನ್ನು ತೆಗೆಯುವ ವಿಚಾರದಲ್ಲಿ ಕೇಳಲು ಹೋದಾಗ ದೌರ್ಜನ್ಯ ಮಾಡಲು ಬಂದಿದ್ದಾರೆ, ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿದ್ದು ಕೆಲವು ನಿಯಮಗಳನ್ನು ಗಾಳಿಗೆ ತೋರಿದ್ದಾರೆ ಎಂದರು.
ಇದನ್ನು ಓದಿದ್ದೀರಾ..? ಇಂಜಿನಿಯರಿಂಗ್ ಕಾಲೇಜ್ ಕಾಮಗಾರಿ ಕೆಲಸ ನೋಡಿ ಮಾಜಿ ಶಾಸಕರಿಗೆ ಹೊಟ್ಟೆ ಉರಿಯುತ್ತದೆ
ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ನಿಗದಿತ ಹೊರೆ ಮಿತಿಗಳಿಗಿಂತ ಹೆಚ್ಚಿನ ಲೋಡ್ ಮಾಡಿಕೊಂಡು ಸಂಚರಿಸುತ್ತಿವೆ ಟ್ರಕ್ ಓವರ್ ಲೋಡಿಂಗ್ ನಿಯಮಗಳನ್ನು ಗಾಳಿಗೆ ತೂರಿವೆ, ಕೂಡಲೇ ರಸ್ತೆಯನ್ನು ನೀಡಿರುವ ಭರವಸೆಯಂತೆ ಕಂಪನಿಯವರು ರಸ್ತೆಯನ್ನು ಸರಿಪಡಿಸಬೇಕೆಂದು ವೇಮಗಲ್ ನರಸಾಪುರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಮಸಂದ್ರ ಕುಮಾರ್ ಒತ್ತಾಯಿಸಿದ್ದಾರೆ,





