ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ತಯಾರಿಸುವ ಮಿಸೈಲ್ ಗಳಿಗೆ ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ರವರ ಹೆಸರನ್ನು ಇಡಬೇಕು.ದೇಶದ ಅಭಿವೃದ್ದಿಗೆ ಕಲಾಂ ಅವರ ಸೇವೆ ಹಾಗೂ ಶ್ರಮಕ್ಕೆ ಗೌರವಸೂಚಿಸಬೇಕು,
ಚಿಕ್ಕಬಳ್ಳಾಪುರ ನಗರದಲ್ಲಿಯೂ ಎಪಿಜೆ ಅಬ್ದುಲ್ ಕಲಾಂ ಅವರ ಪುತ್ಥಳಿ ಆನಾವರಣ ಮಾಡಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಂಸದ ಹಾಗೂ ಶಾಸಕರಿಗೆ ಎಪಿಜೆ ಅಬ್ದುಲ್ ಕಲಾಂ ಪೌಂಡೇಶನ್ ಕರ್ನಾಟಕ ರಾಜ್ಯ ಅಧ್ಯಕ್ಷ ನಂದಿ ಎಂ.ಎಂ. ಭಾಷಾ ಒತ್ತಾಯಿಸಿದರು.
ಮಾಜಿ ರಾಷ್ಟ್ರಪತಿ ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಜನುಮದಿನದ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಅಬ್ದುಲ್ ಕಲಾಂ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಇದನ್ನು ಓದಿದ್ದೀರಾ..? ಸಮೀಕ್ಷೆಗೆ ತೆರಳಿ ಶಿಕ್ಷಕಿ ಸಾವು ಕುಟುಂಬಸ್ಥರಿಗೆ ಕಾಂಗ್ರೆಸ್ ಮುಖಂಡರಿಂದ ಸಾಂತ್ವನ
ಈ ವೇಳೆ ಪ್ರಧಾನ ಕಾರ್ಯದರ್ಶಿ ಹಾಷಿಮ್ ಬನ್ನೂರು,ಜಿಲ್ಲಾಧ್ಯಕ್ಷ ರಾಜ್ ಶೇಖರ್,ಬಾಲಕುಂಟಹಳ್ಳಿ ಗಂಗಾದರ್,ಸಪೀರ್,ನವಾಜ್ ಬಾಷ ಮತ್ತು ಇತರರು ಉಪಸ್ಥಿತರಿದ್ದರು.
ಮುಂದೆ ನಿರ್ಮಾಣವಾಗುವ ಮಿಸೈಲ್ ಗೆ ಅಬ್ದುಲ್ ಕಲಾಂ ಹೆಸರಿಡಿ
Date:
ಪೋಸ್ಟ್ ಹಂಚಿಕೊಳ್ಳಿ:




