ಚಿಂತಾಮಣಿ:ವಿದ್ಯಾರ್ಥಿನಿಯರ ಜೊತೆ ಮುಖ್ಯ ಶಿಕ್ಷಕ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಶಾಲೆ ಮುಂಭಾಗ ಪ್ರತಿಭಟನೆಗೆ ಕುಳಿತ ಘಟನೆ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಎದುರುಗಡೆ ನಡೆದಿದೆ.
ಸದರಿ ಶಾಲೆಯ ಹತನೇ ತರಗತಿಯಲ್ಲಿ 57 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲಾ ಆವರಣದಲ್ಲಿರುವ ಇರುವ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಹತ್ತನೇ ತರಗತಿಯ ಸುಮಾರು 50 ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದು.
ಶಾಲೆಯ ಮುಖ್ಯ ಶಿಕ್ಷಕ ಓಬಯ್ಯ ಕೆ,ಎಂಬುವವರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಲ್ಲದೆ,ಕೂಡಲೇ ಮುಖ್ಯ ಶಿಕ್ಷಕನನ್ನು ವರ್ಗಾವಣೆ ಮಾಡದೇ ಇದ್ದರೆ,ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ರಸ್ತೆ ತಡೆ ನಡೆಸಲು ಮುಂದಾದರು,ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆ ನಡೆಸಲು ಅವಕಾಶ ಮಾಡಿಕೊಡಲಿಲ್ಲ,ನಂತರ ವಿದ್ಯಾರ್ಥಿನಿಯರು ಕಣ್ಣಲ್ಲಿ ನೀರು ಹಾಕುತ್ತಾ ಶಾಲೆಯ ಎದುರುಗಡೆ ಪ್ರತಿಭಟನೆಗೆ ಕುಳಿತರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಶಾಲೆಯ ಶಾಲೆಯ ಮುಖ್ಯ ಶಿಕ್ಷಕನ ಶಿಕ್ಷಕನ ಅಸಭ್ಯ ವರ್ತನೆ ಬಗ್ಗೆ ಡಿಡಿಪಿಓ ಗಮನಕ್ಕೆ ತಂದು ಮೇಲಾಧಿಕಾರಿಗಳಿಂದ ವರದಿ ಬಂದ ತಕ್ಷಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದಾಗ,ಪೋಷಕರು ಬಿಇಓ ಮಾತಿಗೆ ಜಗ್ಗಲಿಲ್ಲ ನಂತರ ಬಿ ಇ ಓ ರವರು ಮುಖ್ಯ ಶಿಕ್ಷಕನಿಗೆ ಒಂದು ತಿಂಗಳ ಕಾಲ ರಜಾ ನೀಡಿ ಕಳುಹಿಸಿ ಕೊಟ್ಟ ನಂತರ ಪೋಷಕರು ಹಾಗೂ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಹಿಂಪಡೆದರು.
ಇದನ್ನು ಓದಿದ್ದೀರಾ..? ಅಂಬೇಡ್ಕರ್ ಸಮತಾ ದಳ ಸಂಘಟನೆಯಿಂದ ನ.23ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪ್ರತಿಭಟನೆಯಲ್ಲಿ ಚೌಡರೆಡ್ಡಿ,ಪ್ರಭಾವತಿ, ಗಂಗಾಧರಪ್ಪ,ಸುಜಾತ,ಶ್ರೀನಾಥ್, ಬೈರಮ್ಮ,ಶೋಭಾ,ಪವಿತ್ರ,ಅಶ್ವಿನಿ, ಶಾಂತಮ್ಮ,ರವಿ,ದೇವರಾಜ್,ಗೋಕುಲ್,ವೆಂಕಟ್ ಶಿವ,ಸೇರಿದಂತೆ ಮುಂತಾದವರು ಇದ್ದರು.





