ಬೇತಮಂಗಲ: ಬೇತಮಂಗಲ ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯ್ತಿ ಹಳೆ ಕಟ್ಟಡದ ಜಾಗದಲ್ಲಿ ವಾಣಿಜ್ಯ ಮಳಿಗೆಗೆ ಶಾಸಕಿ ಎಂ.ರೂಪಕಲಾ ಗುದ್ದಲಿ ಪೂಜೆ ನೆರೆವೆರಿಸಿದರು.
ಈ ವೇಳೆ ಮಾತನಾಡಿದ ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀನುಕಾರ್ತಿಕ್ ಹಳೆ ಮದ್ರಾಸ್ ರಸ್ತೆ ಅಗಲಿಕರಣ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಕೆಡವಲಾಗಿತ್ತು ಆದ್ದರಿಂದ ನಗರದ ಹೃದಯ ಭಾಗದಲ್ಲಿ ಕಟ್ಟಡವಿರುವುದರಿಂದ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಬೇಕು ಎಂದು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನೀರ್ಣಾಯವನ್ನು ಅಂಗಿಕರಿಸಲಾಗಿತ್ತು .
ಈ ಹಿನ್ನಲೆಯಲ್ಲಿ ಇಧೀಗ ಕಟ್ಟಡದ ಗುದ್ದಲಿ ಪೂಜೆ ನೆರೆವೆರಿಸಲಾಗಿದ್ದು ಸೈಟ್ 3865 ಇದ್ದು 2560 ಜಾಗದಲ್ಲಿ ಕಟ್ಟಡ ನಿರ್ಮೀಸಲಾಗುತ್ತಿದೆ 12 ಲಕ್ಷ ವೆಚ್ಚದಲ್ಲಿ ಪಂಚಾಯ್ತಿಯ ವರ್ಗ 1 ರಲ್ಲಿ 12 ಲಕ್ಷ ಅನುದಾನದಲ್ಲಿ ಕಟ್ಟಡದ ಪಾಯ ಕೆಲಸ ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಬೇತಮಂಗಲ ಬಸ್ ನಿಲ್ದಾಣದ ಹಳೆ ಪಂಚಾಯ್ತಿ ಕಟ್ಟಡದ ಮುಂಭಾಗದಲ್ಲಿ ಆಟೋಗಳನ್ನು ನಿಲ್ಲಿಸಿಕೊಂಡು ನಮ್ಮ ಜೀವನ ಸಾಗಿಸುತ್ತಿದ್ದೇವು ಆದರೆ ಕೆಲವರು ಪೊಲೀಸರು ಇಲ್ಲಿ ನಿಲ್ಲಿಸುವುದು ಬೇಡವೆಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದರಿಂದ ನಾವು ನಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ತಿಳಿಯದೆ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದೇವೆ ಆದ್ದರಿಂದ ನಮಗೆ ಆಟೋ ನಿಲ್ಲಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಅಟೋ ಚಾಲಕರು ಶಾಸಕಿ ರೂಪಕಲಾಶಶಿಧರ್ ರವರಿಗೆ ಮನವಿ ಮಾಡಿದರು.
ತಕ್ಷಣ ಸ್ಪಂದಿಸಿದ ಶಾಸಕಿ ಆಟೋ ಚಾಲಕರು ಕಷ್ಟಪಟ್ಟು ದುಡಿಯುವ ವರ್ಗವಾಗಿರುವುದರಿಂದ ಅವರಿಗೆ ತೊಂದರೆ ನೀಡಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿ ಕೆಪಿಸಿಸಿ ಸದಸ್ಯ ದುರ್ಗಪ್ರಸಾದ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀನುಕಾರ್ಥಿಕ್ ಹಾಗೂ ಪೊಲೀಸ್ ಅಧಿಕಾರಿಗಳು ಆಟೋ ಚಾಲಕರು ಒಂದಾಗಿ ಸಭೆ ನಡೆಸಿ ಒಂದು ನಿರ್ಣಾಯಕ್ಕೆ ಬರಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಹಳ್ಳಿಗಳ ಸಂಪರ್ಕ ರಸ್ತೆಗಳಿಗೆ 200 ಕೋಟಿ ಅನುದಾನದಲ್ಲಿ ಅಭಿವೃದ್ಧಿ: ಕೊತ್ತೂರು ಮಂಜುನಾಥ್
ಈ ಗುದ್ದಲಿ ಪೂಜೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಲವೇಲಮ್ಮ , ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ಇನಾಯತ್, ನಾರಾಯಣ ಸ್ವಾಮಿ, ಎಪಿಎಂಸಿ ಸದಸ್ಯ ರಾಮಚಂದ್ರ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಮತ ಗಣೇಶ್(ಗನಿ)ಸದಸ್ಯರಾದ ಸುಕನ್ಯ, ಏಜಾಜ್ ಪಾಷಾ, ಡೇರಿ ಮಂಜು, ಆನಂದ್, ಓಂ ಸುರೇಶ್, ಸುರೇಂದ್ರ ಗೌಡ, ರಾಧಮ್ಮ, ರೇಣುಕಾ, ಜಯಮ್ಮ, ಅರ್ಬಿನ್, ಶ್ರೀನಿವಾಸ್, ಕಳ್ಳಿಕುಪ್ಪ ವೆಂಕಟಾ ಚಲಪತಿ, ಕೆಪಿಸಿಸಿ ಸದಸ್ಯ ದುರ್ಗಪ್ರಸಾಧ,ಶೇಷಾಧ್ರಿ ,ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ್ ,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಸಂತ್ ಹಾಗೂ ಇತರರು ಹಾಜರಿದ್ದರು.





