ಬೇತಮಂಗಲ: ಹೋಬಳಿಯ ಟಿ.ಗೋಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಸಂದ್ರ ಮಿಟ್ಟೂರು ಗ್ರಾಮದ ಸರ್ವೆ ನಂಬರ್ 147ರಲ್ಲಿನ 51 ಎಕರೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಗ್ರಾಮದ ದಲಿತ ಬಡವರಿಗೆ ನಿವೇಶನ ಹಾಗೂ ಪ್ರತಿ ಕುಟುಂಬಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡಬೇಕೆಂದು ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಳಿಯ ಐಸಂದ್ರ ಮಿಟ್ಟೂರು ಗ್ರಾಮದ ಸರ್ಕಾರಿ ಗೋಮಾಳ ಜಮೀನಿನಲ್ಲಿ ಎವೈವಿಕೆ ಸಂಘಟನೆ ಗ್ರಾಮಸ್ಥರೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಯಿತು.
ಈ ವೇಳೆ ಜೈ ಭೀಮ್ ಶ್ರೀನಿವಾಸ್ ಮಾತನಾಡಿ, ಅನೇಕ ವರ್ಷಗಳಿಂದ ಕೆಜಿಎಫ್ ತಾಲೂಕಿನ ದೀನ ದಲಿತರ, ಬಡವ, ನಿರ್ಗತಿಕರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಆಯ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳದಲ್ಲಿ ಬಡಾವಣೆ ನಿರ್ಮಿಸಿ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸುತ್ತಾ ಬರುತ್ತಿದ್ದೇವೆ ಆದರೆ ಅಧಿಕಾರಿಗಳು ಮೀನಾಮೇಷ ಎನಿಸುತ್ತಿದ್ದಾರೆ. ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅದೇ ರೀತಿಯಲ್ಲಿ ಐಸಂದ್ರ ಮಿಟ್ಟೂರು ಗ್ರಾಮದಲ್ಲಿ ಸ.ನಂ 147ರ 51 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದರೂ, ಬಲಾಡ್ಯರು , ಕೋಲಾರ ಮೂಲದವರು ಈ ಭಾಗದಲ್ಲಿ ಒತ್ತುವರಿ ಮಾಡಿಕೊಂಡು ಸ್ಥಳೀಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಈ ಕೂಡಲೇ ಸರ್ವೆ ನಡೆಸಿ ಸರ್ಕಾರಿ ಗೋಮಾಳ ಉಳಿಸಿ, ಸ್ಥಳೀಯ ಗ್ರಾಮಸ್ಥರಿಗೆ ಭೂಮಿ ಮತ್ತು ನಿವೇಶನ ರಹಿತರಿಗೆ ಹಂಚಬೇಕೆಂದು ಆಗ್ರಹಿಸಿದರು.
ಕಳೆದ ತಿಂಗಳಿನಲ್ಲಿ ನಮ್ಮ ಸಂಘಟನೆಯು ಬೇತಮಂಗಲದಿಂದ ಕೆಜಿಎಫ್ ತಾಲೂಕು ಕಚೇರಿ ವರೆಗೂ ಜಾಥ ನಡೆಸಿ ಸರ್ಕಾರಿ ಗೋಮಾಳ ಮಂಜೂರಿಗಾಗಿ ಆಗ್ರಹಿಸಿ ಮನವಿಪತ್ರ ನೀಡಿದ್ದೆವು ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿದರು.
ಜಿಲ್ಲಾಧ್ಯಕ್ಷ ಗೋವಿಂದಪ್ಪ ಮಾತನಾಡಿ, ನಮ್ಮ ಗ್ರಾಮದ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಳ್ಳುವ ನೆಪದಿಂದ ಉಳುಮೆ ಮಾಡುವುದು ಕಾಂಪೌಂಡ್ ಹಾಕುವುದು ಚಪ್ಪಡಿ ಕಲ್ಲನ್ನು ಹೊಡೆಯುವುದು ಹೇಗೆ ಅನೇಕ ಅಕ್ರಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಕಳೆದ ಮೂರು ದಿನಗಳ ಹಿಂದೆ ಗುಡಿಸುಲೇ ಹಾಕಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಸರ್ವೇ ನಂಬರ್ 147ರ ಜಮೀನನ್ನು ಸರ್ವೆ ನಡೆಸಿ ಹದ್ದು ಬಸ್ತು ಗುರುತಿಸಿ ನಮ್ಮ ಗ್ರಾಮದ ನಿವೇಶನ ರೈತರಿಗೆ ಬಡ ಕೂಲಿ ಕಾರ್ಮಿಕರಿಗೆ ಭೂಮಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಮನವೊಲಿಸಲು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ಉಪಾಧ್ಯಕ್ಷ ವೆಂಕಟೇಶಪ್ಪ, ಉಪ ತಹಸೀಲ್ದಾರ್ ಜಯರಾಮ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಪತ್ರಗಳನ್ನು ಪಡೆದುಕೊಂಡು ಅತಿ ಶೀಘ್ರದಲ್ಲಿ ಈ ಬಗ್ಗೆ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ ಅತಿ ಶೀಘ್ರದಲ್ಲಿ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ಆರುಮಂದಿ ವಲಸೆ ಕಾರ್ಮಿಕರ ಸಾವು ಸೂಕ್ತ ಪರಿಹಾರ ಕೊಡಿಸುವಲ್ಲಿ ರಾಜ್ಯ ಸರ್ಕಾರ ವಿಫಲ ಸಿಐಟಿಯು ತೀವ್ರ ಖಂಡನೆ
ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂಜು ,ಈ ಸಂದರ್ಭದಲ್ಲಿ ಕಲಾವಿದ ಪಿಚ್ಚಹಳ್ಳಿ ಮಂಜುˌ, ತಿಮ್ಮಣ್ಣ,ˌ ಆಂಜಿˌ, ಲಕ್ಷ್ಮಿನಾರಾಯಾಣˌನಾಗೇಶ್ˌ ನಾಗರಾಜˌ ಶ್ರೀನಿವಾಸ್ˌ ಕಾಂತಮ್ಮˌ ಸೌಮ್ಶˌ ರಾಧಮ್ಮˌ, ಸಾವಿತ್ರಮ್ಮ ˌ ಕವಿತಮ್ಮ ˌ ರತ್ನಮ್ಮ,ರಮೇಶ್ ˌ ಬ್ಶಾಟೆಪ್ಪ ˌ ಮುನಿವೆಂಕಟಪ್ಪ ˌ ಅರುಣ ˌ ಮಂಜುಳಾ ˌ ಅಮರಾವತಿ ˌ ವೆಂಕಟಸ್ವಾಮಿ, ಸುರೇಶ್,ಮುನಿರತ್ನಮ್ಮ ˌ ಸವೀತಾ ˌ ಶ್ರೀನಾಥ್ˌ ಗೌರಮ್ಮˌ ˌ ಸುನಂದಮ್ಮ ˌ ಗಂಗರಾಜ್ ˌ ಸುನೀತಾ ˌ ಶಶೀಕಲಾˌ ಭಾರತಿˌ ಸವೀತಾˌ ಗ್ರಾಮಸ್ಥರು
ಉಪಸ್ಥಿತರಿದ್ದರು.





