ʼಜೈ ಶ್ರೀರಾಮ್‌ʼ ಘೋಷಣೆಗೆ ʼಜೈ ಸೀತಾರಾಮʼ ಅಲ್ಲ, ʼಜೈ ಸಂವಿಧಾನʼ ಉತ್ತರ: ಶಿವಸುಂದರ್

Date:

ವಿಧಾನಸಭೆಯ ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಷಣ ಮಾಡುವ ವೇಳೆ ಬಿಜೆಪಿ ಶಾಸಕರು ʼಜೈಶ್ರೀ ರಾಮ್‌ʼ ಎಂಬ ಘೋಷಣೆಗೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯನವರು ʼಜೈ ಸೀತಾರಾಮʼ ಎಂದು ಕೂಗಿದರು. ಸಂವಿಧಾನ ಮಾತ್ರ ಇರಬೇಕಾದ ಸದನದಲ್ಲಿ ಎರಡೂ ಪಕ್ಷದವರು ʼರಾಮʼನನ್ನು ಜಪಿಸಿದ್ದು ಇಂದಿನ ಬಹುದೊಡ್ಡ ಗೊಂದಲ ಎಂದು ಪ್ರಗತಿಪರ ಚಿಂತಕ ಶಿವಸುಂದರ್‌ ಹೇಳಿದರು.

ಇತ್ತೀಚೆಗೆ ನಿಧನರಾದ ಸಿಪಿಐ ಪಕ್ಷದ ಮುಖಂಡ, ಹೋರಾಟಗಾರ ಎಂ.ಎನ್‌.ಸುಂದರ್‌ ರಾಜ್‌ ಅವರಿಗೆ ಶಹೀದ್‌ ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಗೆಳೆಯರ ಬಳಗದಿಂದ ಬೀದರ್‌ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಸಮಾಜವಾದದ ಸಿದ್ಧತೆ, ಬದ್ಧತೆ ಹಾಗೂ ಸ್ಫಷ್ಟತೆ ಮೈಗೂಡಿಸಿಕೊಂಡು ಕೃಷಿ-ಕಾರ್ಮಿಕ-ದಲಿತ ಚಳವಳಿ ಕಟ್ಟಿ ಜೀವನುದ್ದಕ್ಕೂ ಹೋರಾಡಿದ ದಿವಂಗತ ಎಂ.ಎನ್.‌ ಸುಂದರರಾಜ್ ಅವರು ಇಂದು ದೈಹಿಕವಾಗಿ ಕಳೆದುಕೊಂಡಿರಬಹುದು, ಆದರೆ ಅವರ ಆಳವಾದ ಪ್ರಖರ ಚಿಂತನೆಗಳು ನಮ್ಮೆಲ್ಲರ ಎದೆಯಾಳದಲ್ಲಿ ಮತ್ತೆ ಬಿತ್ತಿಕೊಳ್ಳಬೇಕಿದೆ” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಯಾವುದೇ ಧರ್ಮಗಳು ಪಾಲಿಸುವ ವೈಯಕ್ತಿಕ ಹಕ್ಕು ನಮಗಿದೆ. ಆದರೆ ಸರ್ಕಾರ ಯಾವ ಧರ್ಮಕ್ಕೂ ಸೇರಿದಲ್ಲ. ಕ್ರಿಶ್ಚಿಯನ್‌, ಮುಸ್ಲಿಂ ಸೇರಿದಂತೆ ಇತರೆ ಧರ್ಮಗಳಿಗೆ ತಾರತಮ್ಯ ಮಾಡಿ ಹಿಂದೂ ಎನ್ನುವ ಕಾರಣಕ್ಕೆ ವಿಶೇಷ ಸೌಲಭ್ಯ ಕೊಡುವುದು ಸೆಕ್ಯುಲರಿಸಂ ಅಲ್ಲ. ಎದುರಾಳಿಯನ್ನು ವಿರೋಧಿಸುವ ಬದಲು ಅವರನ್ನೇ ಅನುಸರಿಸುತ್ತಿದ್ದಾರೆ, ʼಜೈ ಶ್ರೀರಾಮ್‌ʼಗೆ ʼಜೈ ಸೀತಾರಾಮ್ʼ ಅಲ್ಲ, ಜೈ ಸಂವಿಧಾನ ಉತ್ತರವಾಗಬೇಕು” ಎಂದು ನುಡಿದರು.

ಉಗ್ರ ಹಿಂದುತ್ವಕ್ಕೆ ಮೃದು ಹಿಂದುತ್ವ ಪರ್ಯಾಯ ಅಲ್ಲ :

“ಒಂದು ಪಕ್ಷ ಮಂದಿರವನ್ನು ಕಟ್ಟಿಸಿಕೊಡುತ್ತೇವೆ ಎಂದು ಚುನಾವಣಾ ಸಂದರ್ಭದಲ್ಲಿ ಮತ ಕೇಳುವುದು ಅಪರಾಧ, ಆದರೆ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಈ ದೇಶದ ದಲಿತ, ದಮನಿತರಿಗೆ ಇಬ್ಬರು ಶತ್ರುಗಳೆಂದರೆ ಬಂಡವಾಳಶಾಹಿ ಹಾಗೂ ಬ್ರಾಹ್ಮಣಶಾಹಿ ಎಂದು ಬಾಬಾ ಸಾಹೇಬರು ನುಡಿದಂತೆ ಇಂದು ಕಾರ್ಪೋರೇಟ್‌ಶಾಹಿ ಉದ್ಯಮಿ ರೂಪದಲ್ಲಿದ್ದರೆ, ಆರ್‌ಎಸ್‌ಎಸ್ ನ ಹಿಂದುತ್ವ ಬ್ರಾಹ್ಮಣಶಾಹಿ ರೂಪದಲ್ಲಿ ನಮ್ಮ ಕಣ್ಮುಂದೆ ನಿಂತಿದೆ. ಇಂತಹ ಉಗ್ರ ಹಿಂದುತ್ವ ಸೋಲಿಸಲು ಮೃದು ಹಿಂದುತ್ವ ಪರ್ಯಾವಾಗದೇ ಸಮಾಜವಾದ ಪರ್ಯಾಯ” ಎಂದು ಹೇಳಿದರು.

“ಕಳೆದ ಹತ್ತು ವರ್ಷಗಳಲ್ಲಿ ಉದ್ಯಮಿಗಳಿಂದ, ಉದ್ಯಮಿಗಳಿಗಾಗಿ, ಉದ್ಯಮಿಗಳಿಗೋಸ್ಕರ ನಡೆಯುತ್ತಿರುವ ಸರ್ವಾಧಿಕಾರಿ ಸರ್ಕಾರ ದೇಶದಲ್ಲಿದೆ. ಒಕ್ಕೂಟ ದೇಶದಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರ, ಕೃಷಿ, ರೈತ ಸಂಘಟನೆಗಳ ಗಮನಕ್ಕೆ ತರದೆ ಸರ್ವಾಧಿಕಾರಿಯಾಗಿ ಮೋದಿಗೆ ಪರಮಾಪ್ತರಾದ ಅಂಬಾನಿ, ಅದಾನಿಗಳ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಡಲು ಎಲ್ಲ ಬಗೆಯ ಪ್ರಜಾತಂತ್ರದ ಪದ್ಧತಿಗಳನ್ನು ಗಾಳಿಗೆ ತೂರಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರನ್ನು ಹೊರಗಿಟ್ಟು ಪ್ರಜಾತಂತ್ರ ಅಣಕಿಸಿ ಮೂರು ಕೃಷಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ರೈತ ವಿರೋಧಿ ಕಾನೂನಿನ ವಿರುದ್ಧ ಧ್ವನಿಯೆತ್ತಬೇಕಾದ ಸಂಸದರು ಸಂಸತ್ತಿನಲ್ಲಿ ಮಾತಾಡದೇ ಮೌನವಾಗಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ” ಎಂದು ಬೇಸರ ವ್ಯಕ್ತಪಡಿಸಿದರು.

“ಇಂದಿನ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಬರೀ ಬೋಗಸ್‌ ಎಂಬಂತಾಗಿದೆ. ಯಾವ ಸರ್ಕಾರಗಳು ಜನರನ್ನು ಒಳಿತು ಬಯಸುವುದಿಲ್ಲ. ಇದನ್ನು ಬದಲಾಯಿಸಲು ಜನರು ಸಂಘಟಿತರಾಗಿ ಹೋರಾಡಬೇಕಾಗಿದೆ. 2024ರಲ್ಲಿ ಕೇಂದ್ರದಲ್ಲಿ ಮತ್ತೆ ಮೋದಿ ನೇತ್ರತ್ವದ ಸರ್ಕಾರ ಅಧಿಕಾರಕ್ಕೇರಿದರೆ ಮೊದಲ ನೂರು ದಿನದಲ್ಲಿ ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಜಾರಿಗೊಳಿಸಲು ಮುಂದಾಗಿ, ಈ ದೇಶ ಯಾರಿಗೆ ಸೇರಬೇಕೆಂದು ನಿರ್ಧಾರವಾಗುತ್ತದೆ” ಎಂದು ಹೇಳಿದರು.

ಸಿಪಿಐ ಜಿಲ್ಲಾ ಮುಖಂಡ ಬಾಬುರಾವ್‌ ಹೊನ್ನಾ, ಚಿಂತಕ ಮಾರುತಿ ಗೋಖಲೆ ಮಾತನಾಡಿ, “ಸುಮಾರು ನಾಲ್ಕು ದಶಕಗಳ ಕಾಲ ಎಡ ಚಳುವಳಿಯಲ್ಲಿ ಸಕ್ರಿಯರಾಗಿ ಅಸಂಘಟಿತ ಶೋಷಿತರ, ರೈತರ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ ನೂರಾರು ರೈತ-ಕೃಷಿಕರಿಗೆ ಎಕರೆ ಕೃಷಿ ಭೂಮಿ ಒದಗಿಸಿದರು. ಇಂತಹ ಅಪರೂಪದ ನಿಷ್ಠಾವಂತ, ಬದ್ಧತೆಯ ಹೋರಾಟಗಾರನನ್ನು ಕಳೆದುಕೊಂಡಿದ್ದು ಎಡ ಚಳವಳಿಗೆ ಪೆಟ್ಟು ಬಿದ್ದಿದೆ” ಎಂದು ಸ್ಮರಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ ಬಾಲಕಿ ಆತ್ಮಹತ್ಯೆ; ವಾರ್ಡನ್‌ ವಿರುದ್ಧ ಪ್ರಕರಣ ದಾಖಲು

ಕಾರ್ಯಕ್ರಮದಲ್ಲಿ ನುರೊಂದಯ್ಯ ಸ್ವಾಮಿ, ಚಿತ್ರಶೇನ್‌ ಫುಲೆ, ವಿಕ್ಟೋರಿಯಾ ಸುಂದರ್‌ ರಾಜ್‌, ಬಕ್ಕಪ್ಪ ದಂಡಿನ, ಗಗನ ಫುಲೆ ಸೇರಿದಂತೆ ದಿವಂಗತ ಎಂ.ಎನ್.‌ ಸುಂದರ ರಾಜ್‌ ಅವರ ಗೆಳೆಯರ ಬಳಗ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...