ಚಿಂತಾಮಣಿ:ಗ್ರಾಮಗಳ ಸ್ವಚ್ಛತೆ,ಕುಡಿಯುವ ನೀರಿನ ಸಮಸ್ಯೆ,ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನ ಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್ ಶಿವಣ್ಣ ತಿಳಿಸಿದರು.
ಸದರಿ ಗ್ರಾಮದಲ್ಲಿ ಇಂದು ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದವರು ಪಂಚಾಯಿತಿಗೆ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಶ್ಲಾಘನೆಯ ಎಂದರು.
ಗ್ರಾಮ ಸಭೆಯಲ್ಲಿ ಕೃಷಿ,ಆರೋಗ್ಯ,ಶಿಕ್ಷಣ,ನೈರ್ಮಲ್ಯ,ಕುಡಿಯುವ ನೀರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಬಡವರ ಕಲ್ಯಾಣ ಯೋಜನೆಗಳು,ವಿದ್ಯುತ್,ಅರಣ್ಯ,ಕಂದಾಯ,ಪಶುಪಾಲನೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಗುತ್ತದೆ,ಗ್ರಾಮ ಪಂಚಾಯಿತಿ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ಆಯ್ಕೆ ಮತ್ತು ಗ್ರಾಮದ ಒಟ್ಟಾರೆ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಈ ಸಭೆ ಮುಖ್ಯವಾಗಿದೆ ಆದುದ್ದರಿಂದ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಪರ್ಯಾಯ ರಾಜಕಾರಣ ಹೊಸ ಬರವಸೆ ಮೂಡಿಸಿದ ಜನ ದನಿ ರ್ಯಾಲಿ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ,ಉಪಾಧ್ಯಕ್ಷೆ ಸವಿತಾ,ಗ್ರಾಮ ಪಂಚಾಯತಿ ಸದಸ್ಯರಾದ ಎಂ ಜಿ ರಾಜೇಶ್,ಎ ಆರ್ ಕೆ ರವಿ,ಅಶೋಕ್ ರೆಡ್ಡಿ,ವೆಂಕಟೇಶ್ ರೆಡ್ಡಿ,ಭದ್ರಾ ರೆಡ್ಡಿ,ಸ್ವಾಮಿ,ಅಶ್ವತ್ ರೆಡ್ಡಿ,ಗಿಡ್ಡಪ್ಪ,ಅಂಜಿನಪ್ಪ,ರತ್ನಮ್ಮ ರಾಮಪ್ಪ,ಸೇರಿದಂತೆ ಮತ್ತಿತರರು ಇದ್ದರು.





