ಕೋಲಾರ: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಇದರ ನಿದರ್ಶನದಂತೆ ನಗರದ ಆರ್ ಟಿ ಓ ಕಚೇರಿ ಬಳಿ ಹಲವರಿಗೆ ಹುಚ್ಚುನಾಯಿ ಕಡಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ ಆರ್ ಟಿ ಓ ಕಚೇರಿಗೆ ತಮ್ಮ ಕಾರ್ಯನಿಮಿತ್ತ ಆಗಮಿಸಿದ್ದ 20ಕ್ಕೂ ಹೆಚ್ಚು ಮಂದಿಗೆ ಅಟ್ಟಾಡಿಸಿಕೊಂಡು ಹುಚ್ಚು ನಾಯಿ ಒಂದು ಕಡಿದು ತೀರ್ವ ಗಾಯಗೊಳಿಸಿದೆ.
ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ಗಾಯಾಳುಗಳು ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ತಕ್ಷಣ ಗಾಯಾಳುಗಳ ಬಳಿ ಆಗಮಿಸಿ ಚಿಕಿತ್ಸೆ ಕೊಡಿಸಲು ಮುಂದಾದರು.
ಇದನ್ನು ಓದಿದ್ದೀರಾ..?ಅರಣ್ಯ ಇಲಾಖೆ ವಿರುದ್ಧ ರೈತರ ಬೃಹತ್ ಪ್ರತಿಭಟನೆ
ಆಸ್ಪತ್ರೆ ಬಳಿ ಆಗಮಿಸಿದ ಗಾಯಾಳು ಕುಟುಂಬದವರು ಹುಚ್ಚು ನಾಯಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ. ಮುಂದೆ ಈ ರೀತಿ ಘಟನೆ ನಡೆಯದಂತೆ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





