ಕೋಲಾರ: ತಾಲೂಕಿನ ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗ್ಗಾಲಪುರ ಮತ್ತು ನಾಗಲಾಪುರ ಬೆಟ್ಟದ ಶ್ರೀ ವೀರಭದ್ರಸ್ವಾಮಿ ದೇವಾಲಯದವರಿಗೆ ಸಿಸಿ ರಸ್ತೆ ಹಾಗೂ ದೇವರ ಜಾತ್ರೆ ನಡೆಯುವ ಸ್ಥಳಕ್ಕೆ ಫ್ಲಾಟ್ ಫಾರಂ ನಿರ್ಮಾಣದ 80 ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆಯನ್ನು ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಂತರ ಸ್ವಾಮೀಜಿ ಮಾತನಾಡಿ ಈ ಭಾಗದ ಶ್ರೀ ವೀರಭದ್ರಸ್ವಾಮಿ ದೇವಾಲಯ ರಸ್ತೆ ಅಭಿವೃದ್ಧಿ ಹಾಗೂ ದೇವಾಲಯ ಅಭಿವೃದ್ಧಿಗೆ ಕಳೆದ ವರ್ಷ ನಡೆದ ಜಾತ್ರೆಯ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಶಾಸಕ ಕೊತ್ತೂರು ಮಂಜುನಾಥ್ ರವರು 80 ಲಕ್ಷ ಅನುದಾನ ಕೊಟ್ಟಿರುವುದು ಶಾಘ್ಲನೀಯವಾಗಿದ್ದು, ನುಡಿದಂತೆ ನಡೆದಿದ್ದಾರೆ, ಹಾಗೂ ಕೋಲಾರ ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಡಾಂಬರೀಕರಣ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಇದಕ್ಕೆ ಕಾಂಗ್ರೆಸ್ ನೇತೃತ್ವದ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದರು
ಈ ಸಂದರ್ಭದಲ್ಲಿ ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮಾತನಾಡಿ ವೀರಭದ್ರಸ್ವಾಮಿ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಜಾತ್ರೆ ನಡೆಯಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಆಗಮಿಸುತ್ತಾರೆ, ಜನರಿಗೆ ದರ್ಶನ ಪಡೆಯಲು ಅನುಕೂಲವಾಗುವಂತೆ 80 ಲಕ್ಷ ಅನುದಾನದಲ್ಲಿ ರಸ್ತೆ, ದೇವಾಲಯದ ಮಂಟಪವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರು ಸುಮಾರು 6 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ನಮಗೆ ಬಹಳ ಸಂತೋಷ ಆಗಿದೆ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ನಾಗಲಾಪುರ ದೇವಾಲಯದ ರಸ್ತೆ ಹದೆಗಟ್ಟಿದ್ದು ಜನರ ಬೇಡಿಕೆಯಂತೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರವರು ಅನುದಾನ ನೀಡಿದ್ದಾರೆ, ತಾಲೂಕಿಗೆ ಹೆಚ್ಚು ಅನುದಾನ ನೀಡಲು ಸಹಕಾರ ಮಾಡಿದ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ವಿಧಾನಪರಿಷತ್ ಸದಸ್ಯರ ಅನಿಲ್ ಕುಮಾರ್ ರವರಿಗೆ ಧನ್ಯವಾದಗಳು ಎಂದರು
ಕೋಲಾರ ತಾಲೂಕಿನ ಶಾಸಕರು ಕೆಲಸ ಹೆಚ್ಚು ಮಾಡ್ತಾರೆ, ಪ್ರಚಾರ ತಗೋಳುವುದಿಲ್ಲಾ, ಸ್ಥಳೀಯ ಜನಪ್ರತಿನಿಧಿಗಳಿಂದ ಗುದ್ದಲಿ ಪೂಜೆ ಮಾಡಿಸಿದ್ದಾರೆ. ಇದುವರೆಗೂ ಸುಮಾರು 1200ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ, ಮುಂದಿನ ಎರಡುವರೆ ವರ್ಷದಲ್ಲಿ ಎಲ್ಲಾ ರಸ್ತೆಗಳನ್ನು ಮಾಡುತ್ತೇವೆ, ಜಲಜೀವನ ಮಿಷನ್ ಕೆಲಸ ಮುಗಿದ ಬಳಿಕ ಪ್ರತಿ ಗ್ರಾಮದ ರಸ್ತೆಯನ್ನು ಮಾಡುತ್ತೇವೆ, ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ಮಾಡಿ ಎಂದರು.
ಇದನ್ನು ಓದಿದ್ದೀರಾ..?ಅನ್ಯ ಭಾಷಿಕರ ಹಾವಳಿ, ಕನ್ನಡ ಮೊದಲ ಆಧ್ಯತೆಯಾಗಲಿ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಸೂಲೂರು ಗ್ರಾಪಂ ಸದಸ್ಯರಾದ ರಾಮಕ್ಕ, ಕೃಷ್ಣಮೂರ್ತಿ, ಅಶೋಕ್, ಗಾಯತ್ರಿ ಮನಿರೆಡ್ಡಿ, ಅದಿಮೂರ್ತಿ, ವೆಂಕಟೇಶಪ್ಪ, ನರಸರಾಜು, ಮೇಷ್ಟ್ರು ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವೀರೇಂದ್ರ ಪಾಟೀಲ್, ನದೀಂ, ಚಿನ್ನಾಪುರ ನಾರಾಯಣಸ್ವಾಮಿ, ಬೆಟ್ಟಪ್ಪ, ಕೃಷ್ಣಪ್ಪ, ಈರಪ್ಪ, ಆಂಜಿನಪ್ಪ, ಚಲಹಳ್ಳಿ ಅಶೋಕ್, ಅಂಬರೀಶ್, ಧನಮಟ್ಟನಹಳ್ಳಿ ಲೋಕೇಶ್, ಪೆಮ್ಮಶೆಟ್ಟಿಹಳ್ಳಿ ಶಂಕರಪ್ಪ, ಟೈಲರ್ ಮಂಜುನಾಥ್, ಸೇರಿದಂತೆ ಮುಂತಾದವರು ಇದ್ದರು.





