ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಂತರಗಂಗೆ ದಿನಪತ್ರಿಕೆಯ ಸಂಪಾದಕ ಎಸ್.ಕೆ ಚಂದ್ರಶೇಖರ್ ಅವರು ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರು ಭಾನುವಾರ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ..? ನಮಗೆ ದ್ವಿಭಾಷೆ ಸಾಕು ಹಿಂದಿಯ ಅಗತ್ಯವಿಲ್ಲ: ಡಾ.ವಿ.ಚಂದ್ರಶೇಖರ್ ನಂಗಲಿ ಅಭಿಮತ
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ,ಕೆಡಿಪಿ ಸದಸ್ಯ ಮಣಿಘಟ್ಟ ಸೊಣ್ಣೇಗೌಡ, ತೋರದೇವಂಡಹಳ್ಳಿ ಗ್ರಾಪಂ ಸದಸ್ಯ ವೆಂಕಟಾಚಲಪತಿಗೌಡ, ಸಂಜಯ್, ಎಸ್.ಕೆ ಮಂಜುನಾಥ್ ಮುಂತಾದವರು ಇದ್ದರು.




