ಬಾಗೇಪಲ್ಲಿ:- ದಲಿತ ಸಂಘರ್ಷ ಸಮಿತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ನಡೆಯಿತು. ಗೂಳೂರು ವೃತ್ತದಿಂದ ಹೊರಟ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಸ್ ನಿಲ್ದಾಣ ದಲ್ಲಿ ಸಮಾವೇಶಗೊಂಡರು. ಕೋರೆಗಾಂವ್ ಮಹರ್ ರೆಜಿಮೆಂಟಿನ ಯೋಧರ ಹೋರಾಟವನ್ನು ಸ್ಮರಿಸಲಾಯಿತು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನ ಕೈವಾರಮಯ್ಯ ಮಾತನಾಡಿ, ‘ಕೋರೆಗಾಂವ್ ಘಟನೆಯು ಮಹರ್ ಸೈನಿಕರ ಹೋರಾಟವನ್ನು ಸ್ಮರಿಸುತ್ತದೆ. ಇತಿಹಾಸದಲ್ಲಿ ಹುದುಗಿದ್ದ ಮಹರ್ ಸೈನಿಕರ ಚರಿತ್ರೆಯನ್ನು ಅಂಬೇಡ್ಕರ್ ಅವರು ಅಧ್ಯಯನ ನಡೆಸಿ ಮುನ್ನಲೆಗೆ ತಂದರು’ ಎಂದು ಸ್ಮರಿಸಿದರು.
ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹರ್ ಸೈನಿಕರ ಗೆಲುವನ್ನು ಈ ವಿಜಯೋತ್ಸವವು ಸ್ಮರಿಸುತ್ತದೆ. ಈ ಹೋರಾಟವು ಇಂದಿಗೂ ದಲಿತ ಸಮುದಾಯಕ್ಕೆ ಮಾದರಿಯಾಗಿದೆ. ಆತ್ಮವಿಶ್ವಾಸವನ್ನು ತುಂಬಲಿದೆ ಎಂದು ಹೇಳಿದರು.
‘ದೇಶದಲ್ಲಿ ಕೆಲವರು ಜ.1ರಂದು ಹೊಸ ವರ್ಷವಾಗಿ ಸಂಭ್ರಮಿಸುವರು. ನಾವು ಪೇಶ್ವೆಗಳ ವಿರುದ್ಧ ಮಹರ್ ಸೈನಿಕರು ಹೋರಾಟ ನಡೆಸಿ ವಿಜಯ ಸಾಧಿಸಿದ ದಿನವಾಗಿ ಆಚರಿಸುತ್ತೇವೆ’ ಎಂದು ಹೇಳಿದರು.
ದಲಿತ ಸಮುದಾಯವನ್ನು ಅವಮಾನಿಸಿದ ಪೇಶ್ವೆಗಳ ವಿರುದ್ಧ ಆತ್ಮಗೌರವಕ್ಕಾಗಿ ಹೋರಾಡಿದ ದಿನವೇ ಕೋರೆಗಾಂವ್ ವಿಜಯೋತ್ಸವದ ದಿನವಾಗಿದೆ. ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಈ ವಿಚಾರವನ್ನು ಅಂಬೇಡ್ಕರ್ ಅವರು ಗುರುತಿಸಿದರು ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಬೆಂ ಗ್ರಾಮಾಂತರ ಎಸ್ಪಿ ಆಗಿದ್ದ ಸಿ.ಕೆ ಬಾಬಾ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ ಯಾಗಿ ನೇಮಕ
ಈ ಸಂದರ್ಭದಲ್ಲಿ ಎ.ನಂಜುಂಡಪ್ಪ ,ವೆಂಕಟಶಿವಾರೆಡ್ಡಿ,ವೆಂಕಟೇಶ್, ಕೆ.ವಿ.ಸುಬ್ರಹ್ಮಣ್ಯ ಗಣೇಶ್, ಮುರಳಿ,ಹಾಗೂ ಇತರರು ಹಾಜರಿದ್ದರು.





