ಕಳೆದ 25 ವರ್ಷಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಧಾರವಾಡದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವ ಸಂಭ್ರಮದ ಪ್ರಯುಕ್ತ ಗುಜ್ಜಾಡಿ ಸ್ವರ್ಣ ಜುವೆಲರ್ಸ ಸಹಯೋಗ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಕಾರದಲ್ಲಿ ಇದೇ ನವೆಂಬರ್ 2 ರಂದು ಧಾರವಾಡ ಸೃಜನಾ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ “ಧಾರವಾಡ ಐಡಲ್-2025” ಗ್ರಾಂಡ್ ಪಿನಾಲೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಮಕ್ಕಳಲ್ಲಿರುವ ಕಲೆಯನ್ನು ಉತ್ತೇಜಿಸುವುದು ಹಾಗೂ ಅವರಿಗೆ ವೇದಿಕೆ ಕಲ್ಪಿಸುವುದೇ ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಯ ನಿಯಮಗಳು:
• ಈ ಸ್ಪರ್ಧೆಯು 12 ರಿಂದ 15 ವಯೋಮಾನದ ಮಕ್ಕಳಿಗಾಗಿ ಆಯೋಜಿಸಲಾಗಿದೆ.
• ಆಸಕ್ತರು ಸುಗಮ ಸಂಗೀತ, ಭಾವಗೀತೆ/ಭಕ್ತಿಗೀತೆ, ಚಲನಚಿತ್ರ ಗೀತೆಗಳ ಗಾಯನ ಕನ್ನಡ ಅಥವಾ ಹಿಂದಿ ಭಾಷೆಯಲ್ಲಿ ಪ್ರಸ್ತುತ ಪಡಿಸಬಹುದಾಗಿದೆ.
• ಪಕ್ಕವಾದ್ಯ ಅಥವಾ ಕರೋಕೆ ಸಂಗೀತ ಬಳಸಬಹುದು, ತಮ್ಮ ಹೆಸರು, ಶಾಲೆಯ ಹೆಸರನ್ನೊಳಗೊಂಡಂತೆ 2 ನಿಮಿಷಗಳ ಹಾಡಿನ ವಿಡಿಯೋವನ್ನು ಅಕ್ಟೋಬರ 20 ರೊಳಗಾಗಿ ವಾಟ್ಸಾಪ್ ಸಂಖ್ಯೆ 7676894447 ಗೆ ಕಳಿಸಬೇಕು.
• ವಯಸ್ಸಿನ ದಾಖಲೆಗಾಗಿ ತಮ್ಮ ಆಧಾರ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು.
ಆಯ್ಕೆಗೊಂಡ ಸ್ಪರ್ಧಿಗಳನ್ನು ನವೆಂಬರ್ 2 ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಲೈವ್ ಆಡಿಷನ್ ಏರ್ಪಡಿಸಲಾಗುವುದು.
ವಿಜೇತರಿಗೆ ಪ್ರಥಮ ರೂ.20,000/- ನಗದು ಮತ್ತು ಧಾರವಾಡ ಐಡಲ್ ಸ್ವರ್ಣ ಟ್ರೋಫಿ ನೀಡಿ ಗೌರವಿಸಲಾಗುವುದು. ದ್ವಿತೀಯ ರೂ.15,000/- ತೃತೀಯ ರೂ.10,000/- ಸಮಾಧಾನಕರ ಬಹುಮಾನ ರೂ.2500/-ಗಳ ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಪ್ರವೇಶ ಶುಲ್ಕ ರೂ.100/- ನಿಗದಿಪಡಿಸಲಾಗಿದೆ.
ಅರ್ಜಿಯನ್ನು ಕಡ್ಡಾಯವಾಗಿ ಗೂಗಲ್ ಫರ್ಮನಲ್ಲಿ ಭರ್ತಿಮಾಡಿ ಸಲ್ಲಿಸುವುದು https://forms.gle/okdn8X1t4iriBVGY7
ನಿರ್ಣಾಯಕರ ನಿರ್ಣವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಅಬ್ದುಲ್ ಕಲಾಂ ಜೀವನದಿಂದ ಯುವಕರು ಪ್ರೇರಣೆ ಪಡೆಯಲಿ: ಡಾ. ಎಂ.ಎನ್.ಮೀರಾನಾಯ್ಕ
ಪತ್ರಿಕಾಗೋಷ್ಟಿಯಲ್ಲಿ ಶ್ರೀಕಾಂತ ದೂಡವಾಡ, ಸಿ ಯು ಬೆಳ್ಳಕ್ಕಿ, ಡಾ ಎಮ್ ವಾಯ್ ಸಾವಂತ, ಪ್ರಕಾಶ ಬಾಳೆಕಾಯಿ, ಕುಮಾರೇಶ್ವರ ಸಂಘದ ಅಧ್ಯಕ್ಷ ಚಿಕ್ಕಮಠ ಇದ್ದರು.





