ಕೋಲಾರ : ತಾಲೂಕಿನ ನರಸಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಪುತ್ಥಳಿ ಮುಂಭಾಗದ ಬಸ್ ನಿಲ್ದಾಣ ನಿರ್ಮಿಸಿ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವಂತೆ ಕನ್ನಡ ಸೇನೆ ವತಿಯಿಂದ ಗ್ರಾಪಂ ಪಿಡಿಒ ಮುನಿರಾಜುಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಾಮಕರಣ ಮಾಡಲು ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಕೂಡಲೇ ಪಿಡಿಒ ಅನುಮತಿ ನೀಡಬೇಕು ಜೊತೆಗೆ ಮಕ್ಕಳಿಗೂ ಹಾಗೂ ವಯೋವೃದ್ದರ ಅನುಕೂಲಕ್ಕಾಗಿ ಪುತ್ಥಳಿಯ ಹತ್ತಿರ ಸೂಚಿತವಾದ ಉದ್ಯಾನವನ, ಮೇಲ್ಚಾವಣಿ ಮತ್ತು ಬಸ್ ನಿಲ್ದಾಣ ನಿರ್ಮಿಸಬೇಕು ಇದು ಕನ್ನಡ ಸೇನೆ ಪದಾಧಿಕಾರಿಗಳ ಹಾಗೂ ನರಸಾಪುರ ಗ್ರಾಮಸ್ಥರ ಒತ್ತಾಯವಾಗಿದೆ ಎಂದರು.
ಇದನ್ನು ಓದಿದ್ದೀರಾ..? ಹೆಲ್ಮೆಟ್ ಇಲ್ಲದವರಿಗೆ ದಂಡದ ಬಿಸಿ ಮುಟ್ಟಿಸಿದ ಚಿಂತಾಮಣಿ ಪೊಲೀಸರು
ಈ ಸಂದರ್ಭದಲ್ಲಿ ಕನ್ನಡ ಸೇನೆ ಕೋಲಾರ ತಾಲೂಕು ಅಧ್ಯಕ್ಷ ಎನ್ ಸಿ ಶಿವಚಂದ್ರಯ್ಯ, ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ಎಂ ಚಳ್ಳಳ್ಳಿ ನಾಗರಾಜ್ ಇದ್ದರು





