ಬೇತಮಂಗಲ : ಹೋಬಳಿಯ ಗುಟ್ಟಹಳ್ಳಿ ,ಬಂಗಾರು ತಿರುಪತಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ರೂ.5.00 ಕೋಟಿ ಅನುದಾನದ ಅಡಿಯಲ್ಲಿ ಕಾಲೇಜು ಅವರಣದಲಿ ನೂತನ ಕಟ್ಟಡಗಳ ನಿರ್ಮಾಣ ಭೂಮಿ ಪೂಜೆಯನ್ನು ಶಾಸಕಿ ಎಂ.ರೂಪಕಲಾ ನೆರೆವೇರಿಸಿದರು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಭವಿಶ್ಯ ರೂಪಿಸುವಲ್ಲಿ ಗುಟ್ಟಹಳ್ಳಿ ಕಾಲೇಜಿನ ಏಲ್ಲಾ ಸಿಬ್ಬಂದಿಯವರು ಶ್ರಮವಹಿಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಕಾಲೇಜಿನ ಮೌಲ್ಯಮಾಪನ ಮಾಡುವ ನ್ಯಾಕ್ ಸಮಿತಿಯು ಕಾಲೇಜಿಗೆ ಉತ್ತಮ ಗ್ರೇಡ್ ನೀಡಿದ್ದ ಕಾರಣ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ರೂ.5.00 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಮತ್ತು
ರಾಜ್ಯ ಸರ್ಕಾರದ ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನದಡಿ ರೂ.2.00 ಕೋಟಿ ಬಿಡುಗಡೆಯಾಗಿರುತ್ತದೆ.
ಈ ಅನುದಾನದಲ್ಲಿ ಆಧುನಿಕ ಶೈಲಿಯ ಸೆಮಿನಾರ್ ಹಾಲ್, ಬೋಧನಾ ಕೊಠಡಿಗಳು ಹಾಗೂ ಇನ್ನಿತರೆ ಹಲವು ಆಧುನಿಕ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ರಾಜ್ಯ ಸರ್ಕಾರದ ಎಸ್.ಸಿ.ಪಿ.ಹಾಗೂ ಟಿ.ಎಸ್.ಪಿ. ಅನುದಾನದ ರೂ.2.00 ಕೋಟಿಯಲ್ಲಿ 04 ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ನೆರೆದಿದ್ದ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳನ್ನು ತಿಳಿಸುತ್ತಾ, ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದ ಜೀವನ ತಮ್ಮ ಮುಂದಿನ ಭವಿಶ್ಯವನ್ನು ರೂಪಿಸುಕೊಳ್ಳುವಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಇದನ್ನು ಓದಿದ್ದೀರಾ..? ಏ ಆರ್ ಟಿ ಓ ಕಚೇರಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಸೊನ್ನಮ್ಮ ರಮೇಶ್, ವಿನೂ ಕಾರ್ತಿಕ್, ಮಹದೇವಪುರ ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಅಮು ಲಕ್ಷ್ಮೀ ನಾರಾಯಣ್, ಇನಾಯತ್ ವುಲ್ಲಾ, ನಾರಾಯಣ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ. ನಾಗರಾಜ್, ಮುಖಂಡರಾದ ಭಾರ್ಗವ್ ರಾಮ್, ಚಂದ್ರ ಕಾಂತ್, ನಂಜುಂಡ ಗೌಡ, ಸುರೇಂದ್ರ ಗೌಡ, ದುರ್ಗಾ ಪ್ರಸಾದ್ , ನಂಜುಂಡೇಗೌಡ, ಮುನಿಸ್ವಾಮಿ ರೆಡ್ಡಿ, ಬೌಂಡ್ರಿ ಸುರೇಶ್, ವೆಂಕಟಾಚಲಪತಿ, ಚೆನ್ನಕೇಶವ ರೆಡ್ಡಿ, ವೇಣುಗೋಪಾಲ್ , ಜಯರಾಮ್ ರೆಡ್ಡಿ, ಪಿ.ಟಿ ವೆಂಕಟರಮಣ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.





