ಕೆಜಿಎಫ್ : ಬ್ರಿಟಿಷರ ಕಾಲದಲ್ಲಿ ಪಾಲಾರ್ ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಪಾಲಾರ್ ಡ್ಯಾಮ್ ಬಿರುಕು ಬಿದ್ದ ಹಿನ್ನಲೆ ಇಂದು ಕೋಲಾರ ಜಿಲ್ಲಾಧಿಕಾರಿ ಡಿಸಿ ರವಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿ, ಬೇತಮಂಗಲ ಪಾಲಾರ್ ಕೆರೆ ಗೆ ಅಡ್ಡಲಾಗಿ ನಿರ್ಮಿಸಿರುವ ಡ್ಯಾಮ್ ನ ಜವಾಬ್ದಾರಿ ಕೆಯುಡಬ್ಲ್ಯೂ ಇಲಾಖೆಯವರದಾಗಿದ್ದು ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳು ಇಂಜಿನಿಯರ್ಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ ಮುಂದಿನ ಸೋಮವಾರ ವರದಿ ಯನ್ನು ನೀಡಲಾಗುತ್ತದೆ ಅದರಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಮುಂದಿನ ದಿನಗಳಲ್ಲಿ ಬ್ರಿಡ್ಜ್ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ವಚ್ಛತೆ ಬಗ್ಗೆ ಅಸಮಾಧಾನ: ಬೇತಮಂಗಲ ಕೆರೆಯು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ವೀಕ್ಷಿಸಲು ಸಾರ್ವಜನಿಕರು ಅಪಾರ ಸಂಖ್ಯೆ ಯಲ್ಲಿ ಬರುತ್ತಾರೆ ಆದರೆ ಇಲ್ಲಿ ಯಾವುದೇ ರೀತಿಯ ಸ್ವಚ್ಛತೆ ಮತ್ತು ಸುರಕ್ಷತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು, ಮುಂದೆ ಪಾಲರ್ ಕೋಡಿಯ ಬಳಿ ಸ್ವಚ್ಛತಾ ಮತ್ತು ಸುರಕ್ಷಿತಾ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೇತಮಂಗಲ ಹಾಗೂ ರಾಮಸಾಗರ ಕೆರೆ ಪ್ರವಾಸಿ ಕೇಂದ್ರವಾಗಿ ಮಾಡಲು ಪ್ರಯತ್ನ: ಬೇತಮಂಗಲ ಪಾಲಾರ್ ಕೆರೆ ಕೋಡಿ ಹರಿಯುವ ಸಂದರ್ಭದಲ್ಲಿ ಇದೊಂದು ಪ್ರವಾಸಿ ತಾಣವಾಗಿ ಕಾಣುತ್ತದೆ ಮುಂದಿನ ದಿನಗಳಲ್ಲಿ ಸಿಎಸ್ಆರ್ ಅನುದಾನವನ್ನು ಬಳಸಿ ಬೇತಮಂಗಲ ಹಾಗೂ ರಾಮಸಾಗರ ಕೆರೆಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡುವುದಾಗಿ ಜಿಲ್ಲಾಡಳಿತವು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮೂರು ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಅನುಮತಿ
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧಿಕಾರಿ ಡಿಸಿ ರವಿ ತಹಸೀಲ್ದಾರ್ ಭರತ್, ಇಒ ವೆಂಕಟೇಶಪ್ಪ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್, ಪಿಡಿಒ ವಸಂತ್ ಕುಮಾರ್ಮ, ಮಾಜಿ ಅಧ್ಯಕ್ಷ ಮಮತಾ ಗಣೇಶ್ತ್ , ಉಪ ತಹಸೀಲ್ದಾರ್ ಜಯರಾಮ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





