ಕೆಜಿಎಫ್ : ಇಲ್ಲಿನ ಕ್ಯಾಸಂಬಳ್ಳಿ ಹೋಬಳಿಯ ದುರ್ಗೆಪಲ್ಲಿ ಗ್ರಾಮದಲ್ಲಿ ಜಮೀನು ಸರ್ವೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಗಲಾಟೆ- ಗದ್ದಲದ ನಡುವೆ ಸರ್ವೆ ಕಾರ್ಯ ನಡೆಯಿತು.
ಪಟ್ಟಣದ ಬಳಿಯ ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಹಾಗೂ ಜೀಡ ಮಾಕನಹಳ್ಳಿ ರಾಮಕೃಷ್ಣಪ್ಪ ಕುಟುಂಬಗಳ ನಡುವೆ ಸರ್ವೆ ವೇಳೆ ಯಲ್ಲಿ ಗಲಾಟೆಗಳು ನಡೆದು ಕೊನೆಗೆ ಸರ್ವೆ ಕಾರ್ಯ ಮುಕ್ತಾಯವಾಯಿತು.
ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಮಾತನಾಡಿ, ನಾವು ನಮ್ಮ ಹಿರಿಯರ ಕಾಲದಿಂದಲೂ ಈ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ನಡೆಸುತಿದ್ದೇವೆ ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ನಮ್ಮ ಜಮೀನು ಬೇರೆ ಕಡೆ ಇದೆ ಈ ಜಮೀನು ಬೇರೆಯವರಿಗೆ ಸೇರಿದೆ ಎಂದು ದಾಖಲೆಗಳು ಸೃಷ್ಟಿಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಪೂರ್ವದ ಕಾಲದಿಂದಲೂ ಜಮೀನಿನಲ್ಲಿ ರಾಗಿ ,ಜೋಳ ,ತೊಗರಿ, ಶೇಂಗಾ ಸೇರಿದಂತೆ ವಿವಿಧ ಮಳೆಯಾಶ್ರಿತ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದು, ಏಕಾಏಕಿಯಾಗಿ ರಾಮಕೃಷ್ಣಪ್ಪ ಅವರು ಈ ಜಮೀನು ನಮಗೆ ಸೇರಿದ್ದು ನೀವು ತಕ್ಷಣ ಜಾಗ ಖಾಲಿ ಮಾಡಬೇಕು ಎಂದು ನ್ಯಾಯಾಲಯದ ಮೂಲಕ ಆದೇಶವನ್ನು ತಂದು ಸರ್ಕಾರಿ ಸರ್ವೆ ಮಾಡಲು ಬಂದಿದ್ದಾರೆ.
ಆದರೆ ನಮ್ಮ ಜಮೀನಿನ ಸರ್ವೆ ನಂಬರ್ 46/ 2 ಆಗಿದ್ದು, ಇದರ ವಿಸ್ತೀರ್ಣ 2.03 ಗುಂಟೆ ಇದೆ.ಇದು ನಕಾಶೆಯಲ್ಲಿ ಬೇರೆ ಕಡೆ ಜಮೀನು ತೋರಿಸುತ್ತಿದೆ ಇದು ನಮಗೆ ಗೋತ್ತಿಲ್ಲ ಆದರೆ ನಾವು ಇಷ್ಟು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನು ರಾಮಕೃಷ್ಣಪ್ಪ ಅವರಿಗೆ ಖಾತೆಯಾಗಿದೆ ಎಂಬ ದಾಖಲೆಗಳನ್ನು ತೋರಿಸುತ್ತಿದ್ದು, ಸದರಿ ನಮ್ಮ ಜಮೀನನ್ನು ರಾಮಕೃಷ್ಣಪ್ಪ ಅವರು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.
ರಾಮಕೃಷ್ಣಪ್ಪ ಅವರಿಗೆ ಸರ್ವೆ ನಂಬರ್ 43 ರಲ್ಲಿ 2.32 ಎಕರೆ ಇದ್ದು, ನಮ್ಮ ಸರ್ವೇ ನಂಬರ್ 46/2 ರಲ್ಲಿ ಜಮೀನು ಬೇರೆ ಕಡೆ ಇದೆ ಎನ್ನುತ್ತಾರೆ.
ಆದರೆ ಅದರಲ್ಲಿ ಬೇರೆಯವರು ಸಾಗುವಳಿ ಮಾಡುತ್ತಿದ್ದು ನಾವು ಈ ಜಮೀನನ್ನು ಬಿಟ್ಟು ಆ ಜಮೀನನ್ನು ವಶಕ್ಕೆ ಪಡೆದುಕೊಳ್ಳಲು ಸಮಸ್ಯೆ ಆಗಿದೆ ಆದ್ದರಿಂದ ಈ ಕೂಡಲೇ ತಹಸಿಲ್ದಾರ್, ಶಾಸಕರು ಹಾಗೂ ಜನಪ್ರತಿನಿಧಿಗಳು ನಮಗೆ ಕಾನೂನು ಅಡಿಯಲ್ಲಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಇದೇ ರೀತಿಯಲ್ಲಿ ಗ್ರಾಮದ ಅನೇಕ ರೈತರ ಸರ್ವೇ ನಂಬರ್ ಗಳು ಅದಲು ಬದಲಾಗಿರುವ ಬಗ್ಗೆ ಅನುಮಾನವಿದೆ ಈ ಕೂಡಲೇ ಕಂದಾಯ ಇಲಾಖೆಯ ತಾಹಸಿಲ್ದಾರ್ ಮತ್ತು ಕ್ಷೇತ್ರದ ಶಾಸಕರು ಜನಪ್ರತಿನಿಧಿಗಳು ಈ ಕೂಡಲೇ ನಮ್ಮ ಸರ್ವೇ ನಂಬರನ್ನು ಸರ್ವೆ ನಡೆಸಿ ನಮಗೆ ಸಾಗುವಳಿ ಮಾಡಲು ಅವಕಾಶ ಕೊಡಬೇಕು ಇಲ್ಲದಿದ್ದರೆ , ಹಾಲಿ ಸಾಗುವಳಿ ಮಾಡುತ್ತಿರುವ ಜಮೀನಿಗೆ ಖಾತೆ ಮಾಡಬೇಕಿದೆ ಎಂದರು .
ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಎರಡು ಕಡೆಯವರನ್ನು ಸಮಾಧಾನಪಡಿಸಿ ಇಂದು ಕೇವಲ ಸರ್ವೆ ಮಾಡಿ ಹದ್ದು ಬಸ್ತನ್ನು ಮಾತ್ರ ಗುರುತಿಸಲಾಗುತ್ತಿದೆ.
ಇದನ್ನು ಓದಿದ್ದೀರಾ..? ಆಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ಎಸ್ ಪಿ ತಂಡ ದಾಳಿ
ನಿಮ್ಮಿನ್ನು ಜಮೀನಿನಿಂದ ಹೊರ ಹಾಕುತ್ತಿಲ್ಲ ಹಾಲಿ ಜಮೀನಿನಿಂದ ಹೋಗಬೇಡಿ ಒಂದು ವರ್ಷದ ಕಾಲ ನೀವೇ ಸಾಗುವಳಿ ಮಾಡಿ ಒಂದು ವರ್ಷದ ಒಳಗೆ ಇದರ ಬಗ್ಗೆ ಕಾನೂನು ಹೋರಾಟ ಮಾಡಿ ನಿಮ್ಮ ಸರ್ವೇ ನಂಬರ್ ನ ಜಮೀನನ್ನು ಪಡೆದುಕೊಂಡು ಜೀವನ ರೂಪಿಸಿಕೊಳ್ಳಿ ಇಲ್ಲ ಇದೇ ಜಮೀನು ನಿಮ್ಮದೇ ಎಂದು ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಬಂದರೂ ಸಹ ನಿಮ್ಮ ಜಮೀನನ್ನು ನಿಮಗೆ ಬಿಡುತ್ತೇವೆ ಎಂದು ಗ್ರಾಮಸ್ಥರು ಸಮಾಧಾನಪಡಿಸಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದರು.





