ಕೋಲಾರ: ನಗರಸಭೆಯ ಹೊರ ಗುತ್ತಿಗೆ ಪೌರ ಕಾರ್ಮಿಕರ 9 ತಿಂಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೋಮವಾರ ನಗರಸಭೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್, ಆಟೋಗಳಿಗೆ ತುಂಬುವ ಲೋಡರ್, ಕಸ ವಾಹನ ಚಾಲಕರು, ಮತ್ತು ಒಳಚರಂಡಿಗಳಲ್ಲಿ ಮಲ-ಮೂತ್ರಗಳನ್ನು ತೆರವುಗೊಳಿಸಿಸುವ ಸ್ವಚ್ಚ ಮಾಡುವವರು ಯು.ಜಿ.ಡಿ ಸಿಬ್ಬಂದಿ, ಕಸ ವಿಂಗಡಿಸುವವರು. ಲ್ಯಾಂಡ್ ಫಿಲ್ಡ್ ಕಾರ್ಮಿಕರಿಗೆ ಸುಮಾರು 9 ತಿಂಗಳ ವೇತನ ಬಾಕಿ ಇದ್ದು, ಇವರ ವೇತನವನ್ನು ತಕ್ಷಣ ಪಾವತಿ ಮಾಡಬೇಕೆಂದು ಒತ್ತಾಯಿಸಿದರು
ಕೋಲಾರ ನಗರಸಭೆಯಲ್ಲಿ ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಇವರಿಗೆ ಸಕಾಲಕ್ಕೆ ವೇತನ ನೀಡದೇ ದುಡಿಸಿಕೊಳ್ಳುತ್ತಿರುವುದು ಅಮಾನವೀಯ ತಿಂಗಳ ಪೂರ್ತಿ ದುಡಿದರೂ ವೇತನ ಕೈಗೆ ಬರದೇ ಇರುವುದರಿಂದ, ವಾರದ ತಿಂಗಳ ಬಡ್ಡಿಗೆ ಸಾಲ ಮಾಡಿ. ಕುಟುಂಬಗಳ ಘೋಷಣೆ ಮಾಡುವಂತಾಗಿದೆ 9 ತಿಂಗಳ ವೇತನ ಬಾಕಿ ಇದೆ ಸರ್ಕಾರದ ಸೂಚನೆಯಂತೆ ಪ್ರತಿ ತಿಂಗಳು ವೇತನವನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕಾಗಿದ್ದರೂ ತಿಂಗಳಾನುಗಟ್ಟಲೇ ಬಿಡುಗಡೆ ಮಾಡಿಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಮನವಿ ಮಾಡಿದಾಗ ಸಮರ್ಪಕವಾಗಿ ಸ್ಪಂದಿಸದೇ, ಇಷ್ಟ ಇದ್ದರೇ ಮಾಡಿ, ಇಲ್ಲವೇ ಕೆಲಸ ಬಿಟ್ಟು ಹೋಗಿ ಎಂದು ಬೇಜಾವಾಬ್ದಾರಿಯಾಗಿ ಮಾತನಾಡುವುದು ಖಂಡನೀಯ ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಎಲ್ಲಾ ಹೊರ ಗುತ್ತಿಗೆ ಪೌರ ಕಾರ್ಮಿಕರಿಗೆ ಗುರುತಿನ ಚೀಟಿ, ಭವಿಷ್ಯ ನಿಧಿ ಮತ್ತು ಇಎಸ್ಐ ಹಣವನ್ನು ಪಾವತಿ ಮಾಡುತ್ತಿರುವ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಬೇಕು ಕಾರ್ಮಿಕರಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರವನ್ನು ನೀಡಬೇಕು ಎಲ್ಲಾ ಹೊರ ಪೌರ ಗುತ್ತಿಗೆ ಕಾರ್ಮಿಕರಿಗೆ ಗೌಸ್, ಮಾಸ್ಕ್, ಗಮ್ ಬೂಟ್ಸ್ ಸೇರಿದಂತೆ ಸುರಕ್ಷಾ ಕಿಟ್ಅನ್ನು ಪ್ರತಿ ವರ್ಷ ನೀಡಬೇಕು ವಾರದ ರಜೆ, ರಾಷ್ಟ್ರೀಯ ಹಬ್ಬಗಳು ರಜಾ ದಿನವನ್ನು ನೀಡಬೇಕು ಕಾರ್ಮಿಕರ ಕುಂದು ಕೊರತೆ ಸಭೆಯನ್ನು ಎರಡು ತಿಂಗಳಿಗೊಮ್ಮೆ ನಡೆಸಬೇಕು ಸೇವೆಯಲ್ಲಿ ಇದ್ದ ಸಂದರ್ಭದಲ್ಲಿಯೇ ಮೃತಪಟ್ಟರೇ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆ.ಬಿ ಕೃಷ್ಣಪ್ಪ ಮಾತನಾಡಿ ಹೊರ ಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನೇರ ಪಾವತಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಕುಮಾರ್, ದಿನೇಶ್ರವರು ಇತ್ತೀಚೆಗೆ ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಖಾಯಂ ಉದ್ಯೋಗ ನೀಡಬೇಕು, ಗ್ರಾಚ್ಯಟಿ ಬಿಡುಗಡೆ ಮಾಡಿ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ನಗರಸಭೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟವನ್ನು ನಡೆಸಲಾಗುತ್ತಿದೆ. ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..?ಜಾತಿ ವ್ಯವಸ್ಥೆಯ ವಿರುದ್ದ ಕನಕದಾಸರು ಕೆಲಸ ಮಾಡಿದ್ದಾರೆ: ಕೆ.ವಿ ಪ್ರಭಾಕರ್
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಂಜುನಾಥ್
ಪೌರ ಕಾರ್ಮಿಕರ ಸಂಘದ ಮುಖಂಡರಾದ ಮಂಜುನಾಥ್ ಜಿ, ಕಿರಣ್ ಕುಮಾರ್, ಜಗದೀಶ್, ರಾಮ, ಆನಂದ್, ನರೇಶ್, ರಾಜೇಶ್, ಪ್ರಶಾಂತ್, ಲೋಕೇಶ್, ನಾಗಮಣಿ, ರೂಪ, ವನಿತಾ, ಧನಲಕ್ಷ್ಮೀ ಮುಂತಾದವರು ಇದ್ದರು.





