ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಮೈತ್ರಿ ಬೆಂಬಲಿತ ಮುಖಂಡ ಷೇರುದಾರರು ಸೊಸೈಟಿ ಎದುರುಗಡೆ ಕಾರ್ಯದರ್ಶಿ ಮೇಲೆ ಗರಂ ಆಗಿ ಮಾತಿಗೆ ಮಾತು ಬೆಳೆದ ಕೈ ಕೈ ಮಿಲಾಯಿಸುವ ಹಂತಕ್ಕೆ ಘಟನೆ ಇಂದು ನಡೆಯಿತು.
ಕಳೆದ ದಿನ ಮೈತ್ರಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸುಮಾರು ಹೆಸರುಗಳನ್ನು ಸೇರಿಸಿ ಚುನಾವಣೆಯ ಸೂಕ್ತ ರೀತಿಯಲ್ಲಿ ಮಾಹಿತಿ ನೀಡದೆ ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇಂದು ಮಧ್ಯಾಹ್ನ 12 ಗಂಟೆಯಿಂದ 03:00 ಗಂಟೆ ಅವರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು ,ಇದಕ್ಕೂ ಮುಂಚೆ ಮೈತ್ರಿ ಮುಖಂಡ ಷೇರುದಾರರ ಸೊಸೈಟಿ ಎದುರುಗಡೆ ಜಮಾಯಿಸಿ ಚುನಾವಣಾ ಅಧಿಕಾರಿ ಶುಭ ರವರು ಆಗಮಿಸುತ್ತಿದ್ದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ, ಮೊದಲು ಇದನ್ನು ಪರಿಶೀಲಿಸಿ ನಂತರ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಿ ಎಂದು ಹೇಳಿದಾಗ ಚುನಾವಣಾ ಅಧಿಕಾರಿ ಶುಭ ರವರು ಮಾತನಾಡಿ ನನಗೆ ಚುನಾವಣೆ ನಡೆಸಲು ಆಯ್ಕೆ ಮಾಡಲಾಗಿದೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದರೆ ಕಾರ್ಯದರ್ಶಿ ಬಳಿ ವಿಚಾರಿಸಿಕೊಳ್ಳಿ ಎಂದು ಹೇಳಿ ಹೋಗಿದ್ದಲ್ಲದೆ ಷೇರುದಾರರು ಸಲ್ಲಿಸಿದ ನಾಮಪತ್ರಗಳನ್ನು ಸ್ವೀಕರಿಸಿದರು.
ಅಷ್ಟೇ ಅಲ್ಲದೆ ಮೈತ್ರಿ ಮುಖಂಡ ಷೇರುದಾರರು ಸೊಸೈಟಿಯ ಕಾರ್ಯದರ್ಶಿ ರಾಜ್ ಕುಮಾರ್ ರವರಿಗೆ ತರಾಟೆಗೆ ತೆಗೆದುಕೊಂಡು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಎಲ್ಲಾ ದಾಖಲೆಗಳನ್ನು ಸ್ಥಳದಲ್ಲೇ ನೀಡಿ ಚುನಾವಣೆ ಪ್ರಕ್ರಿಯೆಯನ್ನು ಮುಂದುವರಿಸಿ ಎಂದು ಪಟ್ಟು ಹಿಡಿದಾಗ ಕಾರ್ಯದರ್ಶಿ ರಾಜಕುಮಾರ್ ರವರು ಲಿಖಿತ ಮೂಲಕ ದಾಖಲೆಗಳನ್ನು ಕೇಳಿದರೆ ಚುನಾವಣೆ ಮುಕ್ತಾಯದ ನಂತರ ದಾಖಲೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ನೀಡುತ್ತೇನೆ ಎಂದು ಹೇಳಿದಾಗ ಕಾರ್ಯದರ್ಶಿ ಹಾಗೂ ಷೇರುದಾರರು ನಡುವೆ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತಕ್ಕೆ ನಡೆಯಿತು.
ಪೊಲೀಸರು ಮಧ್ಯಪ್ರವೇಶಿಸಿ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಅನುವು ಮಾಡಿಕೊಟ್ಟರು.
ಇನ್ನು ಈ ವೇಳೆ ಮಾತನಾಡಿದ ಕಾರ್ಯದರ್ಶಿ ರಾಜ್ ಕುಮಾರ್ ನಮ್ಮ ಬಳಿ ಇರುವ ದಾಖಲೆಗಳಂತೆ ಮತದಾರರ ಪಟ್ಟಿಯನ್ನು ತಯಾರಿಸಲಾಗಿದ್ದು ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಈ ವೇಳೆ ಮೈತ್ರಿ ಮುಖಂಡರಾದ ದೊಡ್ಡಹಳ್ಳಿ ಗೋಪಾಲಕೃಷ್ಣ,ಬನಹಳ್ಳಿ ಮಂಜುನಾಥ್,ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರಪ್ಪ ಮಾತನಾಡಿ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರುಗಳನ್ನು ಸೇರಿಸಿ ಚುನಾವಣೆ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ!ಸೊಸೈಟಿ ಕಾರ್ಯದರ್ಶಿಗೆ ಅಕ್ರಮ ಮತದಾರರ ಪಟ್ಟಿ ಮಾಡಿರುವ ದಾಖಲೆಗಳು ನೀಡಲು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ…? ಉನ್ನತ ಶಿಕ್ಷಣ ಇಲಾಖೆಯ 103 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಹ್ವಾನ
ಸಚಿವರ ಬೆಂಬಲಿಗರಾದ ನಂಜುಂಡ ಗೌಡ,ಚಂದ್ರಪ್ಪ, ರವರು ಮಾತನಾಡಿ ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯಾದಂತಹ ಅಕ್ರಮ ನಡೆದಿಲ್ಲ ವಿರೋಧ ಪಕ್ಷದ ಮುಖಂಡರುಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.





