ಚಿಂತಾಮಣಿ : ಎಲ್ಲಾ ಸಮುದಾಯಗಳಿಗೆ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿಂತಾಮಣಿಯಲ್ಲಿ ಒಂದೇ ಕಡೆ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲು ಜಮೀನು ನೀಡಿರುವದು ಸಂತೋಷದ ಸುದ್ದಿ ಎಂದು ಮುಸ್ಲಿಂ ಮುಖಂಡರಾದ ಸೈಯದ್ ಏಜಾಜ್,ಶೇಕ್ ಸಾಧಿಕ್ ರಜ್ವಿ, ಮಾಲೀಕ್ ಪಾಷಾ,ರವರು ಹೇಳಿದರು.
ಇಂದು ಚಿಂತಾಮಣಿ ನಗರದ ಹೊರವಾಲಯದ ರಜಕ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿ ನಲ್ಲಗುಟ್ಟಹಳ್ಳಿ ಗ್ರಾಮದ ಸರ್ವೆ ನಂ:42 ರ.ಪೈಕಿ ಭಾಗ 31ರಲ್ಲಿ 1 ಎಕರೆ 09 ಗುಂಟೆ. ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕಲಿಕಾ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ, ಕಾಯ್ದಿರಿಸಲಾಗಿದೆ.
ಸಚಿವರು ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಕಾರ್ಯ ಮಾಡಿರುವುದು ಶ್ಲಾಘನೆಯ ಎಂದು ಹೇಳಿದರು.
ಸಚಿವರ ಈ ಕಾರ್ಯಕ್ಕೆ ನಾವು ಎಂದಿಗೂ ಅವರೊಂದಿಗೆ ಚಿರಋಣಿಯಾಗಿರಬೇಕು.ಸದಾ ಅವರ ಜೊತೆಯಲ್ಲಿದ್ದು ಮುಂಬರುವ ಚುನಾವಣೆಯಲ್ಲಿ ಅವರಿಗೆ ಮತ ನೀಡುವದರ ಮೂಲಕ ಮತ್ತೊಂದು ಬಾರಿ ಅವರಿಗೆ ಉನ್ನತ ಹುದ್ದೆಯನ್ನು ಅಲಂಕರಿಸಲು ಎಲ್ಲಾ ಮುಸ್ಲಿಂ ಸಮುದಾಯದವರು ಸಹಕರಿಸಬೇಕೆಂದು ಕೋರಿದರು.
ಇದನ್ನು ಓದಿದ್ದೀರಾ..? ಮಕ್ಕಳಿಗೆ ಪೋಷಕರ ಆಶೀರ್ವಾದ ಮುಖ್ಯ: ಡಿಐಜಿಪಿ ಡಿ.ದೇವರಾಜ್
ಈ ಸಂದರ್ಭದಲ್ಲಿ ಮುಖಂಡರಾದ ಕರಿಯಪಲ್ಲಿ ಮಾಲಿಕ್ ಪಾಷಾ, ಇಮ್ತಿಯಾಜ್ ಪಾಷಾ,ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಅಮೀರ್ ಜಾನ್,ಡಾ!ವಜಿರ್,ಸಿ ಕೆ ಎಲ್ ಚಾಂದ್ ಪಾಷ,ಅಕ್ಮಲ್ ಖಾನ್,ರಹೀಮ್,ಸುಹೇಲ್,ಖಾದರ್ ಸಬ್,ಷಾ,ಆರ್ ಕೆ ರಫೀಕ್,ಫಾರೂಕ್,ಸಿಕಂದರ್,ಮಹಬೂಬ್ ಸಾಬ್,ಸೇರಿದಂತೆ ಮುಂತಾದವರು ಇದ್ದರು.





