ಬೇತಮಂಗಲ: ಕೋಲಾರ ಜಿಲ್ಲೆಯ ಕೆರೆಗಳಲ್ಲಿಯೇ ಬಹುದೊಡ್ಡ ಕೆರೆ ಎನಿಸಿಕೊಂಡಿರುವ ಬೇತಮಂಗಲ ಬಳಿಯ ರಾಮಸಾಗರ ಕೆರೆ ಧಾರಾಕಾರ ಮಳೆಯಿಂದಾಗಿ ಕೋಡಿ ಹರಿದಿದ್ದು, ಈ ಭಾಗದ ಜನತೆಯ ಮೊಗದಲ್ಲಿ ಹರ್ಷ ಮೂಡಿದೆ.
ಜಿಲ್ಲೆಯ ಮುದುವಾಡಿ ಹೊಲಾಲಿ ಬೇತ್ಮಂಗಳ ಪಾಲಾರ್ ಕೆರೆ ಸೇರಿದಂತೆ 999 ಕೆರೆಗಳ ತುಂಬಿ ಹರಿದಿದೆ 1000ನೇಯಾದಾಗಿ ಇದೀಗ ರಾಮಸಾಗರ ಕೆರೆ ಭರ್ತಿಯಾಗಿ ಕೋಡಿ ಹರದಿದ್ದು ಈ ಕೆರೆ ಸುಮಾರು 1264 ಎಕರೆ ವಿಸ್ತೀರ್ಣವಿದ್ದು, ಅಂದಾಜು 25 ಅಡಿಗಳ ಅಳವಿದೆ.
1 ಕೋಟಿ ರೂ., ವೆಚ್ಚದಲ್ಲಿ ಕೆರೆ ಕಟ್ಟೆ ದುರಸ್ತಿ : ರಾಮಸಾಗರ ಕೆರೆ ಕೋಡಿ ಹರಿಯುವ ನಿರೀಕ್ಷೆಯಿಂದ ಶಾಸಕಿ ರೂಪಕಲಾ ಅವರು ಸಣ್ಣ ನೀರಾವರಿ ಇಲಾಖೆ ಮೂಲಕ 1. ಕೋಟಿ ರೂ ವೆಚ್ಚದಲ್ಲಿ ತೂಬು ಮತ್ತು ಕಟ್ಟೆ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆರೆ ಮೈದುಂಬಿ ಹರಿಯುತ್ತಿರುವ ಹಿನ್ಕೆನೆಲೆಯಲ್ಲಿ ಕೆರೆಯನ್ನು ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ರಾಜ್ಯದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಅವರ ಹುಟ್ಟೂರಾದ ಕ್ಯಾಸಂಬಳ್ಳಿ ಹೋಬಳಿಗೆ ಸೇರಿದ ರಾಮಸಾಗರ ಕೆರೆ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುತ್ತಾ ಬಂದಿದೆ ಅಲ್ಲದೆ ರೈತರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತಾ ಬಂದಿದೆ.1000 ದಿಂದ 1500 ಅಡಿಗಳ ಆಲದವರೆಗೂ ಕೊಳವೆ ಕೊರೆದರು ನೀರು ಸಿಗದ ಪರಿಸ್ಥಿತಿಯಲ್ಲಿದ್ದ ಬೋರ್ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.
ನಂದಿ ಬೆಟ್ಟದಿಂದ ಹರಿದು ಬರುವ ನೀರು: ನಂದಿ ಬೆಟ್ಟದಿಂದಲೂ ನೀರು ಇತಿಹಾಸ ಪುಟಗಳಲ್ಲಿ ದಾಖಲಾಗಿರುವಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಹರಿದು1000 ಕೆರೆಗಳನ್ನು ದಾಟಿ ರಾಮಸಾಗರ ಕೆರೆಗೆ ನೀರು ಹರಿಯಲಿದೆ ನಂತರ ಆಂಧ್ರ ಪ್ರದೇಶ ಮೂಲಕ ತಮಿಳುನಾಡು ಕಡಲ ಹತ್ತಿರ ಸೇರಲಿದೆ ಎಂಬ ಇತಿಹಾಸವಿದೆ.
ವರುಣದೇವನ ಆರ್ಭಟಕ್ಕೆ ರೈತರ ಬೆಳೆದಿದ್ದ ಕಡಲೆ ರಾಗಿ ಬೆಲೆಗಳು ನೆಲಕಚ್ಚಿ ಅನೇಕ ರೈತರಿಗೆ ನಷ್ಟ ಉಂಟಾಗಿದೆ ಆದರೆ ಜಿಲ್ಲೆ ಅತಿದೊಡ್ಡ ಕೆರೆಯಾದ ರಾಮಸಾಗರ ಕೆರೆ ಭರ್ತಿಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಪ್ರವಾಸಿಗರ ಹೆಚ್ಚಳ: ಕಳೆದ ವಾರವಷ್ಟೇ ಬೇತಮಂಗಲ ಪಾರ್ಲರ್ ಕೆರೆ ತುಂಬಿ ಕೋಡಿ ಹರಿದಿದ್ದು ರಾಮ್ ಸಾಗರ ಕೆರೆ ಸಹ ತುಂಬಿ ಕೋಡಿ ಹರಿದ ಪ್ರಯುಕ್ತ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸಾಲು ಸಾಲು ರಜೆಗಳ ಪ್ರಯುಕ್ತ ಬೆಂಗಳೂರು ಉತ್ತರ ಕಡೆಗಳಿಂದ ಬಂದಿದ್ದ ಪ್ರವಾಸಿಗರು ಕೆರೆಗಳತ್ತ ಸಾಗುತ್ತಿದ್ದು ಮೈದುಂಬಿ ಹರಿಯುತ್ತಿರುವ ಕರೆಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ…? ಕೋಲಾರ | ವಕ್ಫ್ ಆಸ್ತಿಗಳ ನೋಂದಣಿಗೆ ರಾಜ್ಯಾದ್ಯಂತ ಹೆಲ್ಪ್ಡೆಸ್ಕ್ ಸ್ಥಾಪಿಸಲು ಕರೆ
ಶುಕ್ರವಾರ ಬಾಗಿನಕ್ಕೆ ಸಿದ್ಧತೆ: ಬೇತಮಂಗಲ ಪಾಲಾರ್ ಕೆರೆಗೆ ಶಾಸಕಿ ಎಂ.ರೂಪಕಲಾ, ಸ್ಥಳೀಯ ಜನಪ್ರತಿನಿಧಿಗಳ, ಮುಖಂಡರ ಅನುಪ ಸ್ಥಿತಿಯಲ್ಲಿ ಬಾಗಿನ ಅರ್ಪಿಸಿದ್ದು, ರಾಮಸಾಗರ (ಬುಕ್ಕು ಸಾಗರ) ಕೆರೆಗೆ ಅ.24ರ ಶುಕ್ರವಾರ ಬಾಗಿನ ಅರ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.





