ಬಾಗೇಪಲ್ಲಿ:- ಬೆಂಗಳೂರು ಆನೇಕಲ್ ಹತ್ತಿಬೆಲೆ ಪ್ರದೇಶದಲ್ಲಿ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯು, ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಕೆಐಏಡಿಬಿಯ ಮೂಲಕ ಈ ಹಿಂದೆ ಪಡೆದ ಸುಮಾರು 1,000 ಕೋಟಿ ರೂಗೂ ಅಧಿಕ ಮೌಲ್ಯದ
55.5 ಎಕರೆ ಜಮೀನನ್ನು ಇದೀಗ 250 ಕೋಟಿ ರೂಗಳಿಗೆ ಮಾರಾಟ ಮಾಡಿದೆ.
ಕೈಗಾರಿಭಿವೃದ್ಧಿ ಹೆಸರಿನಲ್ಲಿ ಸರಕಾರದಿಂದ ಅತ್ಯಂತ ಕಡಿಮೆ ಬೆಲೆಗೆ ಅಥವಾ ದಾನವಾಗಿ ಪಡೆದ ಜಮೀನನ್ನು ರಿಯಲ್ ಎಸ್ಸೇಟ್ ಮಾಡಿ ಲಾಭ ಮಾಡಿಕೊಂಡ ಇನ್ಫೋಸಿಸ್ ಸಂಸ್ಥೆಯ ಅಕ್ರಮವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ
ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮುನಿವೆಂಕಟಪ್ಪ ಎಂಪಿ ತಿಳಿಸಿದರು.
ಅವರು ಪಟ್ಟಣದ ಸಿಪಿಐಎಂ ಪಕ್ಷದ ಕಛೇರಿ ಸುಂದರಯ್ಯ ಭವನದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದರು.
ಈ ಕೂಡಲೆ ಸದರಿ ಭೂಮಿಯ ಮಾರಾಟದ ಪ್ರಕ್ರಿಯೆಯನ್ನು ತಡೆದು ರಾಜ್ಯ ಸರಕಾರ ವಾಪಾಸು ಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ರಾಜ್ಯ ಸರಕಾರ ಕೆಐಏಡಿಬಿ ಮೂಲಕ ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಮತ್ತು ಬಲವಂತವಾಗಿ ಸ್ವಾಧೀನ ಮಾಡಿ, ನಂತರ ಕೇವಲ ತಲಾ ಎಕರೆಗೆ 100 ರೂಗಳಂತೆ ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಸದರಿ ಕಂಪನಿಗೆ ಗುತ್ತಿಗೆಗೆ ನೀಡಿದೆ. ನಂತರ ಅತ್ಯಂತ ಕಡಿಮೆ ಬೆಲೆಗೆ ( ಹಳೆಯ) ಅವರಿಗೆ ಮಾರಾಟ ಮಾಡಿದೆ.
ಇನ್ಪೋಸಿಸ್ ಸಂಸ್ಥೆಯು ಅದನ್ನು ಸಂಸ್ಥೆ ಹಾಗು ಕೈಗಾರಿಕಾಭಿವೃದ್ಧಿಗೆ ಬಳಸದೆ ರಿಯಲ್ ಎಸ್ಟೇಟ್ ಮಾಡಿ ಲಾಭ ಮಾಡಿಕೊಂಡು ವಂಚಿಸಿದೆ. ಇದು, ರಾಜ್ಯ ಸರಕಾರ ಕೈಗಾರಿಕಾಭಿವೃದ್ದಿ ಹೆಸರಲ್ಲಿ ರೈತರಿಂದ ಬಲವಂತವಾಗಿ ಸ್ವಾಧೀನ ಮಾಡಿದ ಜಮೀನುಗಳು ಹೇಗೆ ಕಾರ್ಪೋರೇಟ್ ಸಂಸ್ಥೆಗಳ ರಿಯಲ್ ಎಸ್ಟೇಟ್ ದಂಧೆಗೆ ಮತ್ತು ಅವರ ಲೂಟಿಗೆ ಒಳಗಾಗುತ್ತಿವೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ಮಾತ್ರವಲ್ಲಾ, ರೈತರಿಂದ ಬಲವಂತವಾಗಿ ಸ್ವಾಧೀನ ಮಾಡಿಕೊಂಡು ಕಾರ್ಪೋರೇಟ್ ಸಂಸ್ಥೆಗಳ ಲೂಟಿಕೋರತನಕ್ಕೆ ವರ್ಗಾಯಿಸುತ್ತಿದೆ ಎಂಬುದನ್ನು ಬಯಲುಗೊಳಿಸುತ್ತದೆ ಎಂದು ಸಿಪಿಐಎಂ ವಿವರಿಸಿದೆ.
ಇದನ್ನು ಓದಿದ್ದೀರಾ..? ಅಪಘಾತದಲ್ಲಿ ಅಜ್ಜವಾರದ 4 ಮಂದಿ ಯುವಕರು ಸಾವು: ಮೃತರ ಸ್ವ-ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ
ಈ ಭೂಮಿಯನ್ನು ಸರ್ಕಾರ ನಿರ್ದಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿದೆ. ಆ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲಾಗಿಲ್ಲ ಎಂದ ಮೇಲೆ, ಇನ್ಫೋಸಿಸ್ ಅದನ್ನು ವಾಣಿಜ್ಯ ದರಕ್ಕೆ ಮಾರಾಟ ಮಾಡುವ ಹಕ್ಕನ್ನು ಹೊಂದಿಲ್ಲ. ಹೀಗಾಗಿ ಈ ಭೂಮಿ ಮತ್ತು ಅದರ ಆದಾಯವನ್ನು ಕರ್ನಾಟಕ ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು
ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯರು ಮುನಿವೆಂಕಟಪ್ಪ ಎಂಪಿ ತಿಳಿಸಿದರು.





