ಕೋಲಾರ: ತಾಲ್ಲೂಕಿನ ವಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸತತ ಎರಡನೇ ಬಾರಿಯೂ ಸಹ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವು ಕಾಂಗ್ರೆಸ್ ಬೆಂಬಲಿತ ವಡಗೂರು ಗ್ರಾಮದ ಪರಿಶಿಷ್ಟ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದ ಲಕ್ಷ್ಮಮ್ಮ ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹಿಂದೆ ಅಧ್ಯಕ್ಷರಾಗಿದ್ದ ಸುಮಿತ್ರ ಚಂದ್ರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಹಾಗೂ ರಾಜ್ಯ ಬೀಜ ನಿಗಮದ ನಿರ್ದೇಶಕ ವಡಗೂರು ಡಿ.ಎಲ್ ನಾಗರಾಜ್ ಅವರ ನೇತೃತ್ವದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ ನಾಗರಾಜ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಇದನ್ನು ಓದಿದ್ದೀರಾ..? ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಸಹಕರಿಸಿ:ತಹಸಿಲ್ದಾರ್ ಸುದರ್ಶನ್ ಯಾದವ್
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹನುಮೇಗೌಡ, ಅಜ್ಜಪ್ಪನಹಳ್ಳಿ ಸುರೇಶ್, ಕೆಂಬೋಡಿ ಗಿರೀಶ್, ಸೀಸಂದ್ರ ಮಂಜುನಾಥ್, ವಡಗೂರು ವಿಶ್ವನಾಥ್, ಸೋಮಣ್ಣ, ಸುಮಿತ್ರ ಚಂದ್ರಪ್ಪ, ಕಾಳಸ್ತಿಪುರ ಅಶೋಕ್, ಶಿವಮ್ಮ, ಗಿರೀಜಮ್ಮ, ಗಿರ್ನಹಳ್ಳಿ ಸುಮಿತ್ರ ಈಶ್ವರ್, ಕಾಂಗ್ರೆಸ್ ಮುಖಂಡರಾದ ಮಲ್ಲಂಡಹಳ್ಳಿ ಬಾಬು, ಹರಳಕುಂಟೆ ವೆಂಕಟೇಶ್, ಅಬ್ಬಣಿ ನಾಗರಾಜ್, ಕೆಂಚಾಪುರ ಗಿರೀಶ್, ಮುಂತಾದವರು ಇದ್ದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿದರು





