ಬೇತಮಂಗಲ: ಇಲ್ಲಿನ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆನ್ನೇರಹಳ್ಳಿ ಗ್ರಾಮದಲ್ಲಿ ಎಂಪಿಎಲ್ಇಡಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ತಂಗುಧಾನವು ಕಳಪೆಯಿಂದ ಕೂಡಿದ್ದು, ಈ ಕೂಡಲೇ ಪುನಃ ನಿರ್ಮಿಸಿ ಕೊಡಬೇಕೆಂದು ಗ್ರಾಮದ ಮುಖಂಡ ಸೊಸೈಟಿ ಶಂಕರ್ ರೆಡ್ಡಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಸ್ ತಗುದಾನದ ಬಳಿ ಮಾತನಾಡಿದ ಅವರು, ಕೇವಲ ಹಣವನ್ನು ಮಾಡುವ ದೃಷ್ಟಿಯಿಂದ ಯೋಗ್ಯವಲ್ಲದ ಬಸ್ ಶೆಲ್ಟರ್ ನಿರ್ಮಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಯಾವುದೇ ಅಡಿಪಾಯ ಹಾಕದೆ, ಸೀಟ್ಗಳನ್ನು ಅಳವಡಿಸಿ ಸುತ್ತಲೂ ಸೆಂಟ್ರಿಂಗ್ ಹೊಡೆದು ಕಳಪೆ ಕಾಂಕ್ರೀಟ್ ಹಾಕಿ ಬಸ್ ಸೆಂಟರ್ ನಿರ್ಮಿಸಲಾಗಿದೆ ಕನಿಷ್ಠ ನೀರನ್ನು ಸಹ ಕ್ಯೂರಿಂಗ್ ಮಾಡದ ಪರಿಣಾಮ ಸಿಮೆಂಟ್ ಪರದೆ ಕಲಚಿ ಬೀಳುತ್ತಿದೆ ಇದರಿಂದ ಸಾರ್ವಜನಿಕರಿಗೂ ಪ್ರಾಣ ಹಾನಿ ಇದೆ ಬಸ್ ಶೇಲ್ಟರ್ ಪಕ್ಕದಲ್ಲಿಯೇ ಬೃಹತ್ ಮರವಿದ್ದು, ಮರೆದ ಕೊಂಬೆಗಳು ಸಹ ಶೆಲ್ಟರ್ ಮೇಲೆ ಬೀಳುವ ಸಂಭವವಿದೆ ಇದರಿಂದಲೂ ಸಾರ್ವಜನಿಕರಿಗೆ ಪ್ರಾಣ ಹಾನಿಯಾಗಲಿದೆ ಎಂದು ಆರೋಪಿಸಿದರು.
ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಸ್ ಶೇಲ್ಟರ್ ನ ಸ್ಥಿತಿಯನ್ನು ಪರಿಶೀಲಿಸಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಇವರ ಟೆಂಡರ್ ನ್ನು ರದ್ದುಗೊಳಿಸಿ ಇತರೆ ಗುತ್ತಿಗೆದಾರರಿಗೆ ಮರು ಟೆಂಡರ್ ಮೂಲಕ ಹೊಸ ಬಸ್ ಶೇಲ್ಟರ್ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ITC ನಕಲಿ ಕಂಪನಿಯ ಸಿಗರೇಟ್ ಮಾರಾಟ ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ್ ರೆಡ್ಡಿ ಮಾತನಾಡಿ, ಸಂಸದರ ಅನುದಾನದಲ್ಲಿ ನಿರ್ಮಿಸಿರುವ ಈ ಬಸ್ಸ್ ನಿಲ್ದಾಣದವು ಕಳಪೆಯಿಂದ ಕೂಡಿದ್ದು, ಈ ಕಾಮಗಾರಿಗೆ ಯಾವುದೇ ಬಿಲ್ ಪಾವತಿ ಮಾಡಬಾರದು ,ತಕ್ಷಣ ಈ ನಿಲ್ದಾಣವನ್ನು ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ಬಸ್ ನಿಲ್ದಾಣ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.





