ಚಿಕ್ಕಬಳ್ಳಾಪುರ: ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ವಿಷಾದ ಕಾರ್ಯಕ್ರಮದಲ್ಲಿ ಭಾರತದ ಸರ್ವೂಚ್ಚ ಮುಖ್ಯ ನ್ಯಾಯಮೂರ್ತಿಗಳು ಗೌರವಾನ್ವಿತ ಬಿ.ಆರ್ ಗಾವಯಿ ರವರ ನ್ಯಾಯಾಲಯದಲ್ಲಿ ಅವರ ಮೇಲೆ ಸೋಮವಾರ ರಂದು ಭಾರತದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ರವರನ್ನು ಗುರಿಯಾಗಿಸಿಕೊಂಡು ನಡೆಸಿದ ಕೃತ್ಯ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಚಿಕ್ಕಬಳ್ಳಾಪುರ ವಕೀಲರ ಸಂಘವು ಆಕ್ರೋಶವನ್ನು ವ್ಯಕ್ತಪಡಿಸುತ್ತದೆ.
ಸಂಘದ ಅಧ್ಯಕ್ಷ ಅಭಿಲಾಶ್.ಕೆ. ವಿ ಅವರು ಮಾತನಾಡಿ ಭಾರತ ದೇಶದ ಆದರ ಸ್ತಂಭವಾದ ನ್ಯಾಯಾಂಗ ಇಲಾಖೆಯನ್ನು ರಕ್ಷಿಸುವ ಮತ್ತು ಗೌರವಿಸುವ ಜವಾಬ್ದಾರಿ. ಪ್ರತಿಯೊಬ್ಬ ಭಾರತೀಯ ನಾಗರಿಕನದಗಿದ್ದು ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಗೌರವವನ್ನು ನೀಡಬೇಕೆಂದು ಎಲ್ಲಾ ವಕೀಲರಲ್ಲಿ ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ಕೆಜಿಎಫ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ-ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೋಳಿ
ಚಿಕ್ಕಬಳ್ಳಾಪುರ ವಕೀಲರ ಸಂಘದ ಸಮ್ಮತಿಯ ಮೇರೆಗೆ ಎಲ್ಲಾ ಸಂಘದ ಗೌರವಾನ್ವಿತ ಸದಸ್ಯ ವಕೀಲರು ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ವಕೀಲರಾದ ರಾಮ್ ಮೂರ್ತಿ, ರಘುರಾಂ, ಪಾಪಿರೆಡ್ಡಿ,ಮಟಮಪ್ಪ, ಮುನಿಕೃಷ್ಣ, ಅಂಬರೀಷ್, ಸಂದೀಪ್ ಚಕ್ರವರ್ತಿ, ಪದಾಧಿಕಾರಿಗಳಾದ ಮುನಿರಾಜು,ವೆಂಕಟೇಶ್, ಅಯೂಬ್, ಚಂದ್ರಶೇಖರ್, ರಾಘವೇಂದ್ರ, ಪ್ರವಿಣ್, ಮುನಿರಾಜು ಹಾಗೂ ಸಂಘದ ಸಹೋದರ ಮತ್ತು ಸಹೋದರಿ ವಕೀಲರು ಹಾಜರಿದ್ದರು,ನಂತರ ಸಂಘದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಠಾರವು ಮಾಡಲಾಯಿತು, ನಂತರ ವಕೀಲರು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಲು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪಾರ ಜಿಲ್ಲಾಧಿಕಾರಿಗಳಾದ ಭಾಸ್ಕರ್ ಅವರಿಗೆ ನಿವೇದನೆಯನ್ನು ಸಲ್ಲಿಸಲಾಯಿತು.ಈ ಹೋರಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸಿದರು.




