ಬಾಗೇಪಲ್ಲಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬಲಗೈ ಜಾತಿಗಳಗೆ
ಟಿಕೆಟ್ ನೀಡಬೇಕು ಎಂದು ಬಲಗೈ ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಕೃಷ್ಣಪ್ಪ ತಿಳಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಜಾತಿಗಳಲ್ಲಿ
ಛಲವಾದಿ ಮಹಾಸಭಾ, ಛಲವಾದಿ ಕ್ಷೇಮಾಭಿವೃದ್ದಿ ಸಂಘ ಇನ್ನೂ ಹಲವಾರು ಸಂಘಟನೆಗಳನ್ನು ಒಟ್ಟುಗೂಡಿಸಿ ಬಲಗೈ ಜಾತಿಗಳ ಒಕ್ಕೂಟ ಎಂದು ಉರಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದಲ್ಲಿ ತೀರ್ಮಾನ ಆಗಿದೆ ಆದ್ದರಿಂದ ನಮ್ಮ ಬಲಗೈ ಜಾತಿಗಳು ಸಮುದಾಯದ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.
ನಾವು ಯಾವುದೇ ಜಾತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ ನಮ್ಮ ಸಮುದಾಯವೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಜನಸಂಖ್ಯೆಯ ಆಧಾರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಜನಾಂಗಕ್ಕೆ ಹೆಚ್ಚು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಗೌರವ ಸಲಹೆಗಾರ ಶಿವಪ್ಪ ಅವರು ಮಾತನಾಡಿ ಮೊದಲು ನಮ್ಮ ಬಲಗೈ ಜನಾಂಗದಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ಅನೇಕ ಸಂಘಟನೆಗಳು ಸ್ಥಾಪನೆಯಾಗಿದ್ದವು ಸರಕಾರಕ್ಕೆ ಇದರ ನಿಖರ ಮಾಹಿತಿ ಲಭ್ಯವಾಗುತ್ತಿರಲಿಲ್ಲ ಇನ್ನು ಮೇಲೆ ಎಲ್ಲಾ ಸಂಘಟನೆಗಳನ್ನು ಒಟ್ಟುಗೂಡಿಸಿ ಬಲಗೈ ಜಾತಿಗಳ ಒಕ್ಕೂಟ ಎಂದು ನಮ್ಮ ಜಾತಿಯ ಸ್ವಾಮೀಜಿ ಜ್ಞಾನ ಪ್ರಕಾಶ್ ಅವರು ಆದೇಶ ನೀಡಿದ ಹಿನ್ನಲೆಯಲ್ಲಿ ನಾವು ಭಾಗ್ಯನಗರ ತಾಲ್ಲೂಕಿನಲ್ಲಿ ಬಲಗೈ ಜಾತಿಗಳ
ಒಕ್ಕೂಟ ಎಂದು ನಾಮಕರಣ ಮಾಡಿ ಅದರ ಅಭಿವೃದ್ದಿಗೆ ಶ್ರಮ ಪಡುತ್ತಿದ್ದೇವೆ ಎಂದರು.
ಇದನ್ನು ಓದಿದ್ದೀರಾ..? ಕೋಲಾರ ಆರ್ ಟಿ ಓ ಬಳಿ ಹಲವರ ಮೇಲೆ ಹುಚ್ಚು ನಾಯಿ ದಾಳಿ
ಈ ಸಂದರ್ಭದಲ್ಲಿ ಬಲಗೈ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಆಯ್ಕೆ;- ಗೌರವಾಧ್ಯಕ್ಷ ಇಂದು ಕೂರೋಲಪಲ್ಲಿ ಕೃಷ್ಣಪ್ಪ, ಗಂಗಯ್ಯ, ತಾಲ್ಲೂಕು ಅಧ್ಯಕ್ಷ ಡಿ.ಕೆ.ಶ್ರೀನಾಥ, ಉಪಾಧ್ಯಕ್ಷ ಚಂದ್ರ, ಮೂರ್ತಿ, ಶ್ರೀನಿವಾಸ,
ಪ್ರಧಾನ ಕಾರ್ಯದರ್ಶಿ ಆನಂದ, ಮುಖಂಡರಾದ ರವಿ, ನಾಗೇಶ್, ಕೃಷ್ಣಮೂರ್ತಿ, ಮುನಿರಾಜು, ವೆಂಕಟೇಶ್, ಮೂರ್ತಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಲು ಬಲಗೈ ಜಾತಿಗಳ ಒಕ್ಕೂಟ ಆಗ್ರಹ
ಪೋಸ್ಟ್ ಹಂಚಿಕೊಳ್ಳಿ:




