ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಭಾನುವಾರ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು “ಬಿಜೆಪಿಯವರು, ನೆಹರೂ ಅವರಿಂದ ದೇಶ ಒಡೆದೋಯ್ತು ಪಾಕಿಸ್ತಾನ ಆಯ್ತು ಅಂತ ನೆಹರು ಅವರನ್ನು ತೆಗಳುತ್ತಾರೆ. ಇದರಿಂದ ನಿಮಗೇ ಅನುಕೂಲ ಆಗಿಲ್ವಾ” ನಿಮ್ಮ ಕಚೇರಿಯಲ್ಲಿ ನೆಹರೂ ಫೋಟೋ ಇಟ್ಟುಕೊಳ್ಳಿ ಎಂದು ಬಿಜೆಪಿ ವಿರುದ್ಧ ಕಾರ್ಯಕ್ರಮದಲ್ಲಿ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು
ಪಾಕಿಸ್ತಾನದಲ್ಲಿ 25- 26 ಕೋಟಿ ಮುಸ್ಲಿಮರು ಇದ್ದಾರೆ. ಭಾರತದಿಂದ ವಿಂಗಡನೆ ಆಗದಿದ್ದರೆ, ಇಲ್ಲೇ ಇರುತಿದ್ದರು. ಆಗ ಭಾಷಣಗಳೆಲ್ಲ ಹೇಗಿರುತ್ತಿತ್ತು, ಎಲ್ಲಾರು ಉರ್ದು ಭಾಷೆಯಲ್ಲಿ ಸಲ್ಲಾವುಲಿಲ್ಲಾ ಹಲ್ಲಾವುಲಿಲ್ಲ, ಎಂದು ಬಿಜೆಪಿಯವರು ಉರ್ದು ಭಾಷಣ ಮಾಡುತಿದ್ದರು. ಹಾಗೆಯೇ, ಮೋದಿ ಅವರು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ 7 ದಿನ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಹಿಂದೂಗಳಲ್ಲಿ ಮೂರ್ತಿ-ಪ್ರಾಣ ಪ್ರತಿಷ್ಠಾಪನೆ ಆಗಬೇಕಾದರೆ, ಬ್ರಾಹ್ಮಣರು ಇರಲೇಬೇಕು, ಆದರೆ ಅದೆಲ್ಲ ಬಿಟ್ಟು ಮೋದಿ ಅವರೇ ಒಬಿಸಿ ನಾಯಕ ಎಂದೇಳಿಕೊಳ್ಳುತ್ತಾರೆ, ಎಂದು ಪ್ರಶ್ನಿಸಿ ಬಿಜೆಪಿಯ ವಿರುದ್ಧ ಸಚಿವ ಸಂತೋಷ್ ಲಾಡ್ ಮಾತಾಡಿದರು.





