ಕೆಜಿಎಫ್: ನಿರ್ಗತಿಕ,ಅನಾಥರಿಗೆ, ಸೂಕ್ತ ಮೂಲಭೂತ ಸೌಕರ್ಯ ಹಾಗೂ ಮಧ್ಯ ವ್ಯಸನಿಗಳಿಗೆ ಕೌನ್ಸೆಲಿಂಗ್ ಮೂಲಕ ಪರಿಹಾರ ನೀಡುವ ಮೂಲಕ ಅವರ ಜೀವನ ಮಟ್ಟದ ಸುಧಾರಿಸಲು ಆಶ್ರಯ ಕಲ್ಪಿಸಲು ಕೆಬಿಸಿ ಟ್ರಸ್ಟ್ ಸ್ಥಾಪಕ ಜಾವೀದ್ ಮುಂದಾಗಿರುವುದು ಶ್ಲಾಘನೀಯ ಎಂದು ಇಸ್ಲಾಮಿಕ್ ಚಿಂತಕ ಉಮರ್ ಷರೀಫ್ ಹೇಳಿದರು.
ಪಟ್ಟಣದ ಹೊರವಲಯದ ಕೃಷ್ಣಾವರಂ ಟೋಲ್ ಪ್ಲಾಜಾ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ಹಿರಿಯ ನಿರ್ಗತಿಕ ಮತ್ತು ಅನಾಥರಿಗೆ ಆರಂಭಗೊಂಡ ನೂತನ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅನೇಕ ಶ್ರೀಮಂತರ ಬಳಿ ಸಾವಿರಾರು ಕೋಟಿ ಹಣ ಇರುತ್ತದೆ ಆದರೆ ಯಾರಿಗೂ ಬಡವರ ಸೇವೆ ಮಾಡಬೇಕೆಂದು ಮುಂದೆ ಬರುವುದಿಲ್ಲ ಆದರೆ ಇಸ್ರೋ ಜಾವಿದ್ ಮುಂದಾಗಿರುವುದು ಪ್ರಶಂಸನೀಯ ಎಂದು ಅಭಿನಂದಿಸಿದರು.
ಇತ್ತೀಚಿನ ದಿನಗಳಲ್ಲಿ ಒಡ ಹುಟ್ಟಿದ ಮಕ್ಕಳೇ ತಂದೆ ತಾಯಿ ಅವರನ್ನು ಸಾಕಲು ಮೀನಾ ಮೇಷ ಎನಿಸುತ್ತಿದ್ದಾರೆ.
ಆದರೆ ಇಂತಹ ಬಡ ಮತ್ತು ನಿರ್ಗತಿಕರಿಗಾಗಿ ಕೋಟ್ಯಾಂತರ ಜಮೀನನ್ನು ಖರೀದಿಸಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ ನುರಿತ ರಿಂದ ಅವರಿಗೆ ಕೌನ್ಸಿಲಿಂಗ್ ಹಾಗೂ ಶಿಕ್ಷಣವನ್ನು ಸಹ ಒದಗಿಸಿ ಆಶ್ರಯ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಕೆಲವರು ಪೋಷಕರನ್ನು ಪೋಷಣೆ ಮಾಡಲು ಅನೇಕ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಹಾಗೂ ಇತ್ತೀಚಿಗೆ ಯುವ ಸಮುದಾಯ ಮಧ್ಯ ಹಾಗೂ ತಂಬಾಕು ಸೇವನೆಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಕಳೆದುಕೊಂಡಿರುತ್ತಾರೆ.
ಇಂತಹ ವ್ಯಕ್ತಿಗಳಿಗೆ ಕೆಬಿಸಿ ಟ್ರಸ್ಟ್ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ನಂತರ ಅವರ ಜೀವನ ಸುಧಾರಿಸದೆ ಇದ್ದಲ್ಲಿ ಇದಕ್ಕಾಗಿ ಮೀಸಲಿಟ್ಟಿರುವ ಹತ್ತು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕೊಠಡಿ ಗಳನ್ನು ನಿರ್ಮಿಸಿ ಅವರ ಆರೋಗ್ಯ ಊಟ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಜೀವನವನ್ನು ಕಲ್ಪಿಸಿಕೊಡಲು ಕೆಬಿಸಿ ಟ್ರಸ್ಟ್ ಮುಂದಾಗಿದೆ ಎಂದು ಅವರ ಸೇವಾ ಕಾರ್ಯವನ್ನು ಸಲ್ಲಿಸಿದರು.
ಕೆಬಿಸಿ ಟ್ರಸ್ಟ್ ಸ್ಥಾಪಕ ಜಾವಿದ್ ಮಾತನಾಡಿ, ತಾವು ಇಸ್ರೋ ಕಂಪನಿಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತರಾಗಿ ಏಳು ವರ್ಷಗಳಾಗಿದ್ದು ತಮ್ಮ ಬಾಲ್ಯದಿಂದ ಸಂಪಾದನೆ ಮಾಡಿದ ಹಣದಲ್ಲಿ ನಿರ್ಗತಿಕ ಬಡವ ಅನಾಥರಿಗೆ ಸೇವೆ ಮಾಡಬೇಕು ಎಂಬ ದೃಷ್ಟಿಯಿಂದ ತಮ್ಮ ಸ್ವಂತ ಹಣ ಹಾಗೂ ದಾನಿಗಳ ಸಹಕಾರದಿಂದ ಕೆಬಿಸಿ ಟ್ರಸ್ಟ್ ಆರಂಭಿಸಿದ್ದು ಸುಮಾರು 3 ಕೋಟಿ ಹಣದಲ್ಲಿ ಜಮೀನನ್ನು ಕರೆಗ್ಸಿದ್ದು ಕಾಂಪೌಂಡ್ ನಿರ್ಮಿಸಲಾಗಿದೆ ಈ ಜಮೀನಿನಲ್ಲಿ ತೆಂಗಿನ ಗಿಡ, ಮಾವಿನ ಗಿಡ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಇದೆ ಪ್ರದೇಶದಲ್ಲಿ ಸುಸಜ್ಜಿತ ಕೊಠಡಿಗಳು, ಶಾಲಾ ಕೊಠಡಿಗಳನ್ನು ಸಹ ನಿರ್ಮಿಸಿ ಅನಾಥ ಮಕ್ಕಳಿಗೆ ಶಿಕ್ಷಣವನ್ನು ಸಹ ಕಲ್ಪಿಸಿ ಅವರ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರೇರೇಪಿಸುತ್ತೇನೆ ಎಂದರು.
ಇದನ್ನು ಓದಿದ್ದೀರಾ..? ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್ಗೆ ತೀವ್ರ ತೊಂದರೆಯಾಗುತ್ತಿದೆ
ಈ ಸಂದರ್ಭದಲ್ಲಿ ಇಸ್ಲಾಮಿಕ್ ಚಿಂತಕ ಉಮರ್ ಷರೀಫ್, ಮುಸ್ಲೀಂ ಕಮಿಟಿ ಕೋಲಾರ ಜಿಲ್ಲಾ ಅಧ್ಯಕ್ಷ ಜಮಾಲ್, , ಮೊಹ್ಮದ್ ಉಮ್ರಿ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ವೇಣು, ವೆಂಕಟೇಶ್, ಶಿವ ಕುಮಾರ್, ಬಾಬು, ಅಮೀರ್ ಜಾನ್, ರೆಹಮಾನ್ ಖಾನ್ ಉಮ್ರಿ, ಅಬ್ದುಲ್ ಕದೀರ್, ಮಥೀನ್, ಮುಜಾಹಿದೀನ್, ಹಾಗೂ ಅನೇಕ ಮುಖಂಡರು ಗಣ್ಯರು ಉಪಸ್ಥಿತರಿದ್ದರು.





