ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಂದೇ ದಿನದಲ್ಲಿ 25ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೈ,ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ನಡೆದಿದೆ.
ನಗರದ ವಾರ್ಡ್ ನಂಬರ್ 14 ಖೂನಿ ಮಸೀದಿ, ತಿಮ್ಮಾಪೂರಪೇಟೆ, ಬೇರೂನ್ ಕಿಲ್ಲಾ ಸೇರಿ ಕೆಲವೆಡೆ ಗುರುವಾರ ಒಂದೇ ದಿನ 25ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು ಅವರೆಲ್ಲರೂ ಸ್ಥಳೀಯ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದು ನಿನ್ನೆ ಸಂಜೆ 15ಕ್ಕೂ ಹೆಚ್ಚು ಗಾಯಗೊಂಡಿರುವವರು ರಿಮ್ಸ್ ಆಸ್ಪತ್ರೆಗೆ ಏಕಕಾಲಕ್ಕೆ ಬಂದಿದ್ದು ತುರ್ತು ಚಿಕಿತ್ಸಾ ಕೊಠಡಿಯಲ್ಲಿ ವೈದ್ಯರನ್ನು ಚಿಂತೆಗೀಡು ಮಾಡಿದೆ.
ಬೀದಿ ನಾಯಿಗಳ ಹಿಂಡು ಬೆಳಿಗಿನ ಜಾವ ವಾಯು ವಿಹಾರಕ್ಕೆ ಹೋಗುವಾಗ ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಒಬ್ಬಂಟಿಯಾಗಿ ಒಡಾಡಲು ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳ ದಾಳಿಗೆ ಗುರಿಯಾಗಿದವರು ಮಕ್ಕಳು, ಮಹಿಳೆಯರು ಇದ್ದಾರೆ ಮನೆಯ ಮುಂದೆ ಆಟ ಆಡುವಾಗ ಹೊರಗೆ ತಿರುಗಾಡುವಾಗ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ ಎನ್ನಲಾಗಿದೆ.
ಈ ಹಿಂದೆಯೂ ಬೀದಿ ನಾಯಿಗಳ ಅಟ್ಟಹಾಸಕ್ಕೆ 15ಕ್ಕೂ ಹೆಚ್ಚು ಜನ ಒಂದೇ ದಿನ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು ಮಹಾನಗರ ಪಾಲಿಕೆಯಿಂದ ಹೊರ ರಾಜ್ಯದ ತಂಡದಿಂದ ಬೀದಿ ನಾಯಿಗಳ ಕಾರ್ಯಚರಣೆ ಮಾಡಿ ಸೆರೆ ಹಿಡಿಯಲಾಗಿತ್ತು. ಕೆಲ ದಿನಗಳಿಂದ ನೆಮ್ಮದಿಯಿಂದ ಇದ್ದ ಜನರು ಈಗ ಪುನಃ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಪಾಲಿಕೆಗೆ ತಲೆನೋವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಳೆಯ ಡಿಡಿಪಿಐ ಕಚೇರಿಯಲ್ಲಿ ಬೆಂಕಿ ಅವಘಡ; ಹಳೆಯ ದಾಖಲೆ ಭಸ್ಮ
ರಿಮ್ಸ್ ಆಸ್ಪತ್ರೆಗೆ ಎಸ್ ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ನೀಡಿದರು. ಬೀದಿ ನಾಯಿಗಳ ದಾಳಿಯಿಂದ ಒಳಗಾದ ಸಂತ್ರಸ್ಥರಿಗೆ ಸರ್ಕಾರವೆ ಉತ್ತಮ ಚಿಕಿತ್ಸೆ ನೀಡಿ ಪರಿಹಾರ ನೀಡಬೇಕು. ಅನೇಕ ತಿಂಗಳಿನಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜಿಲ್ಲಾಡಳಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮೊಹಮ್ಮದ್ ಶಫಿ, ಮುಷ್ತಾಕ್ ಅಹಮದ್ ಮತ್ತಿತರರು ಇದ್ದರು.





