ಕುಮಾರಣ್ಣ, ಪದೇ ಪದೇ ಯಾಕೆ ನನ್ನ ಹಾಸನದ ಶಾಸಕ ಅಂತ ಕರೀತೀರಾ, ನಂಗೆ ಹೆಸರಿಲ್ವಾ?: ಶಿವಲಿಂಗೇಗೌಡ

Date:

  • ‘ಯಾಕಣ್ಣಾ ನಾವು ನಿಮಗೆ ಕುಮಾರಣ್ಣಾ ಅಂತ ಗೌರವ ಕೊಟ್ಟು ಮಾತನಾಡಲ್ವೇ?’
  • ಕೊನೆಗೆ ಕುಮಾರಸ್ವಾಮಿ ಬಾಯಲ್ಲಿ ತಮ್ಮ ಹೆಸರು ಹೇಳಿಸಿಕೊಂಡ ಶಿವಲಿಂಗೇಗೌಡ

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರ ನಡುವಿನ ಆತ್ಮೀಯತೆಯಲ್ಲಿ ಎಷ್ಟು ಬಿರುಕು ಬಿಟ್ಟಿದೆ ಎಂಬುದಕ್ಕೆ ಇಂದಿನ ಸದನ ಸಾಕ್ಷಿಯಾಯಿತು.

ಒಂದು ಕಾಲದಲ್ಲಿ ಎಚ್‌ ಡಿ ಕುಮಾರಸ್ವಾಮಿ ಜೊತೆಗೆ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡಿದ್ದ ಕೆ ಎಂ ಶಿವಲಿಂಗೇಗೌಡರು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಗೆದ್ದು ಮತ್ತೆ ವಿಧಾನಸಭೆ ಪ್ರವೇಶಿಸಿರುವ ಶಿವಲಿಂಗೇಗೌಡ ಮೇಲೆ ಕುಮಾರಸ್ವಾಮಿ ಅವರಿಗೆ ಮುನಿಸು ಕಡಿಮೆಯಾದಂತೆ ಕಾಣುತ್ತಿಲ್ಲ.

ಶಿವಲಿಂಗೇಗೌಡರ ಮೇಲಿನ ಮುನಿಸು ಸದನದೊಳಗೆ ಕುಮಾರಸ್ವಾಮಿ ಅವರ ಮಾತಲ್ಲೂ ಅದು ಧ್ವನಿಸಿತು. ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಜೆಡಿಎಸ್‌ ಮಂಗಳವಾರ ನಿಲುವಳಿ ಸೂಚನೆ ಮಂಡಿಸಿತ್ತು. ಸಭಾಧ್ಯಕ್ಷ ಯು ಟಿ ಖಾದರ್‌ ಆ ನಿಲುವಳಿಯನ್ನು 69ಕ್ಕೆ ಕನ್ವರ್ಟ್‌ ಮಾಡಿ ಇಂದು ಮಧ್ಯಾಹ್ನದ ಕಲಾಪದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಮಾರಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ ತಮ್ಮ ಮಾತಿನ ಮಧ್ಯೆ, “ಪಾಪ, ಹಾಸನದ ಶಾಸಕರೊಬ್ಬರು ನಿನ್ನೆ ಈ ಬಗ್ಗೆ ಹೇಳುತ್ತಿದ್ದರು” ಎನ್ನುತ್ತಿದ್ದಂತೆ ಶಿವಲಿಂಗೇಗೌಡರು ಮಧ್ಯ ಪ್ರವೇಶಿಸಿ, “ಯಾಕಣ್ಣಾ ನಾವು ನಿಮಗೆ ಗೌರವ ಕೊಟ್ಟು ಮಾತನಾಡುವುದಿಲ್ಲವೇ? ನಿನ್ನೆ ಕೂಡ ಮಾಧ್ಯಮಗಳ ಮುಂದೆ ಹಾಸನ ಶಾಸಕರು ಎಂದು ಕರೆದಿದ್ದೀರಿ. ಯಾಕೆ ನಮಗೆ ಹೆಸರು ಇಲ್ಲವಾ? ನಾವು ಬಡವರ ಮಕ್ಕಳು. ಹೇಗೆಗೋ ಬೆಳೆದು ಬಂದಿದ್ದೀವಿ. ರೈತನ ಮಗನಾಗಿ ಬಂದಿರುವೆ ಹೆಸರು ಹಿಡಿದು ಕರೆಯಿರಿ” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು

ಮುಂದುವರಿದು, “ಭೂಮಿ ಮೇಲೆ ಹೆಸರು ಇಲ್ಲದೇ ಬಂದಿಲ್ಲ. ನನ್ನ ಹೆಸರು ಶಿವಲಿಂಗೇಗೌಡ ಅಂತ. ನಿಮಗೆ 10 ಲಕ್ಷ ಜನ ಫಾಲೋವರ್ಸ್‌ ಇರಬಹುದು. ನನಗೂ ಎರಡು ಲಕ್ಷ ಜನ ಇದ್ದಾರೆ. ನನ್ನ ಹತ್ರ ಸೆಲ್ಫಿ ತೆಗೆಸಿಕೊಂಡವರೇ ಐದು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಯಾಕೆ ನನಗೆ ಹಾಸನ ಶಾಸಕ ಎಂದು ಕರೀತೀರಿ. ವಿಶ್ವಾಸ ಇತ್ತು ಅಷ್ಟು ದಿನ ನಿಮ್ಮ ಜೊತೆ ಇದ್ದೆ. ವಿಶ್ವಾಸ ಇಲ್ಲದ ಮೇಲೆ ನಾನು ಈ ಕಡೆ ಬಂದೆ. ನಿಮ್ಮನ್ನು ಎರಡು ಬಾರಿ ವಿಶಾಲವಾಗಿ ನಾವು ಮುಖ್ಯಮಂತ್ರಿ ಮಾಡಲಿಲ್ಲವೇ? ನಿಮಗೆ ನಾವು ಸಹಾಯ ಮಾಡಿಲ್ಲವೇ? ಪದೇ ಪದೇ ಹಾಸನ ಶಾಸಕ ಎಂದು ಯಾಕೆ ಕರೆಯುತ್ತೀರಿ? ನಾವು ನಿಮಗೆ ಎಂದಾದರೂ ಏಕವಚನದಲ್ಲಿ ಮಾತನಾಡಿಸ್ತೀವಾ?” ಎಂದು ಹಾಸ್ಯವಾಗಿಯೇ ಮಾತನಾಡಿದರು.

ಕೊನೆಗೆ ಕುಮಾರಸ್ವಾಮಿ “ನೋಡ್ರೀ ಶಿವಲಿಂಗೇಗೌಡರೇ..” ಎಂದು ಮಾತು ಆರಂಭಿಸಿದರು. ಆ ಬಳಿಕ ಶಿವಲಿಂಗೇಗೌಡರು ತಮ್ಮ ಆಸನದಲ್ಲಿ ಕುಳಿತುಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...