ಕಬ್ಬು ಕಟ್ಟಿಂಗ್ ವೆಚ್ಚ, ಎಫ್ಆರ್ಪಿ ಹಾಗೂ ಸಾಗಾಣಿಕೆ ವೆಚ್ಚ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಬೇಕು. ಅಲ್ಲಿಯವರೆಗೆ ಸಕ್ಕರೆ ಕಾರ್ಖಾನೆಗಳು ಚಾಲು ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಅಕ್ಟೋಬರ್ 23ರಂದು ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್ ಬಳಿ ರಸ್ತೆತಡೆ ಚಳವಳಿ ಹಮ್ಮಿಕೊಂಡಿದೆ.
“ಕೇಂದ್ರ ಸರ್ಕಾರದ ಎಫ್ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ₹3,500 ನಿಗದಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸ ಮಾಡುವುದನ್ನು ತಡೆಗಟ್ಟಿ ಮುಖ್ಯ ಗೇಟಿನಲ್ಲಿ ತೂಕದ ಮಾಪನ((ವೆ ಬ್ರಿಜ್) ಹಾಕಿ, ರೈತರು ಎತ್ತಿನ ಬಂಡಿ, ಟ್ಯ್ರಾಕ್ಟರ್, ಲಾರಿಗಳಲ್ಲಿ ತರುವ ಕಬ್ಬನ್ನು ರೈತರ ಸಮ್ಮುಖದಲ್ಲಿಯೇ ತೂಕ ಮಾಡಿ ಗಾಡಿಗಳನ್ನು ಕಾರ್ಖಾನೆಗಳ ಒಳಗಡೆ ಕಳುಹಿಳಿಸಬೇಕು” ಎಂದು ಒತ್ತಾಯಿಸಲಿದ್ದಾರೆ.
“ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುವುದನ್ನು ತಡೆಗಟ್ಟಲು 12, 13 ತಿಂಗಳ ಒಳಗಾಗಿ ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡಬೇಕು. ತಡಮಾಡಿ ಕಬ್ಬು ಕಟಾವು ಮಾಡಿದರೆ ಕಬ್ಬು ಬೆಂಡು ಬಂದು ಸಕ್ಕರೆ ಅಂಶ ಕಮ್ಮಿಯಾಗಿ ರೈತರಿಗೆ ಅನ್ಯಾಯವಾಗುತ್ತದೆ. ರೈತರ ಸಮ್ಮುಖದಲ್ಲಿ ಸಕ್ಕರೆ ಇಳುವರಿ ತೆಗೆಯಬೇಕು. ಪ್ರತಿ 15 ದಿನಕ್ಕೊಮ್ಮೆ ಸಕ್ಕರೆ ಇಳುವರಿ ತೆಗೆಯಬೇಕು. ಕಬ್ಬು ಕಾಟಾವು ಮಾಡಿ ತೂಕ ಮಾಡಿದ 14 ದಿನದ ಒಳಗಾಗಿ ರೈತರ ಖಾತೆಗೆ ಹಣ ಪಾವತಿಸಬೇಕು. ಕಬ್ಬಿನ ಉಪ ಉತ್ಪನ್ನಗಳಾದ ಮೋಲಾಸಸ್, ಕಾಕಂಬಿಕ, ಎಥಿನಾಲ್, ಡಿಸ್ಟಲರಿಸ್, ವಿದ್ಯುತ್, ಬಯೋ ಕಾಂಪೋಸ್ಟ್ ಪಶು ಆಹಾರ ಬಗಾಸಸ್ ಸೇರಿದಂತೆ ಇತರೆ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಪಾಲು ಕೋಡಬೆಕು” ಎಂದು ಆಗ್ರಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ರ್ಯಾಲಿ ನಡೆಸಲು ತ್ರಿಕೋನ ಸ್ಪರ್ಧೆ: ಆರೆಸ್ಸೆಸ್ ಬಳಿಕ ದಲಿತ ಪ್ಯಾಂಥರ್ಸ್, ಭೀಮ್ ಆರ್ಮಿ ಮನವಿ
ರೇಣುಕಾ ಸಕ್ಕರೆ ಕಾರ್ಖಾನೆ, ಕೆಪಿಆರ್ ಚಿಣಮಗೆರಿ ಸಕ್ಕರೆ ಕಾರ್ಖಾನೆ, ಉಗಾರ ಶುಗರ್ಸ್ ಸಕ್ಕರೆ ಕಾರ್ಖಾನೆ, NSL ಸನೂರು ಸಕ್ಕರೆ ಕಾರ್ಖಾನೆಗಳು ಹಿಂದಿನ ದಿನದಲ್ಲಿಯೂ ಹೆಚ್ಚುವರಿ ಕಟಿಂಗ್ ವೆಚ್ಚಗಳನ್ನು, ಕಟ್ಮಾಡಿದ ಬಾಕಿ ಹಣವನ್ನು ಕಬ್ಬು ಬೆಳೆಗಾರರ ಖಾತೆಗೆ ಹಾಕಬೇಕು. ಅಲ್ಲದೆ ಜಿಲ್ಲಾಧಿಕಾರಿಗಳು, ಫುಡ್ ಡಿಡಿ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಸಮ್ಮುಖದಲ್ಲಿ ಸಭೆ ಕರೆಯಲು ಜಿಲ್ಲಾಡಳಿತ ಸಭೆ ನಡೆಸಬೇಕು” ಎಂದು KSFF ಕಲಬುರಗಿ ಜಿಲ್ಲಾ ಸಂಚಾಲಕ ಶರಣಬಸಪ್ಪಾ ಮಮಶೆಟ್ಟಿ ಒತ್ತಾಯಿಸಲಿದ್ದಾರೆ.





