ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ ಗ್ರಾಮದ ಹೊರವಲಯದಲ್ಲಿರುವ ಹಳೆಯ ಬಾವಿಯಲ್ಲಿ ಮಂಗಳವಾರ ಎರಡು ಮೃತದೇಹಗಳು ಪತ್ತೆಯಾಗಿದ್ದು, ಕೌಟುಂಬಿಕ ಮನಸ್ತಾಪದಿಂದ ತಾಯಿ-ಮಗಳು ಅಸಹಜ ಸಾವಿಗೆ ಒಳಗಾಗಿರುವ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ತಡಕಲ ಗ್ರಾಮದ ನಿವಾಸಿ ಜಗದೇವಿ ಶರಣಪ್ಪ ಹಂಗರಗಿ(46) ಹಾಗೂ ಅವರ ಪುತ್ರಿ ಮಧುಮತಿ ಶರಣಪ್ಪ ಹಂಗರಗಿ(19) ಮೃತರು.
ಮಧುಮತಿಯು ಆಳಂದದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಿಕಿಯಾಗಿ ಕೆಲಸ ಮಾಡುತ್ತಿದರು. ಪುಣೆಯ ಯುವಕನೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಈ ಸಂಬಂಧವು ಮನೆಯಲ್ಲಿ ಮನಸ್ತಾಪಕ್ಕೆ ಕಾರಣವಾಗಿದ್ದು, ರಾತ್ರಿ ವೇಳೆ ಬಯಲು ಶೌಚಕ್ಕೆ ತೆರಳಿದ್ದ ಮಗಳು ಸಮೀಪದ ಬಾವಿಗೆ ಬಿದ್ದಿದ್ದಾಳೆ. ಮಗಳ ಹಿಂದೆಯೇ ಧಾವಿಸಿದ ತಾಯಿಯೂ ಕೂಡ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಅಪ್ರಾಪ್ತನಿಂದ ಮಹಿಳೆಯ ಕೊಲೆ: ಆರೋಪಿಯ ವಿರುದ್ಧ ದೂರು ದಾಖಲು
ಪತಿ ಹಾಗೂ ನೆರೆಹೊರೆಯವರು ತಾಯಿ ಮಗಳಿಗಾಗಿ ರಾತ್ರಿ ವೇಳೆ ಹುಡಕಾಟ ನಡೆಸಿದರು. ಬೆಳಿಗ್ಗೆ ಮನೆ ಸಮೀಪದಲ್ಲಿನ ಬಾವಿಯಲ್ಲಿ ತಾಯಿ, ಮಗಳ ಶವ ಪತ್ತೆಯಾಗಿದೆ. ಬಳಿಕ ಶವ ಹೊರ ತೆಗೆದು ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






