ಅಂಬೇಡ್ಕರ್ ಆಶಯಗಳ ಪ್ರತಿಪಾದಕ, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ಕೃತ್ಯವನ್ನು ಖಂಡಿಸಿ ಗುರುವಾರ ಅಂಬೇಡ್ಕರ್ ಯುವಸೇನೆ
ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.
ಸಂಜೆ 4-30ಕ್ಕೆ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ನಡೆಯುವ ಈ ಪ್ರತಿಭಟನೆಯಲ್ಲಿ ಸನಾತನಿ ವಕೀಲ ರಾಕೇಶ್ ಕಿಶೊರ್ರವರ ಪ್ರತಿಕೃತಿ ದಹಿಸುವ ಮೂಲಕ ಭಾರತದ ಸಂವಿಧಾನದ ತಾತ್ವಿಕ ಮೂಲಭಾಗ ಮತ್ತು ನ್ಯಾಯಾಂಗದ
ಗೌರವದ ಮೇಲೆ ದಾಳಿಯನ್ನು ಖಂಡಿಸಲಾಗುವುದು. ಬಲಪಂಕ್ತಿಯ ಬೆಂಬಲಿಗರು ಸನಾತನಿ ವಕೀಲನ ಬೆಂಬಲಕ್ಕೆ ನಿಂತು ನ್ಯಾಯದ ಪರವಾಗಿ ನಿಲ್ಲದೆ, ಅನ್ಯಾಯವನ್ನು ಪ್ರೋತ್ಸಾಹಿಸುವಂತೆ ವರ್ತಿಸುವುದು ದೇಶದ ದುರಂತವೆಂದು ಗಣೇಶ್ ನೆರ್ಗಿ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಉಳಿವಿಗಾಗಿ ನಡೆಯುವ ಈ ಪ್ರತಿಭಟನೆಯಲ್ಲಿ ನಾಡಿನ ಎಲ್ಲಾ ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿಮಾಡಿದ್ದಾರೆ.





